ಶೋಷಿತರ ಬೆಳಕಾಗಿ ಉದಯಿಸಿದ ಮಹಾಪುರುಷ


Team Udayavani, Sep 13, 2019, 5:25 AM IST

q-38

ಸಮಾಜದಲ್ಲಿ ಬಲವಾಗಿ ಬೇರೂರಿದ್ದ ಸಾಮಾಜಿಕ ಅನಿಷ್ಟಗಳನ್ನು ತೊಡೆದು ಹಾಕಲು ಉದಿಸಿದ ಹಲವಾರು ಸಮಾಜ ಸುಧಾರಕರಲ್ಲಿ ನಾರಾಯಣ ಗುರುಗಳು ಒಬ್ಬರು.

ಸಮಾಜದಲ್ಲಿ ಆಳವಾಗಿ ಬೇರೂರಿರುವ ಯಾವುದೇ ಅನಿಷ್ಟಗಳನ್ನು ತೊಡೆದು ಹಾಕುವುದು ಅಷ್ಟು ಸುಲಭವಲ್ಲ. ಒಬ್ಬ ಶೋಷಣೆಗೆ ಒಳಗಾದ ವ್ಯಕ್ತಿ ಮತ್ತು ಆತನ ಮನಸ್ಥಿತಿಯನ್ನು ಅರಿಯುವುದು ಹಾಗೂ ಶೋಷಿಸುವ ವ್ಯಕ್ತಿಯಲ್ಲಿನ ದರ್ಪ, ಅಹಂಕಾರಗಳ ವಿರುದ್ಧ ಶೋಷಿತ ವರ್ಗವನ್ನು ಸಿದ್ಧಗೊಳಿಸುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಜಾತಿ ಎನ್ನುವುದು ಮೈಗಂಟಿದ ಚರ್ಮವಾಗಿದ್ದ ಅಂದಿನ ಕಾಲಘಟ್ಟದಲ್ಲಿ, ದೇವಸ್ಥಾನ ಪ್ರವೇಶ ಮತ್ತು ಶಿಕ್ಷಣ ಎಂಬುದು ಮೇಲ್ವರ್ಗದ ಸ್ವತ್ತು ಎಂದು ನಂಬಿದ ಮತ್ತು ಬಲವಂತವಾಗಿ ನಂಬಿಸಲ್ಪಟ್ಟ ಆ ಸಮಯದಲ್ಲಿ ‘ನಾಣು’ ಎಂದು ಕರೆಯಲ್ಪಡುತ್ತಿದ್ದ ನಾರಾಯಣ ಗುರುಗಳು ಹುಟ್ಟಿದರು.

ಪ್ರತಿಯೊಂದು ದಮನಿತ ಸಮುದಾಯವು ಸೂಕ್ತವಾದ ಶಿಕ್ಷಣವನ್ನು ಪಡೆದರೆ ಮತ್ತು ಆ ಮೂಲಕ ಸಮಾಜವು ಮೌಡ್ಯಗಳಿಂದ ಮುಕ್ತವಾಗ ಬೇಕಾದರೆ ಹಾಗೂ ಇವುಗಳೆಲ್ಲದರ ಮೂಲಕ ಆತ ಹೊಸ ಆಲೋಚನೆಗಳಿಂದ ಕೂಡಿದ ಸ್ವತಂತ್ರ ವ್ಯಕ್ತಿ ಎನಿಸಿಕೊಳ್ಳಬೇಕಾದರೆ ಅದು ಸಮಯೋಚಿತ ಶಿಕ್ಷಣದಿಂದ ಮಾತ್ರ ಸಾಧ್ಯ. ಅದಕ್ಕಾಗಿಯೇ ‘ಶಿಕ್ಷಣದಿಂದ ಸ್ವತಂತ್ರರಾಗಿರಿ’ ಎಂಬ ಎಚ್ಚರಿಕೆ ನೀಡಿ ಹಲವಾರು ಕೆಳ ಜಾತಿಯವರಿಗೆ ವೇದಾಭ್ಯಾಸ ಮಾಡಿಸಿದವರು ನಾರಾಯಣ ಗುರುಗಳು.

