ಧರ್ಮಕ್ಕಿಂತ ಮನುಷ್ಯ ಪ್ರೀತಿ ದೊಡ್ಡದು


Team Udayavani, Nov 24, 2019, 3:00 AM IST

dharmakkinta

ಹಾಸನ: ದೇಶ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಟಿಪ್ಪು ಸುಲ್ತಾನ್‌ ಅವರನ್ನು ನಾವು ಸ್ಮರಿಸಬೇಕು. ಧರ್ಮಕ್ಕಿಂತ ಮನುಷ್ಯ ಪ್ರೀತಿ ದೊಡ್ಡದು. ಅದನ್ನು ಪ್ರತಿಯೊಬ್ಬರೂ ಗೌರವಿಸಬೇಕು ಮತ್ತು ಪಾಲಿಸಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್‌ ಅವರು ಹೇಳಿದರು. ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಟಿಪ್ಪು ಇತಿಹಾಸ ಸಂರಕ್ಷಣಾ ಸಮಿತಿ ಆಯೋಜಿಸಿದ್ದ ಇತಿಹಾಸದಲ್ಲಿ ಟಿಪ್ಪು ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಬ್ರಿಟಿಷರಿಂದ ಟಿಪ್ಪು ಬಗ್ಗೆ ಅಪಪ್ರಚಾರ: ಟಿಪ್ಪು ಸುಲ್ತಾನ್‌ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ. ಅತನನ್ನು ನೇರವಾಗಿ ಎದುರಿಸಲಾಗದೇ ಬ್ರಿಟಿಷರು ಟಿಪ್ಪು ಹಿಂದೂಗಳ ವಿರೋಧಿ ಎಂದು ಮುಸ್ಲಿಮರರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟಿ ಸಮಾಜವನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದರು ಎಂದು ಆಪಾದಿಸಿದರು. ಮೈಸೂರು ಸಂಸ್ಥಾನದ ಮೇಲೆ ಟಿಪ್ಪು ದುರಾಕ್ರಮಣ ಮಾಡಿದ್ದ. ಟಿಪ್ಪುವನ್ನು ಮಣಿಸಿ ಮೈಸೂರು ಸಂಸ್ಥಾನವನ್ನು ಮರು ಸ್ಥಾಪನೆ ಮಾಡಿದ್ದೇವೆ ಎಂದು ಬ್ರಿಟಿಷರು ಬಿಂಬಿಸಿದ್ದರು. ವಾಸ್ತವವಾಗಿ ಟಿಪ್ಪು ಎಂದೂ ಮೈಸೂರು ಸಂಸ್ಥಾನದ ವಿರೋಧಿಯಾಗಿರಲಿಲ್ಲ. ಬಿಜೆಪಿ ಸರ್ಕಾರ ಮತ್ತು ಹಿಂದೂ ಸಂಘಟನೆಗಳು ಈಗ ಬ್ರಿಟಿಷರ ಕುಟಿಲ ನೀತಿಯನ್ನೇ ಅನುಸರಿಸುತ್ತಾ ಟಿಪ್ಪುವನ್ನು ಖಳನಾಯಕನಂತೆ ಸೃಷ್ಟಿಸುವ ಪ್ರಯತ್ನ ಮಾಡುತ್ತಿವೆ ಎಂದು ಆಪಾದಿಸಿದರು.

ಟಿಪ್ಪು ಮತಾಂಧನಾಗಿರಲಿಲ್ಲ: ಟಿಪ್ಪು ಮತಾಂಧನಾಗಿರಲಿಲ್ಲ. ವೈಭವೋಪೇತ ಜೀವನ ಆಶಿಸಿದವನೂ ಅಲ್ಲ. ಆತ ಸ್ವಾಭಿಮಾನಿಯಾಗಿದ್ದ. ಬ್ರಿಟಿಷರು ತನ್ನ ರಾಜ್ಯಕ್ಕೆ ಕಾಲಿಡಕೂಡದು ಎಂದು ಹೋರಾಟದ ಸ್ವಾಭಿಮಾನ ರೂಢಿಸಿಕೊಂಡಿದ್ದ ಪರಾಕ್ರಮಿ. ಆತನ 17 ವರ್ಷಗಳ ಆಡಳಿತಾವಧಿಯಲ್ಲಿ ಭೂ ಸುಧಾರಣೆಯನ್ನು ಜಾರಿಗೆ ತಂದಿದ್ದ. ಪಾಳೇಗಾರಿಕೆ ನಿರ್ಮೂಲನೆಗೆ ಮುಂದಾಗಿದ್ದ ಎಂದರು.

