“ಭಾಷಾಜ್ಞಾನವ ಹೆಚ್ಚಿಸುವ ಯಕ್ಷಗಾನ ವಿಶೇಷಗಳಿಂದ ಕೂಡಿದ ಈ ಮಣ್ಣಿನ ಕಲೆ’


Team Udayavani, Oct 1, 2019, 5:44 AM IST

mannina-kale

ವಿದ್ಯಾನಗರ: ಭಾಷಾಜ್ಞಾನವನ್ನು ಹೆಚ್ಚಿಸುವ, ಇತಿಹಾಸದ ಕುರಿತಾದ ತಿಳಿವಳಿಕೆ ಮೂಡಿಸುವ, ಪೌರಾಣಿಕಥೆಗಳಿಗೆ ಮರುಜೀವ ನೀಡುವ ಮನೋರಂಜನೆಯ ಮಾಧ್ಯಮವಾದ ಯಕ್ಷಗಾನ ಗಾಯನ, ನರ್ತನ, ವಾದನ, ವೇಷಭೂಷಣ, ಮುಖವರ್ಣಿಕೆ, ಮಾತುಗಾರಿಕೆಗಳೆಂಬ ವಿಶೇಷತೆಗಳಿಂದ ಕೂಡಿದ ಈ ಮಣ್ಣಿನ ಕಲೆ ಎಂದುಕೊಲ್ಲಂಗಾನ ಮೇಳದ ಹಿರಿಯ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ್‌ ಶೆಟ್ಟಿ ಹೇಳಿದರು.

ಅವರು ಕೊಲ್ಲಂಗಾನ ಸುಬ್ರಹ್ಮಣ್ಯ ಯಕ್ಷಗಾನ ಕಲಾ ಸಂಘ( ಇದರ 32ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಲಾದ ಯಕ್ಷ ದಶ ವೈಭವ‌ವನ್ನು ತಂತ್ರವಿದ್ಯಾತಿಲಕ ಬ್ರಹ್ಮ ಶ್ರೀ ತಂತ್ರಿ ದಿ.ಅನಂತ ಪದ್ಮನಾಭ ಉಪಾಧ್ಯ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.

ಸಂಸ್ಕೃತಿಯೊಂದಿಗೆ ಹೊಸೆದುಕೊಂಡಿರುವ ಸಮರ್ಥವಾದ ಈ ಕಲಾರೂಪವನ್ನು ಜೀವಂತವಾಗಿಸುವಲ್ಲಿ ಹಾಗೂ ಯುವಪೀಳಿಗೆಗೆ ಯಕ್ಷಗಾನದ ಕುರಿತು ಒಲವು ಉಂಟಾಗುವಲ್ಲಿ ಇಂತಹ ಕಾರ್ಯಕ್ರಮಗಳು ಪ್ರಧಾನ ಪಾತ್ರ ವಹಿಸುತ್ತವೆ ಎಂದವರು ಹೇಳಿದರು. ಹಿಂದೆ ಪೌರಾಣಿಕ ಕಥೆಗಳಿಗೆ ಸೀಮಿತವಾಗಿದ್ದ ಯಕ್ಷಗಾನ ಇಂದು ಐತಿಹಾಸಿಕ, ಸಾಮಾಜಿಕ ಕಥೆಗಳನ್ನೂ ರಂಗಕ್ಕೆ ತರುತ್ತಿರುವುದು ಕಂಡುಬರುತ್ತದೆ. ಇದೊಂದು ಉತ್ತಮ ಬೆಳವಣಿಗೆ ಎಂದರು.

ಬಾಗಲಕೋಟೆ ಶ್ರೀ ವರದಹಸ್ತ ಶಿಕ್ಷಣ ಸಂಸ್ಥೆ ಮತ್ತಿಕಟ್ಟೆಯ ಅಧ್ಯಕ್ಷರಾದ ರಾಘವೇಂದ್ರ ಫತ್ತೇಪೋರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕೊಲ್ಲಂಗಾನದ ಶ್ರೀಚಕ್ರ ಆರಾಧಕ‌ ಬ್ರಹ್ಮ ಶ್ರೀ ತಂತ್ರಿ ಗಣಾಧಿರಾಜ ಉಪಾಧ್ಯಾಯ ಅಶೀರ್ವಚನ ನೀಡಿದರು.

ಶಿವಮೊಗ್ಗದ ಅಬಕಾರಿ ನಿರೀಕ್ಷಕ ಡಿ.ಎನ್‌.ಹನುಮಂತಪ್ಪ, ಜಯನಗರ- ಶಿವಮೊಗ್ಗದ ಪ್ರಮುಖ ಉದ್ಯಮಿಗಳಾದ ಚೇತನ್‌ ಕುಮಾರ್‌, ಜ್ಯೋತಿಷ್ಯರತ್ನ ಪೆರಿಯ ಕಲೊÂàಟ್‌ ಕುಞಂಬು ನಾಯರ್‌, ಜ್ಯೋತಿಷ್ಯರತ್ನ ಕೋಡೋತ್‌ ಸದಾನಂದ ನಾಯರ್‌, ಬದಿಯಡ್ಕ ಗ್ರಾ.ಪಂಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅದ್ಯಕ್ಷ ಶ್ಯಾಮ್‌ ಪ್ರಸಾದ್‌ ಮಾನ್ಯ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಯಕ್ಷಗಾನ ಗುರು ಶ್ರೀಧರ ಐತಾಳ್‌ ಪಣಂಬೂರು ಅವರನ್ನು ಗೌರವಿಸಲಾಯಿತು.

ಸಮೃದ್ಧ್ ಪುಣಿಂಚಿತ್ತಾಯ ಪೆರ್ಲ ಪ್ರಾರ್ಥನೆ ಹಾಡಿದರು. ಶರಣ್ಯ ಎಸ್‌.ಭಟ್‌ ಕೊಲ್ಲಂಗಾನ ಸ್ವಾಗತಿಸಿ, ದೀಕ್ಷಾ ವಂದಿಸಿದರು. ಕೊಲ್ಲಂಗಾನ ಮೇಳದ ಭಾಗವತರಾದ ಸತೀಶ ಪುಣಿಂಚಿತ್ತಾಯ ಕಾಯರಕ್ರಮ ನಿರೂಪಿಸಿದರು.

ಯಕ್ಷಗಾನ ಬಯಲಾಟ
ರಾಜ್ಯಪ್ರಶಸ್ತಿ ವಿಜೇತ ಜಯಶ್ರೀ ಟೀಚರ್‌ ಅವರ ನೇತƒತ್ವದಲ್ಲಿ ಕಲ್ಲಕಟ್ಟದ ಯಕ್ಷಚಿಣ್ಣರು ಅಂಗನ ವಾಡಿ ಪುಟಾಣಿ ಯಕ್ಷಗಾನ ತಂಡ ದಿಂದ ಜನಪದ ಲೋಕ ಪ್ರಶಸ್ತಿ ಪುರಸ್ಕೃತ ಯಕ್ಷನಾಟ್ಯಗುರು ಜಯರಾಮ ಪಾಟಾಳಿ ಪಡುಮಲೆ ರಚಿಸಿ ನಿರ್ದೇಶಿಸಿದ ಭಾರತ ದೇಶದ ಚರಿತ್ರೆ ಆಧಾರಿತ ನೂತನ ಯಕ್ಷಗಾನ ಪ್ರಸಂಗ ಜೈ ಭಾರತಾಂಬಾ ಬಯಲಾಟ ಜರಗಿತು.

ಟಾಪ್ ನ್ಯೂಸ್

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.