ಕನ್ನಡಿಗರಿಂದ ಕನ್ನಡಕ್ಕಾಗಿ ಸಿನಿಮಾ…

ಕನ್ನಡ ಗೊತ್ತಿಲ್ಲವರಿಗೆ ಇದು ಸರ್ಜಿಕಲ್‌ ಸ್ಟ್ರೈಕ್‌!

Team Udayavani, Nov 1, 2019, 5:15 AM IST

32

ಕನ್ನಡ ಯಾರಿಗೆ ಗೊತ್ತಿಲ್ಲವೋ ಅವರಿಗೆ ಇದು ಕನ್ನಡ ಸರ್ಜಿಕಲ್‌ ಸ್ಟ್ರೈಕ್‌ ಇದ್ದಂತೆ ….

-ಹೀಗೆ ಹೇಳಿ ತಮ್ಮ ಕನ್ನಡ ಪ್ರೀತಿ ಬಗ್ಗೆ ಹೇಳಿಕೊಂಡರು ನಿರ್ಮಾಪಕ ಕುಮಾರ ಕಂಠೀರವ.
“ಕನ್ನಡ್‌ ಗೊತ್ತಿಲ್ಲ’ ಸಿನಿಮಾ ನವೆಂಬರ್‌ 15 ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಚಿತ್ರದ ಟ್ರೇಲರ್‌ ತೋರಿಸಿ ಮಾತಿಗಿಳಿದರು ಕುಮಾರ್‌.

“ನಾನು ಹೊಸಬ. ಸಿನಿಮಾ ಬಗ್ಗೆ ಅಷ್ಟೊಂದು ಗೊತ್ತಿಲ್ಲ. ಆದರೆ ನನಗೆ ಲವ್‌ ಸ್ಟೋರಿ ಸಿನಿಮಾ ಮಾಡುವ ಆಸೆ ಇತ್ತು. ಈ ಕಥೆ ಕೇಳಿದ ಮೇಲೆ ಇದನ್ನೇ ಮಾಡಬೇಕು ಎನಿಸಿತು. ಕನ್ನಡದವರು ಈಗ ಕಳೆದು ಹೋಗುತ್ತಿದ್ದೇವೇನೋ ಎಂಬ ಫೀಲ್‌ ಇದೆ. ಎಲ್ಲೇ ಹೋದರು ಬೇರೆ ಭಾಷಿಗರು ಸಿಗುತ್ತಾರೆ. ನಮ್ಮ ಸುತ್ತ ಇರೋರಷ್ಟೇ ಕನ್ನಡ ಮಾತನಾಡುತ್ತಾರೆ. ಹೀಗಾಗಿ ನಮ್ಮತನ, ನಮ್ಮ ಸಂಸ್ಕೃತಿ ನಮ್ಮ ಆಚರಣೆ, ವಿಚಾರ ದೂರವಾಗಿದೆ. ಅವೆಲ್ಲವೂ ಒಳಗೊಂಡ ಸಿನಿಮಾ ಇದು. ನಮ್ಮ ಕನ್ನಡದ ಸುತ್ತವೇ ತಿರುಗುವ ಸಿನಿಮಾ ಇದು. ಕನ್ನಡ ಕಲಿತೇ ತೀರು ಎಂಬಂತಹ ಸಂದೇಶದೊಂದಿಗೆ ಅಪ್ಪಟ ಕನ್ನಡತನ ಇರುವ ಸಿನಿಮಾ ಇದು’ಎಂದರು ಕುಮಾರ್‌ ಕಂಠೀರವ.