ಸ್ವಾತಂತ್ರ್ಯ ಹೋರಾಟಗಾರ: ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್‌ ಉಸ್ತಾದ್‌ ಅವರು ಮಾತನಾಡಿ, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರೆಲ್ಲಾ ಸ್ವಾತಂತ್ರ್ಯ ಹೋರಾಟಗಾರರು. ಹಾಗಾಗಿ ಟಿಪ್ಪು ಸುಲ್ತಾನ್‌ ಕೂಡ ಸ್ವಾತಂತ್ರ್ಯ ಹೋರಾಟಗಾರ ಎಂಬ ಕನಿಷ್ಠ ಪ್ರಜ್ಞೆ ಇಲ್ಲದವರು ಭಾರತೀಯರೇ ಅಲ್ಲ ಎಂದರು. ಸ್ವಾತಂತ್ರ್ಯ ಹೋರಾಟಗಾರರನ್ನು ವಿರೋಧಿಸುವುದು ದೇಶಕ್ಕೆ ಮಾಡುವ ಅಪಚಾರ. ಟಿಪ್ಪು ಎಂದೂ ಮತಾಂಧನಾಗಿರಲಿಲ್ಲ. ಆತ ಶೃಂಗೇರಿ ಶಾರದಾ ಪೀಠದ ರಕ್ಷಕನಾಗಿದ್ದ. ಕೊಲ್ಲೂರು ದೇವಾಲಯಕ್ಕೂ ಕೊಡುಗೆ ಕೊಟ್ಟಿದ್ದ. ಹಾಗಾಗಿಯೇ ಈಗಲೂ ಕೊಲ್ಲೂರು ದೇವಾಲಯದಲ್ಲಿ ಸುಲ್ತಾನ್‌ ಆರತಿ ಎಂದು ಪೂಜೆ ಮಾಡುತ್ತಾರೆ ಎಂದರು.

ಟಿಪ್ಪು ಸುಲ್ತಾನ್‌ ತನ್ನ ಆಡಳಿತದ ವಿರುದ್ಧ ಇದ್ದವರಿಗೆ, ರಾಜ್ಯಕ್ಕೆ ತೊಂದರೆ ಕೊಡುತ್ತಿದ್ದವರಿಗೆ ತೊಂದರೆ ಕೊಟ್ಟಿರಬಹುದು. ಪಾಳೇಗಾರರನ್ನು ಸದೆ ಬಡಿದಿರಬಹುದು. ಇದು ಒಬ್ಬ ರಾಜನು ಮಾಡಬಹುದಾದ ಕನಿಷ್ಠ ಹೋರಾಟವೂ ಹೌದು. ಅದನ್ನೇ ಹಿಂದೂಗಳ ದಮನಕ್ಕೆ ಯತ್ನಿಸಿದ್ದ ಎಂದು ಅರ್ಥೈಸುವುದು ಸಲ್ಲದು ಎಂದರು. ಭಾರತದ ಸಂವಿಧಾನದಲ್ಲಿ ಝಾನ್ಸಿರಾಣಿ ಲಕ್ಷ್ಮಭಾಯಿ ಮತ್ತು ಟಿಪ್ಪು ಸುಲ್ತಾನರ ಭಾವಚಿತ್ರಗಳಿವೆ. ಟಿಪ್ಪು ದೇಶದ್ರೋಹಿಯಾಗಿದ್ದರೆ ಸಂವಿಧಾನ ರಚನಾಕಾರರೇಕೆ ಟಿಪ್ಪು ಭಾವಚಿತ್ರ ಅಳವಡಿಸುತ್ತಿದ್ದರು ಎಂದೂ ಪ್ರಶ್ನಿಸಿದರು.

