ಕೆಲವೇ ದಿನಗಳಲ್ಲಿ ‘ಕುದ್ಕನ ಮದ್ಮೆ’
Team Udayavani, Sep 12, 2019, 5:18 AM IST
ಖ್ಯಾತ ನಿರ್ದೇಶಕ ಎ.ವಿ.ಜಯ ರಾಜ್ ನಿರ್ದೇಶನದ ಕೋಸ್ಟಲ್ವುಡ್ನಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ “ಕುದ್ಕನ ಮದ್ಮೆ’ ಸಿನೆಮಾ ಶೂಟಿಂಗ್ ಆಗಿ, ಡಬ್ಬಿಂಗ್ ಪೂರ್ಣಗೊಳಿಸಿ ಬಿಡುಗಡೆಯ ತವಕದಲ್ಲಿದೆ.
ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ಕಾರ್ತಿಕ್ ರಾವ್, ಜೀವನ್ ಉಳ್ಳಾಲ್ ಸೇರಿದಂತೆ ಹಲವು ಸ್ಟಾರ್ ನಟರು ಸಿನೆಮಾ ದಲ್ಲಿ ದ್ದಾರೆ. ಪೃಥ್ವಿ ಅಂಬರ್, ದೇವಿಪ್ರಕಾಶ್ ಹಾಗೂ ಶೀತಲ್ ನಾಯಕ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಕ್ಯಾಮರಾದಲ್ಲಿ ಮಹಾಬಲೇಶ್ವರ ಹೊಳ್ಳ, ಸಂಗೀತದಲ್ಲಿ ರಾಹುಲ್ ಕೈಜೋಡಿಸಿದ್ದಾರೆ. ಒಂದೆಡೆ ಮಳೆ ಹಾಗೂ ಬಿಸಿಲು ಒಮ್ಮೆಲೇ ಕಾಣಿಸಿಕೊಂಡಾಗ ತುಳುನಾಡಿನಲ್ಲಿ ಪ್ರಚಲಿತದಲ್ಲಿರುವ ಮಾತೆಂದರೆ ಕುದ್ಕಕ್ ಮದಿಮೆ ಎಂದು. ಹೀಗಾಗಿ ತುಳುನಾಡಿನಾದ್ಯಂತ ಈ ಮಾತು ಬಹು ಜನಜನಿತ. ಆಗುವ ಹೋಗುವ ಮಾತೆಲ್ಲ ಕುದ್ಕನ ಮದ್ಮೆಯ ಹೆಸರೇಳಿದಾಗ ಆಗುವುದಿಲ್ಲ ಎಂದೂ ಕೂಡ ಮಾತನಾಡುವುದಿದೆ.
ವಿಶೇಷವೆಂದರೆ ತುಳುನಾಡಿನ ಪ್ರೀತಿಯ ಹೆಸರುಗಳನ್ನೇ ಟೈಟಲ್ ಆಗಿಟ್ಟುಕೊಂಡು ಸಿನೆಮಾ ಮಾಡುವ ಕೋಸ್ಟಲ್ವುಡ್ನಲ್ಲಿ ಇಂತಹ ಪಂಚಿಂಗ್ ಟೈಟಲ್ ಜನರ ಆಸಕ್ತಿಗೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
Gangolli: ಸ್ವಯಂ ಪ್ರೇರಣೆಯಿಂದ ಚಿತ್ರ ಕಲಾವಿದೆಯಾದ ತುಳಸಿ
ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ
ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ
Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್ಗೆ ಮತಹಾಕಲಿ: ಯೋಗೇಂದ್ರ ಯಾದವ್