ನಟಿ ಹರಿಪ್ರಿಯಾ ಮಾತನಾಡಿ, “”ಕನ್ನಡ್‌ ಗೊತ್ತಿಲ್ಲ’ ನನ್ನ ವೃತ್ತಿ ಜೀವನದಲ್ಲಿ ವಿಭಿನ್ನ ಪಾತ್ರ. ಈ ವರ್ಷದಲ್ಲಿ ಇದು ಬಿಡುಗಡೆಯಾಗುತ್ತಿರುವ ನನ್ನ 6ನೇ ಚಿತ್ರ. ಎಲ್ಲಾ ಸಿನಿಮಾಗಳು ಬೇರೆ ಬೇರೆ ಜಾನರ್‌ನಲ್ಲಿವೆ. ಕನ್ನಡದ ಮೇಲೆ ಎಲ್ಲರಿಗೂ ಇಲ್ಲಿ ಇನ್ನಷ್ಟು ಲವ್‌ ಆಗಲಿದೆ. ಅಷ್ಟರ ಮಟ್ಟಿಗೆ ಕನ್ನಡ ಮೇಳೈಸಿದೆ. ಈಗಾಗಲೇ ಸಾಂಗ್ಸ್, ಟೀಸರ್‌ ರೀಚ್‌ ಆಗಿದೆ. ನ.15 ರಂದು ಬಿಡುಗಡೆಯಾಗುತ್ತಿದೆ. ಜಯಣ್ಣ ಚಿತ್ರ ವಿತರಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಕನ್ನಡಿಗರ ಸುತ್ತವೇ ಸಾಗುವ ಚಿತ್ರದಲ್ಲಿ ಎಲ್ಲವೂ ಇದೆ. ಪ್ರತಿ ಕನ್ನಡಿಗನಿಗೂ ಇದು ಹೆಮ್ಮೆಯ ಸಿನಿಮಾ ಆಗಲಿದೆ’ ಎಂದರು ಹರಿಪ್ರಿಯಾ.

ಸುಧಾರಾಣಿ ಅವರಿಲ್ಲಿ ಒಳ್ಳೆಯ ಪಾತ್ರ ಮಾಡಿದ್ದಾರಂತೆ. ಆ ಬಗ್ಗೆ ಮಾತನಾಡುವ ಅವರು, “ನನ್ನದು ಚಿಕ್ಕ ಪಾತ್ರವಿದ್ದರೂ ಚೊಕ್ಕವಾಗಿದೆ. ಪರಿಣಾಮಕಾರಿಯಾಗಿರುವಂತಹ ಪಾತ್ರ ಮಾಡಿದ್ದು ಹೆಮ್ಮೆ ಎನಿಸುತ್ತೆ. ನಿರ್ದೇಶಕರಿಗೆ ಇದು ಮೊದಲ ಚಿತ್ರ ಎನಿಸಲ್ಲ. ಅಷ್ಟರ ಮಟ್ಟಿಗೆ ಸಿನಿಮಾ ಮಾಡಿದ್ದಾರೆ. ಗಿರಿಧರ್‌ ಛಾಯಾಗ್ರಹಣ ಕೆಲಸ ಚೆನ್ನಾಗಿದೆ ಹಾಡುಗಳು ಸಹ ಇಷ್ಟವಾಗುತ್ತವೆ’ ಎಂದರು ಸುಧಾರಾಣಿ

ನಿರ್ದೇಶಕ ಮಯೂರ್‌ ಅವರಿಗೆ ಮೊದಲ ಚಿತ್ರವಿದು ಅವರು ತಮ್ಮ ಸುತ್ತ ಇರುವ ಪಾತ್ರ ಪೋಣಿಸಿ ಕಥೆ ಮಾಡಿದ್ದಾರಂತೆ. ಎಲ್ಲರ ಸಹಕಾರದಿಂದ ಈ ಚಿತ್ರ ಮಾಡಲು ಸಾಧ್ಯವಾಗಿದೆ.ಇಲ್ಲೊಂದು ಸಂದೇಶವಿದೆ. ಅದೇ ಚಿತ್ರದ ಹೈಲೈಟ್‌ ಎಂದರು. ಹಾಸ್ಯ ನಟ ಧರ್ಮಣ್ಣ ಗಿರಿಧರ್‌ ದಿವಾನ, ಪವನ್‌ ಕುಮಾರ್‌ ಇತರರು ಚಿತ್ರದ ಕುರಿತು ಮಾತನಾಡಿದರು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.