ಧರ್ಮದ ದೃಷ್ಟಿಯಿಂದ ಇತಿಹಾಸ ನೋಡದಿರಿ: ಧರ್ಮ ಮತ್ತು ಪಕ್ಷ ರಾಜಕಾರಣದ ದೃಷ್ಟಿಯಿಂದ ಇತಿಹಾಸವನ್ನು ನೋಡಬಾರದು. ಸರ್ಕಾರ ಟಿಪ್ಪು ಜಯಂತಿಯನ್ನು ರದ್ದುಪಡಿಸಿದ ನಂತರವೇ ಟಿಪ್ಪು ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಜನರಲ್ಲಿ ಹೆಚ್ಚಾಗುತ್ತಿದೆ. ಸರ್ಕಾರವೇ ಟಿಪ್ಪು ಬಗ್ಗೆ ಹೆಚ್ಚು ತಿಳಿಸುಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗಿದೆ. ಹಾಗಿಯೇ ಈಗ ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲೂ ಟಿಪ್ಪು ಜಯಂತಿ ಆಚರಣೆ ಆರಂಭವಾಗಿದೆ ಎಂದರು.

ಧೋರಣೆ ಇಲ್ಲದ ವ್ಯಕ್ತಿ: ಟಿಪ್ಪುವನ್ನು ಇತಿಹಾಸದಿಂದ, ಜನರ ಮನಸ್ಸಿನಿಂದ ತೆಗೆದು ಹಾಕಲು ಸಾಧ್ಯವೇ ಇಲ್ಲ ಎಂದ ಅವರು, ಕೆಜೆಪಿಯಲ್ಲಿದ್ದಾಗ ಟಿಪ್ಪು ಪರ ಇದ್ಧ ಧೋರಣೆ ಬಿಜೆಪಿಗೆ ಬಂದ ಮೇಲೆ ಬದಲಾಗುವುದಾದರೆ ಅಂತಹ ಮುಖ್ಯಮಂತ್ರಿಯನ್ನು ಧೋರಣೆ ಇಲ್ಲದ ವ್ಯಕ್ತಿ ಎಂದು ಭಾವಿಸಬೇಕಾಗುತ್ತದೆ ಎಂದೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಪರೋಕ್ಷವಾಗಿ ಟೀಕಿಸಿದರು.

ದಸರಾ, ಜಂಬೂ ಸವಾರಿ ಟಿಪ್ಪು ಕೊಡುಗೆ: ಬೆಂಗಳೂರಿನ ಧಮೇಂದ್ರಕುಮಾರ್‌ ಮಾತನಾಡಿ, ಮೈಸೂರಿನ ದಸರಾ, ಜಂಬೂ ಸವಾರಿ ನಡೆಯುತ್ತಿರುವುದಕ್ಕೇ ಟಿಪ್ಪು ಸುಲ್ತಾನ್‌ ಕಾರಣ. ಹಾಗಾಗಿಯೇ ಈಗಲೂ ಮೈಸೂರು ಅರಮನೆಯಲ್ಲಿ ದಸರಾ ಸಂದರ್ಭದಲ್ಲಿ ನಡೆಯುವ ಖಾಸಗಿ ದರ್ಬಾರ್‌ನಲ್ಲಿ ವಂದಿ ಮಾಗಧರು ಬಹು ಪರಾಕ್‌ ಹೇಳುವಾಗ ಕನ್ನಡದ ನಂತರ ಉರ್ದುವಿನಲ್ಲಿಯೂ ಹೇಳುತ್ತಾರೆ. ಇದರು ಮೈಸೂರು ಸಂಸ್ಥಾನ ಟಿಪ್ಪುಗೆ ಕೊಡುತ್ತಾ ಬಂದಿರುವ ಗೌರವ ಎಂದರು. ಇತಿಹಾಸವನ್ನು ಇತಿಹಾಸದ ರೀತಿಯೇ ನೋಡಬೇಕು. ಆಗ ಮಾತ್ರ ಸತ್ಯ ಗೊತ್ತಾಗುತ್ತದೆ. ಮಹಾ ಭಾರತದಲ್ಲಿ ಅಭಿಮನ್ಯು ಹೇಗೋ ಹಾಗೆಯೇ ಟಿಪ್ಪು ಕೂಡ ಸ್ವಾತಂತ್ರ್ಯ ಹೋರಾಟದ ಅಭಿಮನ್ಯು ಎಂದ ಅವರು, ಟಿಪ್ಪು ಮತಾಂಧನಾಗಿರಲಿಲ್ಲ. ಆತ ಹಿಂದೂ – ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿದ್ದ ಎಂಬುದಕ್ಕೆ ಅನೇಕ ದಾಖಲೆಗಳಿವೆ ಎಂದೂ ಹೇಳಿದರು.