ಹೀಗೆ ಶೈಕ್ಷಣಿಕ ಕ್ರಾಂತಿಯ ಕಿಡಿಯನ್ನು ಹೊತ್ತಿಸಿದ ಗುರುಗಳು ಕೆಳಜಾತಿಯವರು ಅದರಲ್ಲೂ ಈಳವರಿಗಾಗಿ (ಬಿಲ್ಲವ ಜನಾಂಗ) ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಎಲ್ಲಾ ಧರ್ಮ ಪಂಗಡದ ಮಕ್ಕಳಿಗೆ ಸಮಾನ ಶಿಕ್ಷಣ ನೀಡಿದಾಗ ಮಾತ್ರ ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಕೊಂಡು ವರ್ಗ ಭೇದವಿಲ್ಲದ ಸಮಾಜ ಸೃಷ್ಟಿಯಾಗಬಲ್ಲದು ಎಂಬ ಸೂಕ್ಷ್ಮ ಜ್ಞಾನ ಅವರಿಗಿತ್ತು.

‘ಸಂಘಟನೆಯಿಂದ ಬಲಿಷ್ಠರಾಗಿರಿ’ ಎಂಬ ನಾರಾಯಣ ಗುರುಗಳ ಧ್ಯೇಯ ವಾಕ್ಯದಂತೆ ಒಬ್ಬ ವ್ಯಕ್ತಿ ಯಾವುದೇ ಸಹಕಾರವಿಲ್ಲದೆ ಬೆಳೆದಾಗ ಆತನನ್ನು ಹೇಗೆ ಬೇಕಾದರೂ ಲಯಗೊಳಿಸಬಹುದು. ಆದರೆ ಆ ವ್ಯಕ್ತಿ ಒಗ್ಗಟ್ಟಿನಿಂದ ಇದ್ದರೆ ಯಾವ ಶಕ್ತಿಯೂ ಆತನನ್ನು ಮುಟ್ಟಲಾರದು. ತಾನು ಪಡೆಯಬೇಕಾದ ತನ್ನ ಹಕ್ಕಿನ ರಕ್ಷಣೆ ಮಾಡುವ ಮತ್ತು ಆ ಮೂಲಕ ತನ್ನ ಬೇಡಿಕೆ ಏನಿದೆಯೋ ಅದನ್ನು ಸರಕಾರದ ಮೂಲಕ ಪಡೆದುಕೊಳ್ಳುವ ಹಕ್ಕು ಸಂಘಟನೆಯಿಂದ ನಿರಾಯಾಸವಾಗಿ ಬರಬಹುದು. ಹಾಗಾಗಿಯೇ ಗುರುಗಳು ಸಂಘಟನೆಯ ಮುಖಾಂತರವೇ ಕೃಷಿ, ಕೈಗಾರಿಕೆ, ಉದ್ದಿಮೆ, ತಾಂತ್ರಿಕ ಶಿಕ್ಷಣ ಮೊದಲಾದವುಗಳಿಗೆ ಹೆಚ್ಚಿನ ಮಹತ್ವ ನೀಡಿದರು. ಸ್ವಾತಂತ್ರ್ಯವು ಶಿಕ್ಷಣದಿಂದ ದೊರೆಯುತ್ತದೆ.ಸಂಘಟನೆ ಯಿಂದ ಶಕ್ತಿ ದೊರೆಯುತ್ತದೆ ಎಂದರು. ಇದು ಎಲ್ಲಾ ಜಾತಿ ಸಮುದಾಯಗಳಿಗೆ ಸಲ್ಲುವ ಸಾರ್ವಕಾಲಿಕ ಸತ್ಯ.

