ಗೋವಾ ಇಫಿ ಚಿತ್ರೋತ್ಸವ; ಎನ್‌ಎಫ್‌ಡಿಸಿ ಯ ಫಿಲ್ಮ್‌ ಬಜಾರ್‌ಗೆ ಚಾಲನೆ


Team Udayavani, Nov 21, 2019, 2:00 PM IST

film-bazaar-blog-1

ಪಣಜಿ(ಉದಯವಾಣಿ ಪ್ರತಿನಿಧಿಯಿಂದ): ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸುವರ್ಣ ಸಂಭ್ರಮದ ಜತೆಗೇ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ [ಎನ್‌ಎಫ್‌ಡಿಸಿ] ಹಮ್ಮಿಕೊಂಡಿರುವ 13 ನೇ ವರ್ಷದ ಚಲನಚಿತ್ರಸಂತೆ [ಫಿಲ್ಮ್‌ ಬಜಾರ್‌] ಬುಧವಾರ ಉದ್ಘಾಟನೆಗೊಂಡಿತು.

ಏಷ್ಯಾದ ಅತಿದೊಡ್ಡ ಚಲನಚಿತ್ರ ಸಂತೆಯಾದ ಫಿಲ್ಮ್‌ ಬಜಾರ್‌ ಪ್ರತಿ ವರ್ಷ ಇಫಿ ಚಿತ್ರೋತ್ಸವದೊಂದಿಗೆ ನಡೆಯುತ್ತದೆ. ಇದನ್ನು ಎನ್‌ಎಫ್‌ಡಿಸಿ ಸಂಘಟಿಸುತ್ತಿದೆ. ಈ ಬಾರಿ ಉತ್ಸವಕ್ಕೆ ಹೊಸದಾಗಿ ಸೇರ್ಪಡೆಗೊಂಡಿರುವುದೆಂದರೆ ಕೌಶಲ ಕಾರ್ಯಾಗಾರ, ಚಿತ್ರ ನಿರ್ಮಾಪಕರ ಕಾರ್ಯಾಗಾರ.

ನ. 24 ವೆರೆಗೂ ನಡೆಯುವ ಚಲನಚಿತ್ರ ಸಂತೆಯಲ್ಲಿ ವಿಶಾಲ್‌ ಭಾರದ್ವಾಜ್‌, ಅದಿಲ್‌ ಹುಸೇನ್‌, ಸೌಂದರ್ಯ ರಜನೀಕಾಂತ್‌, ಪ್ರಸೂನ್‌ ಜೋಷಿ, ಸಿದ್ಧಾರ್ಥ ರಾಯ್‌ ಕಪೂರ್‌, ಮೇಘನಾ ಗುಲ್ಜಾರ್‌, ವಾಣಿ ತ್ರಿಪಾಠಿ ಟಿಕೂ ಮತ್ತಿತರರು ವಿವಿಧ ಕಾರ್ಯಾಗಾರ, ಉಪನ್ಯಾಸಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಸಹ ನಿರ್ಮಾಣ ಯೋಜನೆಯಲ್ಲಿ 14 ಸಿನಿಮಾಗಳು, ಪ್ರಗತಿಯಲ್ಲಿರುವ 5 ಸಿನಿಮಾಗಳು ಹಾಗೂ ಫಿಲ್ಮ್‌ ಬಜಾರ್‌ನ ಶಿಫಾರಸಿನ 26 ಸಿನಿಮಾಗಳ ಬಗೆಗೂ ಚರ್ಚೆ ನಡೆಯಲಿದೆ. 30 ಕ್ಕೂ ಹೆಚ್ಚು ಭಾಷೆಗಳ 213 ಚಲನಚಿತ್ರಗಳು ವ್ಯೂವಿಂಗ್‌ ರೂಮ್‌ನಲ್ಲಿ ನೋಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಕನ್ನಡದ ಆರು ಚಿತ್ರಗಳು ಇದರಲ್ಲಿ ಸೇರಿವೆ. ಇದರೊಂದಿಗೆ ಗೋಂಡಿ, ಬೋಡೊ, ಗೋಜ್ರಿ ಹಾಗೂ ಗಾಲೋ ಭಾಷೆಯ ಚಿತ್ರಗಳು ಸೇರಿರುವುದು ವಿಶೇಷ.

ಈ ಪೈಕಿ 154 ಕಥಾ ಚಿತ್ರಗಳಾಗಿದ್ದು, 59 ಕಿರುಚಿತ್ರಗಳು. 89 ಮಂದಿಯ ಚೊಚ್ಚಲ ಚಿತ್ರಗಳು ಈ ಪಟ್ಟಿಯಲ್ಲಿವೆ.

ಕೌಶಲ ಕಾರ್ಯಾಗಾರದ ಮೂಲಕ ಯುವ ಸಿನಿಮಾ ನಿರ್ದೇಶಕರ ಸಬಲೀಕರಣದ ಬಗ್ಗೆ ಪ್ರಸೂನ್‌ ಜೋಷಿ, ಸಿದ್ಧಾರ್ಥ ರಾಯ್‌ ಕಪೂರ್‌ ಮಾತನಾಡಿದರೆ, ವಾಣಿ ತ್ರಿಪಾಠಿ ಟಿಕೂ ಬಾಹುಬಲಿ ಚಿತ್ರದ ನಿರ್ಮಾಪಕಿ ಶೋಬು ಯರ್ಲಗಡ್ಡ ಅವರೊಂದಿಗೆ ಸಂವಾದ ನಡೆಸುವರು. ಸೌಂದರ್ಯ ರಜನೀಕಾಂತ್‌ ಮತ್ತು ನಂದಿತಾ ರಾಯ್‌ ಭಾರತೀಯ ಸಿನಿಮಾದಲ್ಲಿ ಬದಲಾಗುತ್ತಿರುವ ಮಹಿಳೆಯ ಪಾತ್ರ ಕುರಿತು ಮಾತನಾಡುವರು.

