ದೆಹಲಿಗೆ ದೌಡಾಯಿಸಿದ 7 ಶಾಸಕರು
Team Udayavani, Oct 25, 2019, 5:35 AM IST
ಹರ್ಯಾಣದಲ್ಲಿ ಮತ್ತೆ ಅಧಿಕಾರ ಹಿಡಿಯಲು ಬಿಜೆಪಿ ಪಣತೊಟ್ಟಿದ್ದು, ಪಕ್ಷೇತರರನ್ನು ಸೆಳೆಯಲು ತಂತ್ರ ಹೂಡಿದೆ. ಅದರ ಫಲವೆಂಬಂತೆ, ಗುರುವಾರ ಸಂಜೆಯೇ ಪಕ್ಷೇತರ ಶಾಸಕ ರಂಜಿತ್ ಸಿಂಗ್, ಹರ್ಯಾಣ ಲೋಕಹಿತ್ ಪಾರ್ಟಿಯ ಶಾಸಕ ಗೋಪಾಲ್ ಕಂಡಾ ಅವರು ಖಾಸಗಿ ವಿಮಾನದಲ್ಲಿ ದೆಹಲಿಗೆ ದೌಡಾಯಿಸಿದ್ದಾರೆ. ಇನ್ನೊಂದೆಡೆ, ಬಿಜೆಪಿಯಿಂದ ಬಂಡಾಯವೆದ್ದು ಸ್ವತಂತ್ರವಾಗಿ ಸ್ಪರ್ಧಿಸಿದ್ದ ಐವರು ಪಕ್ಷೇತರ ಶಾಸಕರು ಈಗ ಬಿಜೆಪಿಗೆ ಬೆಂಬಲ ಸೂಚಿಸುವುದಾಗಿ ಘೋಷಿಸಿದ್ದಾರೆ ಎಂದು ಹೇಳಲಾಗಿದೆ.
8 ಸಚಿವರ ಸೋಲು
ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಬಿಜೆಪಿಯ 10 ಸಚಿವರ ಪೈಕಿ 8 ಮಂದಿ ಸೋಲುಂಡಿದ್ದು, ಕೇವಲ ಇಬ್ಬರು ಮಾತ್ರ ಗೆಲುವು ಸಾಧಿಸುವಲ್ಲಿ ಸಫಲವಾಗಿದ್ದಾರೆ. 5 ಬಾರಿ ಶಾಸಕರಾಗಿದ್ದ ಅನಿಲ್ ವಿಜ್ ತಮ್ಮ ಭದ್ರಕೋಟೆ ಅಂಬಾಲಾವನ್ನು ಉಳಿಸಿಕೊಂಡಿದ್ದಾರೆ. ಗೆದ್ದಿರುವ ಮತ್ತೂಬ್ಬ ಸಚಿವರೆಂದರೆ ಬವಾನ್ನಲ್ಲಿ ಕಣಕ್ಕಿಳಿದಿದ್ದ ಬನ್ವರಿಲಾಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