ಮಾಧುಸ್ವಾಮಿ- ಕಾಗಿನೆಲೆ ಶ್ರೀ ಪ್ರಕರಣ ಸುಖಾಂತ್ಯ; ಕಣ್ಣೀರು ಹಾಕಿದರಾ ಸಚಿವರು
Team Udayavani, Nov 21, 2019, 4:10 PM IST
ದಾವಣಗೆರೆ: ಕಾನೂನು ಸಚಿವ ಮಾಧುಸ್ವಾಮಿ ಮತ್ತು ಕಾಗಿನೆಲೆ ಶಾಖಾ ಮಠದ ಶ್ರೀಗಳ ವಾಗ್ವಾದ ಪ್ರಕರಣ ಇದೀಗ ಸುಖಾಂತ್ಯ ಕಂಡಿದ್ದು, ಬಂದ್ ಹಿಂಪಡೆಯಲು ಶ್ರೀಗಳು ನಿರ್ಧಿಸಿದ್ದಾರೆ.
ಹರಿಹರ ತಾಲೂಕಿನ ಬೆಳ್ಳೂಡಿಯ ಕನಕಪೀಠದ ಶಾಖಾ ಮಠದಲ್ಲಿ ನಡೆದ ಸಂಧಾನ ಸಭೆಯಲ್ಲಿ ನಿರಂಜನಾನಂದಪುರಿ ಶ್ರೀಗಳು, ಮಾಧುಸ್ವಾಮಿ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಯಿ ಭಾಗವಹಿಸಿ, ಪ್ರಕರಣವನ್ನು ಸುಖಾಂತ್ಯ ಮಾಡಿದರು.
ನಮಗೂ ಸಾಕಷ್ಟು ಕೋಪಗಳಿದ್ದವು. ಆದರೆ ಸಚಿವರ ಕಣ್ಣಂಚಿನಲ್ಲಿ ಕಣ್ಣೀರು ಇರುವುದನ್ನು ನೋಡಿದ್ದೇವೆ. ನಾಮಫಲಕಕ್ಕೆ ಯಾವುದೇ ಅಡ್ಡಿ ಮಾಡಬೇಡಿ ಎಂದು ಮಾತುಕತೆ ನಡೆಸುತ್ತಿರುವ ವೇಳೆ ಪೊಲೀಸರಿಗೂ ಕೂಡ ಹೇಳಿದ್ದಾರೆ ಎಂದು ನಿರಂಜನಾನಂದಪುರಿ ಶ್ರೀಗಳು ಹೇಳಿದರು.
ನಾನು ಯಾವತ್ತು ಆ ವೃತ್ತಕ್ಕೆ ಹೆಸರು ಇಡುವುದನ್ನು ವಿರೋಧ ಮಾಡಿಲ್ಲ. ನಾನು ಸ್ವಾಮಿಗಳಿಗೆ ಒಂದು ಕೆಟ್ಟ ಪದ ಬಳಸಿಲ್ಲ. ಸಭೆಯಲ್ಲಿ ಗೊಂದಲವಾದಾಗ ಏರು ದ್ವನಿಯಲ್ಲಿ ಮಾತನಾಡಿದೆ. ನನಗೂ ಮಾತನಾಡಲು ಬಿಡಿ ಎಂದು ಹೇಳಿದೆ ಅಷ್ಟೇ ನಾನು ಯಾವುದೇ ಸಮುದಾಯಕ್ಕೆ ನೋವು ಮಾಡಿಲ್ಲ ಎಂದು ಮಾಧುಸ್ವಾಮಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Byndoor ಶಿರೂರು: ಕಡಿದು ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮೀನುಗಾರ ಮೃತ್ಯು
Online Fraud; ಬಳ್ಳಾರಿ ಮಹಿಳೆಗೆ 17 ಲಕ್ಷ ರೂ.ವಂಚನೆ
Surathkal; ಉದ್ಯಮಿಯ ಮೇಲೆ ಪತ್ನಿ, ಸಂಬಂಧಿಕರಿಂದ ಹಲ್ಲೆ, ಗೃಹಬಂಧನ
Moodabidri ಹೊಸಬೆಟ್ಟು: ಈಜುಕೊಳಕ್ಕೆ ಧುಮುಕಿದ ಯುವಕ ಸಾವು
Belthangady: ಅಕ್ರಮ ಕಲ್ಲು ಗಣಿಗಾರಿಕೆ ಆರೋಪ; ಇಬ್ಬರ ವಿರುದ್ಧ ಪ್ರಕರಣ, ಓರ್ವನ ಬಂಧನ