ಕೌಶಲ ಕಾರ್ಯಾಗಾರದಲ್ಲಿ ಅದಿಲ್‌ ಹುಸೇನ್‌. ಮೇಘನಾ ಗುಲ್ಜಾರ್‌, ಪುನೀತ್‌ ಕೃಷ್ಣ, ರಾಜೀ ವ್‌ ಕೃಷ್ಣ ಮೆನನ್‌, ಸುಭಾಷ್‌ ಘಾಯ್‌ ಮತ್ತಿತರರು ಪಾಲ್ಗೊಳ್ಳುವರು.

ಪ್ರಗತಿಯಲ್ಲಿರುವ ಚಿತ್ರಗಳ ವಿಭಾಗದಲ್ಲಿ ನಿರ್ಮಾಣದ ಹಂತದಲ್ಲಿರುವ ಚಿತ್ರಗಳನ್ನು ನಿರ್ದೇಶಕರು ಆಸಕ್ತ ನಿರ್ಮಾಪಕರಿಗೆ ಪ್ರದರ್ಶಿಸಲೂ ಅವಕಾಶವಿದೆ. ಈ ಬಾರಿಯ ಚಿತ್ರ ನಿರ್ಮಾಪಕರ ಕಾರ್ಯಾಗಾರಕ್ಕೆ ಅಮೆರಿಕ, ಶ್ರೀಲಂಕಾ, ಬಾಂಗ್ಲಾದೇಶ್‌, ತೈವಾನ್‌ ಮತ್ತು ಭಾರತದ ೨೦ ಯೋಜನೆಗಳು ಆಯ್ಕೆಯಾಗಿವೆ. ಇದರೊಂದಿಗೆ ಸಹ ನಿರ್ಮಾಣ ಯೋಜನೆಯಡಿಯೂ ಭಾರತ, ಭೂತಾನ್‌. ಬಾಂಗ್ಲಾದೇಶ, ಫ್ರಾನ್ಸ್‌, ನೇಪಾಳ್‌ ಸಿಂಗಾಪುರ ಸೇರಿದಂತೆ ೧೪ ಯೋಜನೆಗಳು ಆಯ್ಕೆಯಾಗಿದ್ದು, ಹಿಂದಿ, ಇಂಗ್ಲಿಷ್‌, ಮಲಯಾಲಂ, ಬಂಗಾಳಿ, ಅಸ್ಸಾಮಿ, ನೇಪಾಳಿ, ಗುಜರಾತಿ, ಭೂತಾನೀಸ್‌ ಭಾಷೆಯ ಪ್ರತಿಭಾವಂತ ನಿರ್ದೇಶಕರು ಇದರಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿದ್ದಾರೆ.

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್‌ ಈ ವರ್ಷದ ಉತ್ಸವಕ್ಕೆ ಚಾಲನೆ ನೀಡಿದರು. ಅವರೊಂದಿಗೆ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, ಕೇಂದ್ರ ಪರಿಸರ ರಾಜ್ಯ ಸಚಿವ ಬಬುಲ್‌ ಸುಪ್ರಿಯೊ, ಎನ್‌ಎಫ್ಡಿಸಿ ಯ ಎಂಡಿ ಟಿಸಿಎ ಕಲ್ಯಾಣಿ ಮತ್ತಿತರರು ಭಾಗವಹಿಸಿದ್ದರು.

ಕರ್ನಾಟಕ, ಲಕ್ಷದ್ವೀಪ್‌, ಮಧ್ಯಪ್ರದೇಶ, ಒರಿಸ್ಸಾ, ಉತ್ತರಾಖಂಡ್‌, ಉತ್ತರ ಪ್ರದೇಶ, ದಿಲ್ಲಿ, ರಾಜಸ್ಥಾನ ಮತ್ತಿತರ 12 ರಾಜ್ಯಗಳ ಇಲಾಖೆಗಳು ಈ ಸಂತೆಯಲ್ಲಿ ಭಾಗವಹಿಸಿವೆ. ಫಿಲ್ಮ್‌ ಬಜಾರ್‌ ಎನ್‌ಎಫ್‌ಡಿಸಿ ಸಂಘಟಿಸುತ್ತಿರುವ ವೇದಿಕೆ. ಚಿತ್ರ ನಿರ್ದೇಶಕರು, ನಿರ್ಮಾಪಕರು, ಚಿತ್ರ ಏಜೆಂಟರು, ವಿತರಕರು, ಚಿತ್ರೋತ್ಸವ ಸಂಘಟಕರ ವಿಚಾರ ವಿನಿಮಯಕ್ಕೆ ಕಲ್ಪಿಸಿರುವಂಥದ್ದು. ದಕ್ಷಿಣ ಏಷ್ಯಾ ಹಾಗೂ ವಿವಿಧ ದೇಶಗಳ ಸಿನಿಮಾ ನಿರ್ಮಾಪಕರು, ನಿರ್ದೇಶಕರು ಇದರಲ್ಲಿ ಪಾಲ್ಗೊಳ್ಳುವರು. ಕಳೆದ ವರ್ಷ 850 ಕ್ಕೂ ಹೆಚ್ಚು ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದರು.

ಟಾಪ್ ನ್ಯೂಸ್

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.