ಹುಲಿಕುಂಟಿ ಮಠಕ್ಕಿದೆ ಪ್ರಾಚೀನ ಪರಂಪರೆ

ಸುತ್ತಲಿನ ಪ್ರದೇಶದಲ್ಲಿವೆ ಔಷಧೀಯ ಸಸ್ಯಗಳು ಅನೇಕ ಶರಣರು ತಪಸ್ಸು ಮಾಡಿದ ಸ್ಥಳ

Team Udayavani, Oct 19, 2019, 2:57 PM IST

19-October-14

„ಜಯರಾಜ ದಾಬಶೆಟ್ಟಿ
ಭಾಲ್ಕಿ:
ಖಟಕ ಚಿಂಚೋಳಿ ಗ್ರಾಮದ ಹೊರ ವಲಯದಲ್ಲಿರುವ ಹುಲಿಕುಂಟಿ ಶ್ರೀ ಶಾಂತಲಿಂಗೇಶ್ವರ ಮಠವು ಐತಿಹಾಸಿಕ ಪರಂಪರೆಯುಳ್ಳ ಮಠವಾಗಿದೆ. ಮಠದ ಸುತ್ತಲಿನ ಪರಿಸದರಲ್ಲಿ ಗುಡ್ಡಗಾಡು ಪ್ರದೇಶವಿದ್ದು ಅಲ್ಲಿ ಅನೇಕ ಆಯುರ್ವೇದ ಔಷಧೀಯ ಮರಗಳಿವೆ.

ಸುಮಾರು 15ನೇ ಶತಮಾನದಲ್ಲಿ ಖಟಕಚಿಂಚೋಳಿಯಲ್ಲಿ ಸುಮಾರು ಐದು ಮಠಗಳನ್ನು ಸ್ಥಾಪಿಸಲಾಗಿತ್ತು ಎನ್ನುವ ಪ್ರತೀತಿ ಇದೆ. ಅವುಗಳಲ್ಲಿ ಹುಲಿಕುಂಟಿಯ ಶ್ರೀ ಶಾಂತಲಿಂಗೇಶ್ವರ ಮಠವು ಅತ್ಯಂತ ಪ್ರಸಿದ್ಧಿ ಪಡೆದಿದೆ. ಇವತ್ತಿಗೂ ಖಟಕಚಿಂಚೋಳಿಯಲ್ಲಿರುವ ಹುಗ್ಗೆಳ್ಳಿ ಹಿರೇಮಠ, ಚೌಕಿ ಮಠ, ಕೋರಿಕಾಂತ ಮಠ, ಪರ್ವತ ಮಠಗಳಲ್ಲಿ ಗ್ರಾಮದಿಂದ ಸುಮಾರು 1.5 ಕಿ.ಮೀ. ದೂರದಲ್ಲಿರುವ ಹುಲಿಕುಂಟಿಯ ಶ್ರೀ ಶಾಂತಲಿಂಗೇಶ್ವರ ಮಠವು ವಿಶೇಷತೆ ಹೊಂದಿದೆ.

ಹುಲಿಕುಂಟಿ ಮಠದಲ್ಲಿ ಸ್ಥಾಪಿಸಲಾದ ಶ್ರೀ ಶಾಂತಲಿಂಗೇಶ್ವರ ದೇವಸ್ಥಾನದ ಸುತ್ತಲೂ ಗುಡ್ಡಗಾಡು ಪ್ರದೇಶವಿದೆ. ಅದಲ್ಲದೆ ಅಲ್ಲಿ ಅನೇಕ ಆಯುರ್ವೇದ ಗಿಡಗಳಿವೆ. ಇವುಗಳಿಂದ ಸುಮಾರು ರೋಗಳು ವಾಸಿಯಾಗಿರುವ ಉದಾಹರಣೆ ಇವೆ. ವಿಶೇಷವಾಗಿ ಪಾರ್ಶ್ವವಾಯು ಸೇರಿದಂತೆ, ಹಲವಾರು ರೋಗಗಳಿಗೆ ತುತ್ತಾದ ರೋಗಿಗಳು, ಈ ಮಠದಲ್ಲಿ ವಾಸವಾಗಿ, ಇಲ್ಲಿಯ ಗಿಡಮೂಲಿಕೆಗಳನ್ನು ಸೇವಿಸಿ ರೋಗ ವಾಸಿ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಇದೆ. ಅಲ್ಲದೆ ಮಠದ ಪಕ್ಕದಲ್ಲಿ ವಿಶಾಲವಾದ ಕೆರೆ ಮತ್ತು ತುಪ್ಪದ ಬಾವಿ ಎಂದೇ ಪ್ರಸಿದ್ಧಿಯಾದ ಬಾವಿ ಇದೆ.