ಟಿಪ್ಪು ಭಾರತದ ಘನತೆಯ ಪ್ರತೀಕ: ಹಾಸನ ಮುಸಲ್ಮಾನ ಎಂಬ ಕಾರಣಕ್ಕೆ ಟಿಪ್ಪು ಸುಲ್ತಾನ್‌ರನ್ನು ವಿರೋಧಿಸುವು ಸಲ್ಲದು. ಟಿಪ್ಪು ಭಾರತದ ಘನತೆಯ ಪ್ರತೀಕ ಎಂದು ಮೈಸೂರಿನ ಪೆದ್ದಿ ಉರಿಲಿಂಗ ಮಠದ ಶ್ರೀ ಜ್ಞಾನಪ್ರಕಾಶ್‌ ಸ್ವಾಮೀಜಿ ಹೇಳಿದರು. ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಟಿಪ್ಪು ಇತಿಹಾಸ ಸಂರಕ್ಷಣಾ ಸಮಿತಿ ಆಯೋಜಿಸಿದ್ದ ಇತಿಹಾಸದಲ್ಲಿ ಟಿಪ್ಪು ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಈಗಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಯನ್ನು ಎತ್ತಿ ಹಿಡಿಯುತ್ತಿರುವುದು ಟಿಪ್ಪು ಸುಲ್ತಾನನ ಶೌರ್ಯ ಮತ್ತು ಅಂಬೇಡ್ಕರರು ರಚಿಸಿದ ಸಂವಿಧಾನ.

ಇಂಗ್ಲೆಂಡ್‌ನ‌ ವಸ್ತು ಸಂಗ್ರಹಾಲಯದಲ್ಲಿ ಟಿಪ್ಪುವಿನ ಪ್ರತಿಕೃತಿ, ಶಸ್ತ್ರಗಳು ಮತ್ತು ಅಮೆರಿಕಾದ ನಾಸಾದಲ್ಲಿ ಟಿಪ್ಪು ಬಳಸಿದ್ದ ರಾಕೆಟ್‌ ತಂತ್ರಜ್ಞಾನದ ಉಲ್ಲೇಖವಿದೆ ಎಂದು ತಿಳಿಸಿದರು. ಟಿಪ್ಪು ಪರರ ಹಿತ ಬಯಸುತ್ತಿದ್ದ ಶ್ರೇಷ್ಠ ಮುಸಲ್ಮಾನ ಎಂದ ಅವರು, ದೇಶ ಮುಖ್ಯವೇ ಹೊರತು ಧರ್ಮ ಮುಖ್ಯವಲ್ಲ. ಜನರ ದಿಕ್ಕು ತಪ್ಪಿಸುವ ಕೆಲವನ್ನು ಯಾವುದೇ ಪಕ್ಷ, ಪಂಗಡ ಮಾಡಬಾರದು. ಜನರಿಗೆ ಇತಿಹಾಸ ಗೊತ್ತಿದೆ ಎಂದರು.

ಟಾಪ್ ನ್ಯೂಸ್

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.