ಮಕ್ಕಳಿಗೆ ಪಠ್ಯದ ಜತೆ ಪರಿಸರ ಪಾಠ
ಮಜ್ಜಿಗೇರದೊಡ್ಡಿ ಶಾಲೆಯಲ್ಲಿ ಕೈತೋಟ ನಿರ್ಮಾಣ ಮಕ್ಕಳಿಂದಲೇ ಗಿಡಗಳ ಪೋಷಣೆ
Team Udayavani, Sep 30, 2019, 4:55 PM IST
ದೇವದುರ್ಗ: ತಾಲೂಕಿನ ಕೆ. ಇರಬಗೇರಾ ಕ್ಲಸ್ಟರ್ ವ್ಯಾಪ್ತಿಯ ಮಜ್ಜಿಗೇರದೊಡ್ಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಸಿರು ಪರಿಸರದಿಂದ ಗಮನ ಸೆಳೆಯುತ್ತಿದೆ.
2009-10ನೇ ಸಾಲಿನಲ್ಲಿ ಆರಂಭವಾಗಿರುವ ಈ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 52 ಮಕ್ಕಳು ದಾಖಲಾತಿ ಪಡೆದಿದ್ದಾರೆ. ಆರಂಭದಲ್ಲಿ ಒಬ್ಬರೇ ಶಿಕ್ಷಕರು ಮರದ ಕೆಳಗೆ ಮಕ್ಕಳಿಗೆ ಪಾಠ ಬೋಧಿಸುತ್ತಿದ್ದರು. 2014ರಲ್ಲಿ ಎರಡು ಕೋಣೆಗಳನ್ನು ನಿರ್ಮಿಸಲಾಯಿತು. ಶಾಲಾ ಮುಂಭಾಗದಲ್ಲಿ ಬಸವಣ್ಣ, ಮಹರ್ಷಿ
ವಾಲ್ಮೀಕಿ ಅವರ ಚಿತ್ರಗಳನ್ನು ಬಿಡಿಸಲಾಗಿದೆ.
ಕೈ ತೋಟ: ಶಾಲೆ ಆವರಣದಲ್ಲಿ ಕೈ ತೋಟ ನಿರ್ಮಿಸಲಾಗಿದೆ. ಇಲ್ಲಿ ಬೆಳೆದ ತರಕಾರಿಯನ್ನು ಮಧ್ಯಾಹ್ನದ ಬಿಸಿ ಊಟಕ್ಕೆ ಬಳಸಲಾಗುತ್ತಿದೆ. ಶಾಲೆ ಆವರಣದಲ್ಲಿ ಹೊಂಗೆ, ಅರಳಿ ಮರ, ಬಸವನಪಾದ, ನುಗ್ಗೆ ಸೇರಿ ಇತರೆ ಗಿಡಗಳನ್ನು ಬೆಳೆಸಲಾಗಿದೆ.ಹಸಿರು ಪರಿಸರ ಮಕ್ಕಳ ಕಲಿಕೆಯಲ್ಲಿ ಆಸಕ್ತಿ ಮೂಡಿಸುತ್ತಿದೆ. ಆಟದ ಸಮಯದಲ್ಲಿ ಮಕ್ಕಳು ಗಿಡಗಳಿಗೆ ನೀರುಣಿಸಿ ಪೋಷಿಸುತ್ತಾರೆ. ಇನ್ನು ಶಾಲಾ ಆವರಣದ ಒಳಗೆ ದನಕರುಗಳು ಬರದಂತೆ ಗೇಟ್ ಅಳವಡಿಸಲಾಗಿದೆ. ಶಾಲೆ ರಜೆ ಅವಧಿಯಲ್ಲಿ ಮಕ್ಕಳ ಪಾಲಕರೇ ಗಿಡಗಳ ರಕ್ಷಣೆ ಮಾಡುತ್ತಿದ್ದಾರೆ. ಬಿಸಿಯೂಟಕ್ಕೆ ತಾಟು, ಗ್ಲಾಸ್ ಸೇರಿ ಇತರೆ ಸಾಮಗ್ರಿಗಳು ದಾನಿಗಳು
ನೀಡುವ ಮೂಲಕ ಶಾಲೆ ಪ್ರಗತಿಗೆ ಕೈಜೋಡಿಸಿದ್ದಾರೆ. ಶಾಲೆಯಲ್ಲಿ ಕೊಳವೆಬಾವಿ ಕೊರೆಸಲಾಗಿದೆ. ಮಧ್ಯಾಹ್ನ ಬಿಸಿಯೂಟ ಮತ್ತು ಕೈತೋಟಕ್ಕೆ ಗಿಡಮರಗಳಿಗೆ ಕೊಳವೆಬಾವಿ ನೀರು ಅನುಕೂಲವಾಗಿದೆ. ಬಳಕೆಯಾಗಿ ಉಳಿದ ನೀರು ನೇರವಾಗಿ ಕೈತೋಟಕ್ಕೆ ಹರಿದು ಹೋಗಲು ವ್ಯವಸ್ಥೆ ಮಾಡಲಾಗಿದೆ.
ಶಿಕ್ಷಕರಿಗಿಂತ ಮಕ್ಕಳ ಪಾಲಕರೇ ಶಾಲೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ ಎಂದು ಮುಖ್ಯ ಶಿಕ್ಷಕಿ ಭಾಗ್ಯ ತಿಳಿಸಿದರು. ಮಜ್ಜಿಗೇರದೊಡ್ಡಿ ಸರಕಾರಿ ಶಾಲೆಯಿಂದ ಪ್ರತಿ ವರ್ಷ ಮೊರಾರ್ಜಿ ವಸತಿ ಶಾಲೆಗೆ ಮಕ್ಕಳು ಆಯ್ಕೆಯಾಗುತ್ತಿದ್ದಾರೆ. ಪ್ರಸಕ್ತ ವರ್ಷ ನಾಲ್ಕು ಮಕ್ಕಳು ಮೊರಾರ್ಜಿ ವಸತಿ ಶಾಲೆಗೆ ಆಯ್ಕೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
MUST WATCH
ಹೊಸ ಸೇರ್ಪಡೆ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