ಅಂದಿನ ಸಮಾಜದಲ್ಲಿ ಇದ್ದ ಮತ್ತೂಂದು ಪಿಡುಗು ಎಂದರೆ ದೇವಸ್ಥಾನ ಪ್ರವೇಶ ನಿಷೇಧ. ಬರೇ ಮೇಲ್ವರ್ಗಕ್ಕೆ ಮಾತ್ರ ಸೀಮಿತವಾಗಿದ್ದ ಮತ್ತು ಇಂತಹ ಕಡೆಗಳಲ್ಲೆಲ್ಲಾ ಕೆಳ ವರ್ಗಗಳನ್ನು ತೀರಾ ನಿಕೃಷ್ಟವಾಗಿ ನಡೆಸಿಕೊಳ್ಳುವ ಪರಿಯನ್ನು ಗಮನಿಸಿದ ನಾರಾಯಣ ಗುರುಗಳು ದೇವರ ಭಯ ಎಂಬುದು ಜ್ಞಾನದ ವಿಕಾಸಕ್ಕೆ ಕಾರಣವಾಗ ಬೇಕು.ಪರಿಶುದ್ಧವಾದ ಮನಸ್ಸಿನಿಂದ ಮಾಡಿದ ಭಕ್ತಿ ಭಗವಂತನನ್ನು ತಲುಪಬಲ್ಲದು.ಅದಕ್ಕೆ ಮೇಲ್ವರ್ಗದ ಮತ್ತು ಮೇಲ್ವರ್ಗದವರಿಂದ ಬಂಧಿಸಲ್ಪಟ್ಟಿರುವ ದೇವರೇ ಬೇಕಾಗಿಲ್ಲ ಮತ್ತು ಅಲ್ಲಿಗೆ ಹೋಗಬೇಕಾಗಿಯೂ ಇಲ್ಲ ಎಂದು ಸ್ವತಃ ತಾವೇ ದೇವಾಲ ಯವನ್ನು ಸ್ಥಾಪಿಸುವ ಮೂಲಕ ಭಕ್ತಿ ಚಳವಳಿಗೆ ನಾಂದಿ ಹಾಡಿದರು.ಅಲ್ಲದೆ ಕೆಲವು ದೇಗುಲಗಳಲ್ಲಿ ‘ಸತ್ಯ, ಕರ್ತವ್ಯ, ದಯೆ ಮತ್ತು ಪ್ರೀತಿ’ ಎಂದು ಬರೆಸುವ ಮುಖಾಂತರ ಸ್ವತಃ ತಾವೇ ಗುರುವಾಗಿ ನಿಂತು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಪರಿಕಲ್ಪನೆ ಮೂಡಿಸಿ ಅಂದಿನಿಂದ ಇಂದಿನವರೆಗೂ ಒಬ್ಬ ಗುರುವರೇಣ್ಯರಾಗಿ, ಸ್ವಾಮಿಯಾಗಿ, ದೇವರಾಗಿ, ಅದ್ಭುತ ಶಕ್ತಿಯಾಗಿ ಕಾಯುತ್ತಾ ಬಂದವರು.

ಬದುಕಿನಲ್ಲಿ ದುಃಖರಹಿತರಾಗಿ ಬಾಳಬೇಕಾದರೆ ದೇಶ ಸೇವೆ ಮತ್ತು ಈಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಹಾಗೆಯೆ ಮೋಕ್ಷವನ್ನು ಕಂಡುಕೊಳ್ಳಬೇಕು ಎಂದು ಬೋಧಿಸಿರುವ ಉಪದೇಶಗಳ ಗಣಿಯಾಗಿರುವ ನಾರಾಯಣ ಗುರುಗಳು ನಮ್ಮೊಂದಿಗೆ ಇಲ್ಲವಾದರೂ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸರಳ, ನಿಷ್ಕಲ್ಮಶ ವ್ಯಕ್ತಿತ್ವ ಬೆಳೆಸಿಕೊಂಡು ಸುಂದರವಾದ ಜೀವನ ನಡೆಸೋಣ.ಅವರ ಮಾನವತಾವಾದವನ್ನು ಮರೆಯದಿರೋಣ.

(ಇಂದು ನಾರಾಯಣ ಗುರುಗಳ ಜಯಂತಿ)

ವಾಸಂತಿ ಅಂಬಲಪಾಡಿ

ಟಾಪ್ ನ್ಯೂಸ್

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.