ಈ ಪ್ರದೆಶದಲ್ಲಿ ಈ ಹಿಂದೆ ಅನೇಕ ಕಾಡು ಪ್ರಾಣಿಗಳಾದ ಜಿಂಕೆ, ಚಿರತೆ, ಹುಲಿ, ಸಿಂಹ ಮೂದಲಾದ ಪ್ರಾಣಿಗಳು ವಾಸವಾಗಿದ್ದವು. ಅದಲ್ಲದೆ ಜೀವಂತ ಐಕ್ಯವಾದ ಶ್ರೀ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ತಮ್ಮ ಮಠವನ್ನು ಕಾಯಲು ಹುಲಿಯನ್ನೇ ದ್ವಾರ ಪಾಲಕನಾಗಿ ಇಟ್ಟಿದ್ದರು. ಹೀಗಾಗಿ ಈ ಮಠಕ್ಕೆ ಹುಲಿಕುಂಟಿ ಯೆಂಬ ಹೆಸರು ಬಂತು ಎನ್ನಲಾಗುತ್ತಿದೆ.

ಅನೇಕ ಶರಣರು ತಪಸ್ಸು ಮಾಡಿ ಹೋಗಿರುವ ಜಾಗ ಇದಾಗಿದೆ. ಇಲ್ಲಿವರೆಗೆ ಒಟ್ಟು 9 ಪೂಜ್ಯರು ಈ ಮಠದ ಪೀಠಾಧ್ಯಕ್ಷರಾಗಿದ್ದ ಬಗ್ಗೆ ಮಾಹಿತಿ ಇದೆ. ಇವರಲ್ಲಿ ಪ್ರಥಮ ಪೀಠಾ ಪತಿ ಶ್ರೀ ಶಾಂತಲಿಗೆಶ್ವರ ಶಿವಯೋಗಿಗಳು, ಶ್ರೀ ಶಾಂತ ಬಸವ ಶಿವಾಚಾರ್ಯರು, ಶ್ರೀ ರುದ್ರ ಬಸವ ಸ್ವಾಮಿಗಳು, ಶ್ರೀ ಕರಬಸಯ್ನಾ ಪೂಜ್ಯರು ಮಠದ ಉತ್ತರಾಧಿಕಾರಿಗಳು ಆಗಿದ್ದು. ಅದಲ್ಲದೆ ಇದೀಗ ಈ ಮಠದ ಉತ್ತರಾಧಿಕಾರಿಯಾಗಿ ಶ್ರೀ ಶಿವಾನಂದ ಸ್ವಾಮಿಗಳು ಹುಲಸೂರು ಮತ್ತು ಹುಲಿಕುಂಠಿಯ ಎರಡು ಮಠಗಳಿಗೂ ಪೀಠಾಧಿ ಪತಿಗಳಾಗಿ ಕಾರ್ಯ ನಿರ್ವಹಿಸುತ್ತಲಿದ್ದಾರೆ.

ಪ್ರಾಚೀನ ಶರಣರಾದ ಅಲ್ಲಮ ಪ್ರಭುಗಳು, ಶ್ರೀ ರೇವಣಸಿದ್ದೇಶ್ವರರು, ಶ್ರೀ ಮಾಣಿಕ ಪ್ರಭುಗಳು, ನಾವದಗಿಯ ಶ್ರೀ ರೇವಪ್ಪಯ್ನಾ ಶಿವಶರಣರು ತಪಸ್ಸು ಮಾಡಿದ ಪುಣ್ಯ ಭೂಮಿ ಇದಾಗಿದೆ. ಹುಲಿಕುಂಠಿ ಮಠದ ಶ್ರೀ ಶಾಂತಲಿಂಗೇಶ್ವರ ದೇವರು, ನಾಡಿನ ಹಲವಾರು ಮನೆತನಗಳ ಮನೆ ದೇವರಾಗಿದ್ದಾರೆ. ಹೀಗಾಗಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳಿಂದ ಭಕ್ತಾದಿಗಳು ಈ ಮಠಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸುವರು.

ಇಲ್ಲಿಯ ಅರಣ್ಯ ಪ್ರದೇಶದ ರಕ್ಷಣೆ ಇಲ್ಲದ ಕಾರಣ ಇಲ್ಲಿಯ ಹಲವಾರು ಗಿಡ ಮರಗಳನ್ನು ಕಡಿದು, ಆಯುರ್ವೇದ ಮರಗಳ ಮಾರಣ ಹೋಮ ನಡೆಯುತ್ತಿದೆ. ಕಾರಣ ಸರ್ಕಾರ ಇತ್ತ ಗಮನ ಹರಿಸಿ ಇಲ್ಲಿಯ ಮಣ್ಣು ಮತ್ತು ಗಿಡಗಳ ರಕ್ಷಣೆಗೆ ಮುಂದಾಗಬೇಕು ಎನ್ನುವುದು ಭಕ್ತಾದಿಗಳ ಆಶಯವಾಗಿದೆ.

ಟಾಪ್ ನ್ಯೂಸ್

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.