ಡಿಸೆಂಬರ್‌ 6, 1992


Team Udayavani, Nov 10, 2019, 4:07 AM IST

december

ಅವತ್ತು 1992ರ ಡಿಸೆಂಬರ್‌ 6. ಹೇಳಿ ಕೇಳಿ ಭಾನುವಾರ. ಆಗೆಲ್ಲಾ ದೂರದರ್ಶನದ ಪ್ರಭೆ ಇದ್ದ ಕಾಲ. ದೂರದರ್ಶನದಲ್ಲಿ ಬೆಳಗಿನ ಸೀರಿಯಲ್‌ಗ‌ಳನ್ನು ನೋಡುವ ಚಟ ಅಂಟಿಸಿಕೊಂಡಿದ್ದವರು ಟಿವಿ ಮುಂದೆ ವಿರಾಜಮಾನರಾಗಿದ್ದರೆ, ಹಲವಾರು ಮಂದಿ ಹಾಗೇ ಅಡ್ಡಾಡುತ್ತಾ, ಓಡಾಡುತ್ತಾ ಕಾಲ ಕಳೆಯುತ್ತಿದ್ದರು. ಇಡೀ ದೇಶದ ಕಣ್ಣು ದೂರದ ಉತ್ತರ ಪ್ರದೇಶದ ಮೇಲಿತ್ತು.

ಅಯೋಧ್ಯೆಯಲ್ಲಿ ರಾಮಕೋಟ್‌ ಎಂಬ ಪುಟ್ಟದೊಂದು ದಿಬ್ಬ. ಅದರ ಸುತ್ತಲೂ ಲಕ್ಷೊಪಲಕ್ಷ ಜನ. ಅವರೆಲ್ಲರೂ, ಕರಸೇವಕರು ಎಂದು ಗುರುತಿಸಿಕೊಂಡವರು. ಅವರೆಲ್ಲರೂ ರಥಯಾತ್ರೆಗೆ ಮನಸೋತು ತಮ್ಮ ಊರು, ಕೇರಿಗಳನ್ನು ಬಿಟ್ಟು ಬಂದಿದ್ದವರು. ಕೈಗಳಲ್ಲಿ ಗುದ್ದಲಿ, ಸುತ್ತಿಗೆ, ಕೊಡಲಿಯಂಥ ಸಾಮಗ್ರಿಗಳಿದ್ದವು. ಅವರೆಲ್ಲರೂ ದೃಷ್ಟಿ ನೆಟ್ಟಿದ್ದು ಒಂದೇ ಕಡೆ… ಆ ದಿಬ್ಬದ ಮೇಲಿದ್ದ ಕಟ್ಟಡದ ಮೇಲೆ. ಬಾಯಿಂದ ಎಲ್ಲರ ಬಾಯಲ್ಲೂ “ಇದೇ ಜಾಗದಲ್ಲಿ ನಾವು ರಾಮಮಂದಿರ ಕಟ್ಟುತ್ತೇವೆ. ರಾಮಮಂದಿರ ಕಟ್ಟುತ್ತೇವೆ’ ಎಂಬ ಘೋಷವಾಕ್ಯ ಹೊರಬರುತ್ತಿತ್ತು. ಯಾರಿಗೂ ಅಲ್ಲಿಗೆ ಹೋಗಲು ಸಾಧ್ಯವಿರಲಿಲ್ಲ.

ದಿಬ್ಬದ ತಪ್ಪಲಿನ ಸುತ್ತಲೂ ತಂತಿ ಬೇಲಿ… ಸಾಲದ್ದಕ್ಕೆ ಸಾವಿರಾರು ಪೊಲೀಸರ ಪಹರೆ. ಊಹೂnಂ… ಅಲ್ಲಿಗೆ ಒಂದೇ ಒಂದು ನರಪಿಳ್ಳೆಯೂ ತಲುಪುವ ಹಾಗಿರಲಿಲ್ಲ. ಅಲ್ಲಿ ನೆರೆದಿದ್ದ ಕರಸೇವಕರನ್ನು ಕರೆತಂದಿದ್ದ ನಾಯಕರು ತಮ್ಮ ಭಾಷಣಗಳಿಂದ, ಘೋಷ ವಾಕ್ಯಗಳಿಂದ ಅವರನ್ನು ಹುರಿದುಂಬಿಸುತ್ತಿದ್ದರು. ಇತ್ತ, ಕರಸೇವಕರು ಬೇಲಿ ದಾಟಿ ಬಂದರೆ, ಅವರನ್ನು ಖಂಡಿತ ತಡೆಯುತ್ತೇವೆ ಎಂಬ ವಿಶ್ವಾಸದಲ್ಲಿ ಇತ್ತು ತಂತಿ ಬೇಲಿಯ ಮಗ್ಗುಲಲ್ಲಿ ನಿಂತಿದ್ದ ಪೊಲೀಸ್‌ ಪಡೆ!

