ತುಳಸೀ ಸಂಕೀರ್ತನೆ ಸ್ಪರ್ಧೆ: ಕುಂಜಾರು, ಸುರತ್ಕಲ್ ತಂಡ ಪ್ರಥಮ
Team Udayavani, Oct 21, 2019, 5:45 AM IST
ಉಡುಪಿ: ಶ್ರೀಕೃಷ್ಣಮಠದಲ್ಲಿ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ತುಳು ಶಿವಳ್ಳಿ ಮಾಧ್ವ ಮಹಾಮಂಡಲ (ತುಶಿಮಾಮ) ಒಂದು ವಾರದಿಂದ ಆಯೋಜಿಸುತ್ತಿರುವ ತುಳಸೀ ಸಂಕೀರ್ತನೆ ಸ್ಪರ್ಧೆಯಲ್ಲಿ ಮಕ್ಕಳು ಮತ್ತು ಪುರುಷರ ವಿಭಾಗದಲ್ಲಿ ಕುಂಜಾರಿನ ಗಿರಿ ಬಳಗ, ಮಹಿಳೆಯರ ವಿಭಾಗದಲ್ಲಿ ಸುರತ್ಕಲ್ ತಂಡ ಮೊದಲ ಬಹುಮಾನ ಗಳಿಸಿದೆ.
ಮಕ್ಕಳ ತಂಡದಲ್ಲಿ ಕೊರಂಗ್ರಪಾಡಿ ಪಾವನ ಪರಿಷತ್ ತಂಡ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಕರಂಬಳ್ಳಿ ವಲಯ ದ್ವಿತೀಯ, ಕೇರಳದ ವಯನಾಡು ತಂಡ ತೃತೀಯ, ಪುರುಷರ ವಿಭಾಗದಲ್ಲಿ ಪುತ್ತೂರು ವಲಯ ದ್ವಿತೀಯ, ಮಾರ್ಪಳ್ಳಿ ಚಂಡೆ ಬಳಗ ತೃತೀಯ ಬಹುಮಾನ ಪಡೆದಿವೆ.
ಸಾಲಿಗ್ರಾಮ ತಂಡ, ಪಡುಬಿದ್ರಿಯ ತರಂಗಿಣಿ ಮಿತ್ರ ಮಂಡಳಿ, ಬೈಲೂರು ವಿಪ್ರ ಮಹಿಳಾ ಮಂಡಳಿ ಸಮಾಧಾನಕರ ಬಹುಮಾನ ಗಳಿಸಿವೆ.
ಬಹುಮಾನ ವಿತರಿಸಿದ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಸಕಲ ಇಂದ್ರಿಯಗಳನ್ನೂ ಭಗವಂತನಿಗೆ ಸಮರ್ಪಿಸುವ ಸೇವೆ ಸಂಕೀರ್ತನೆಯಾಗಿದೆ. ಮೈಲಿಗೆಯಾದ ನಾಲಗೆ, ಕಾಲುಗಳಿಗೂ ಭಗವಂತನ ಸೇವೆ ಸಲ್ಲಿಸಲು ಅವಕಾಶ ಸಿಗುವುದು ಸಂಕೀರ್ತನೆಯಲ್ಲಿ ಮಾತ್ರ. ವಾದಿರಾಜಸ್ವಾಮಿಗಳು ಹಾಕಿಕೊಟ್ಟ ಪರಂಪರೆಯನ್ನು ಉಳಿಸಿಕೊಂಡು ಬಂದ ತಂಡಗಳು ಮುಂದೆ ತಮ್ಮ ಸಂಸ್ಕೃತಿಯನ್ನು ವಿಸ್ತರಿಸಬೇಕು ಎಂದು ಹಾರೈಸಿದರು.
ಉದ್ಯಮಿಗಳಾದ ಗೋಪಾಲಕೃಷ್ಣ ಕಲ್ಕೂರ, ಬಾಲಾಜಿ ರಾಘವೇಂದ್ರ ಆಚಾರ್ಯ ಅತಿಥಿಗಳಾಗಿದ್ದರು. ತುಶಿಮಾಮ ಅಧ್ಯಕ್ಷ ಅರವಿಂದ ಆಚಾರ್ಯ ಸ್ವಾಗತಿಸಿ ಖಜಾಂಚಿ ವಾದಿರಾಜ ಆಚಾರ್ಯ ವಂದಿಸಿದರು. ಪ್ರಧಾನ ಕಾರ್ಯದರ್ಶಿ ರವಿಪ್ರಕಾಶ ಭಟ್ ವಿಜೇತರ ಹೆಸರು ವಾಚಿಸಿದರು. ಬೈಲೂರು ಜಯರಾಮ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಗೌರವಾಧ್ಯಕ್ಷ ಕೆ.ಕೆ.ಸರಳಾಯ ಉಪಸ್ಥಿತರಿದ್ದರು. ಪ್ರಥಮ ಬಹುಮಾನಿತ ತಂಡದ ಸದಸ್ಯರು ಸಂಕೀರ್ತನೆಯನ್ನು ಹಾಡಿ ತೋರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಅಪಘಾತ
MUST WATCH
ಹೊಸ ಸೇರ್ಪಡೆ
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