ತೆರಿಗೆ ಪಾವತಿಸದ ಕಂಪನಿಗೆ ಬೀಗ
Team Udayavani, Oct 19, 2019, 2:42 PM IST
ಮುಳಗುಂದ: ಸಮೀಪದ ಸೊರಟೂರ, ಯಲಿಶಿರೂರ ಗ್ರಾಪಂ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿರುವ ಗಾಳಿ ವಿದ್ಯುತ್ ಉತ್ಪಾದನಾ ಕಂಪನಿಯು ಗ್ರಾಪಂಗೆ ತುಂಬಬೇಕಾದ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಉತ್ಪಾದನಾ ಘಟಕಗಳ ಪ್ರಮುಖ ಕಚೇರಿಗಳಿಗೆ ಬೀಗ ಜಡಿದು ವಿದ್ಯತ್ ಉತ್ಪಾದನೆ ಸ್ಥಗಿತಗೊಳಿಸಲಾಯಿತು.
ಸೊರಟೂರ ಹಾಗೂ ಯಲಿಶಿರೂರ ಗ್ರಾಪಂ ವ್ಯಾಪ್ತಿಗಳಲ್ಲಿ ಒಟ್ಟು 18 ವಿದ್ಯುತ್ ಉತ್ಪಾದನಾ ಘಟಕಗಳನ್ನು ಬೋರೋಕೊ ಕಂಪನಿ ಸ್ಥಾಪಿಸಿದ್ದು, 2015ರಿಂದ 2018ರ ವರೆಗೆ ಒಟ್ಟು 33.75 ಲಕ್ಷ ರೂ.ಗಳ ತೆರಿಗೆ ಪಾವತಿಸಬೇಕಾಗಿದ್ದು, ಈವರೆಗೂ ತೆರಿಗೆ ಪಾವತಿಯಾಗಿಲ್ಲ. ಈ ಕುರಿತು ಹಲವು ಬಾರಿ ನೋಟಿಸ್ ಮೂಲಕ ತಿಳಿಸಿ ಸದ್ಯ ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಅಧಿನಿಯಮದ ಕಾನೂನಿನ ಪ್ರಕಾರ ಇವರೆಗೂ ತುಂಬಬೇಕಾದ ತೆರಿಗೆ ಶೇ. 10 ಬಡ್ಡಿ ಸಮೇತ ತುಂಬಲು ತಾಪಂ ಇಒ ಎಚ್.ಎಸ್. ಜಿನಗಿ ಕಂಪನಿಗೆ ನೋಟಿಸ್ ಮೂಲಕ ತಿಳಿಸಿದರು.
ಇವರೆಗೂ ತೆರಿಗೆ ಪಾವತಿಸದ ಕಾರಣ ಇಂದು ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಸೊರಟೂರ ಗ್ರಾಮದ ಅತ್ತಿಕಟ್ಟಿ ರಸ್ತೆ ಉತ್ಪಾದನಾ ಘಟಕ ಹಾಗೂ ಯಲಿಶಿರೂರ ಮುಳಗುಂದ ರಸ್ತೆಯಲ್ಲಿರುವ ಘಟಕಕ್ಕೆ ಬೀಗ ಜಡಿಯಲಾಯಿತು. ತಾಪಂ ಇಒ ಎಚ್.ಎಸ್. ಜಿನಗಿ, ಗ್ರಾಪಂ ಅಧ್ಯಕ್ಷೆ ಶಾರದಾ ಜಂಗವಾಡ, ಸದಸ್ಯರಾದ ಮರಿಯಪ್ಪ ಸಣ್ಣತಂಗಿಯವರ, ಬಸವರಾಜ ಕುರಿ, ಸಿಪಿಐ ರವಿ ಕಪ್ಪತ್ತನವರ,ಹೆಸ್ಕಾಂ ಎಇಇ ಕುರಿ, ಪಿಎಸ್ಐ ಶಿವರಾಜ ಧನಿಗೋಳ, ಪಿಡಿಒ ಮಾಲತೇಶ ಮೇವುಂಡಿ, ಗೋವಿಂದರಡ್ಡಿ ಕಿಲಬನವರ, ಎಸ್. ಎಸ್. ತೊಂಡಿಹಾಳ, ಇಸ್ಮಾಯಿಲ್ ಅರಗಂಜಿ, ರಾಜು ಕಲ್ಲಗುಡಿ, ಪರಶುರಾಮ ಹರಿಜನ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
MUST WATCH
ಹೊಸ ಸೇರ್ಪಡೆ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