ಪತ್ರಕರ್ತರಿಗೆ ಬಂತು ಸಂದೇಶ: ಇಂಥದ್ದೊಂದು ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ, ಊಟ, ತಿಂಡಿ, ನಿದ್ರೆಗಳನ್ನು ಬಿಟ್ಟು ಕಾಯುತ್ತಿದ್ದವರೆಂದರೆ ಅದು ಪತ್ರಕರ್ತರು! ಈಗೇನಾಗುತ್ತೋ, ಇನ್ನೊಂದು ಕ್ಷಣದಲ್ಲೇನಾಗುತ್ತೋ ಅಂತ ಕಾಯುತ್ತಾ ಕುಳಿತಿದ್ದ ಅವರ ಸಮೂಹಕ್ಕೆ ಬೆಳಗ್ಗೆ 10 ಗಂಟೆ ಸುಮಾರಿಗೆ ಒಂದು ಸಂದೇಶ ಬಂತು. “ಪರಿಸ್ಥಿತಿ ಎಲ್ಲವೂ ಹತೋಟಿಯಲ್ಲಿದೆ. ಗಂಟೆಗಟ್ಟಲೆ ನಿಂತು ದಣಿದಿದ್ದೀರಿ. ಹೋಗಿ ಒಂದಿಷ್ಟು ಆರಾಮ ಮಾಡಿಕೊಂಡು ಕೆಲ ಸಮಯದ ನಂತರ ಬನ್ನಿ’. ಅದು ಫೈಜಾಬಾದ್‌ ಜಿಲ್ಲೆಯ ಎಸ್‌ಪಿ ಕಚೇರಿಯಿಂದ ಬಂದ ಮಾಹಿತಿಯಾದ್ದರಿಂದ ಪತ್ರಕರ್ತರಲ್ಲಿ ಬಹುತೇಕರು ಕೊಂಚ ಮೈ, ಮನಸ್ಸು ಸಡಿಲಿಸಿ ಆಚೀಚೆ ಚದುರಿದರು.

ಎಲ್ಲಿಂದ ತೂರಿ ಬಂದ ಅವನು?: ಶ್ರೀರಾಮನ ಹೆಸರಲ್ಲಿ ಜಯಕಾರ ಹಾಕುತ್ತಾ, ತೆರಳುತ್ತಿದ್ದ ಕರಸೇವಕರಲ್ಲಿದ್ದ ಯಾವನೋ ಒಬ್ಬ ಅದು ಹೇಗೋ, ಏನೋ ಪೊಲೀಸರ ಸರ್ಪಗಾವಲನ್ನೂ ದಾಟಿ ಆ ಕಟ್ಟಡದ ಅರ್ಧಕ್ಕೇರಿ ನಿಂತು ಕೇಸರಿ ಬಾವುಟವನ್ನು ಹಾರಿಸಲಾರಂಭಿಸಿದ! ಅದನ್ನು ನೋಡಿದ್ದೇ ತಡ, ಆ ಲಕ್ಷಾಂತರ ಕರಸೇವಕರು ಕೆರಳಿದರು. ರಾಮಕೋಟ್‌ ದಿಬ್ಬದತ್ತ . ಸುನಾಮಿ ಅಲೆಗಳಂತೆ ಬಂದು ಅಪ್ಪಳಿಸಿದ ಲಕ್ಷಾಂತರ ಕರಸೇವಕರನ್ನು ಹಿಡಿಯಲು ಬಡಪಾಯಿ ಸಾವಿರಾರು ಪೊಲೀಸರಿಗೆ ಸಾಧ್ಯವಾಗಲೇ ಇಲ್ಲ.

ಹಾಗೆ ಬೇಲಿ ದಾಟಿ ಕಟ್ಟಡವನ್ನು ಹತ್ತಿದ ಕರಸೇವಕರು, ಕೈಯ್ಯಲ್ಲಿದ್ದ ತಮ್ಮ ಹಾರೆ, ಗುದ್ದಲಿಯಂಥ ಸಾಮಗ್ರಿಗಳಿಂದ ನೋಡ ನೋಡುತ್ತಿದ್ದಂತೆ ಆ ಕಟ್ಟಡವನ್ನು ಒಡೆದು ಹಾಕಿದರು. ಅದರ ಮೂರು ಗುಂಬಜ್‌ಗಳೂ ಧೊಪ್ಪನೆ ನೆಲಕ್ಕುರುಳಿಬಿದ್ದವು. ಸಂಜೆ 4:30ರ ಹೊತ್ತಿಗೆ ಇಡೀ ಪ್ರಾಂತ್ಯ ಅವಶೇಷಗಳಿಂದ ಹೊರಬಂದ ಕೆಮ್ಮಣ್ಣಿನ ಧೂಳಿನಿಂದ ಆವೃತವಾಯಿತು. ಅದರ ಜತೆಯಲ್ಲೇ, ಕರಸೇವಕರ ಜಯಘೋಷಗಳು ಮುಗಿಲನ್ನು ಮುಟ್ಟಿದ್ದವು: “ಜೈ ಶ್ರೀರಾಮ್‌, ಜೈ ಶ್ರೀರಾಮ್‌’!

ಟಾಪ್ ನ್ಯೂಸ್

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

1-eeqwew

Ban; ಎಂಡಿಎಚ್‌, ಎವರೆಸ್ಟ್‌ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.