ಬರ್ತ್ ಡೇ ಸಂಭ್ರಮದಲ್ಲಿ ಸ್ನೇಹಿತನನ್ನೇ ಕೊಂದಿದ್ದ ಹಂತಕ ಸೆರೆ
Team Udayavani, Oct 13, 2019, 9:54 PM IST
ಬೆಳಗಾವಿ: ಬರ್ತ್ ಡೇ ಸೆಲೆಬ್ರೇಷನ್ ಮುಗಿಸಿ ಡ್ಯಾನ್ಸ್ ಮಾಡುತ್ತಿದ್ದಾಗ ಕಾಲು ತಾಗಿತೆಂಬ ಸಿಟ್ಟಿನಿಂದ ಹತ್ಯೆಗೈದಿದ್ದ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಿಡಕಲ್ ಡ್ಯಾಂ ನ ಶಶಿಕುಮಾರ ರಾಮಪ್ಪ ಉದ್ದಪ್ಪಗೋಳ(21) ಎಂಬಾತನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ನಗರದ ಆರ್ಟಿಒ ವೃತ್ತದ ಬಳಿ ಇರುವ ಸಾಯಿ ಲಾಡ್ಜ್ ನಲ್ಲಿ ಸೆ. 29ರಂದು ರಾತ್ರಿ ಬರ್ತ್ ಡೇ ಸಂಭ್ರಮದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಕಾಲು ತಾಗಿತೆಂಬ ಸಿಟ್ಟಿನಿಂದ ಬೆಳಗಿನ ಜಾವ ಗೋಕಾಕ ತಾಲೂಕಿನ ಘಟಪ್ರಭಾದ ವಿನಾಯಕ ಚಂದ್ರಕಾಂತ ರಾಯಬಾಗಕರ(ಕಲಾಲ) (21) ಎಂಬಾತನನ್ನು ಕೊಲೆ ಮಾಡಲಾಗಿತ್ತು. ಮೂವರು ಸೇರಿ ಸ್ನೇಹಿತನ ತಲೆಗೆ ಬೀಯರ್ ಬಾಟಲಿಯಿಂದ ಹೊಡೆದು ಹತ್ಯೆ ಮಾಡಿದ್ದರು.
ಪಾರ್ಟಿ ಮಾಡಿ, ಕುಡಿದ ಮತ್ತಿನಲ್ಲಿ ನಾಲ್ವರೂ ಡ್ಯಾನ್ಸ್ ಮಾಡುತ್ತಿದ್ದರು. ಆಗ ವಿನಾಯಕನ ಕಾಲು ಮತ್ತೊಬ್ಬ ಸ್ನೇಹಿತನಿಗೆ ತಾಗಿದೆ. ಆಗ ಮಾತಿಗೆ ಮಾತು ಬೆಳೆದು ಜಗಳವಾಡಿಕೊಂಡಿದ್ದರು. ಹಿಡಕಲ್ ಡ್ಯಾಂನ ಶಶಿಕುಮಾರ, ಉಡುಪಿಯ ನವೀನ ಚಂದ್ರ ಶೆಟ್ಟಿ ಹಾಗೂ ಶಿವಾಜಿ ನಗರದ ಅಪ್ರಾಪ್ತ ಬಾಲಕ ಬಾಟಲಿಯಿಂದ ಹೊಡೆದಿದ್ದರಿಂದ ಶೌಚಾಲಯದಲ್ಲಿಯೇ ವಿನಾಯಕ ರಕ್ತಸ್ರಾವವಾಗಿ ಮೃತಪಟ್ಟಿದ್ದನು. ಈ ಕುರಿತು ಮಾರ್ಕೆಟ್ ಠಾಣೆಯಲ್ಲಿ ಘಟಪ್ರಭಾದ ಶಶಿಕಾಂತ ಗಂಗಾರಾಮ ಪರಂಡೇಕರ ದೂರು ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