ಪಂಜಾಬ್ಗೆ ಸೋಲಿನ ಪಂಚ್ ಕೊಟ್ಟ ಕರ್ನಾಟಕ
Team Udayavani, Nov 24, 2019, 11:21 PM IST
ಸೂರತ್: ಸಯ್ಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಕೂಟದ ಸೂಪರ್ ಲೀಗ್ನಲ್ಲಿ ಅಮೋಘ ಪ್ರದರ್ಶನ ಮುಂದುವರಿಸಿದ ಹಾಲಿ ಚಾಂಪಿಯನ್ ಕರ್ನಾಟಕ ರವಿವಾರದ ಪಂದ್ಯದಲ್ಲಿ ಪಂಜಾಬ್ ವಿರುದ್ಧ 7 ವಿಕೆಟ್ಗಳ ಸೋಲುಣಿಸಿದೆ. ಇದರಿಂದ ಸೆಮಿಫೈನಲ್ ಪ್ರವೇಶವನ್ನು ಬಹುತೇಕ ಖಾತ್ರಿಗೊಳಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ 20 ಓವರ್ಗಳಲ್ಲಿ 6 ವಿಕೆಟ್ಗೆ 163 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಕರ್ನಾಟಕ ಆರಂಭಿಕ ಬ್ಯಾಟ್ಸ್ಮನ್ ಕೆ.ಎಲ್. ರಾಹುಲ್ (ಅಜೇಯ 84 ರನ್, 48 ಎಸೆತ, 7 ಬೌಂಡರಿ, 4 ಸಿಕ್ಸರ್) ಅವರ ಭರ್ಜರಿ ಬ್ಯಾಟಿಂಗ್ನಿಂದ 18 ಓವರ್ಗಳಲ್ಲಿ 3 ವಿಕೆಟ್ಗೆ 167 ರನ್ ಗಳಿಸಿ ಜಯ ದಾಖಲಿಸಿತು. ಇದರೊಂದಿಗೆ ಕರ್ನಾಟಕ ತಂಡ ಲೀಗ್, ಸೂಪರ್ ಲೀಗ್ ಸೇರಿದಂತೆ ಸತತ 7ನೇ ಗೆಲುವು ಸಾಧಿಸಿತು. ಸೋಮವಾರ ನಡೆಯುವ ಸೂಪರ್ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಕರ್ನಾಟಕ ಬಲಿಷ್ಠ ಮುಂಬಯಿ ತಂಡವನ್ನು ಎದುರಿಸಲಿದೆ.
ರಾಹುಲ್ ಅಜೇಯ ಆಟ
ಚೇಸಿಂಗ್ ವೇಳೆ ಇನ್ಫಾರ್ಮ್ ಆರಂಭಕಾರ ದೇವದತ್ತ ಪಡಿಕ್ಕಲ್ ಕೇವಲ 2 ರನ್ ಮಾಡಿ ಔಟಾದಾಗ ಕರ್ನಾಟಕ ಆಘಾತ ಅನುಭವಿಸಿತು. ಆಗ ಸ್ಕೋರ್ 33 ರನ್ ಆಗಿತ್ತು. ಆದರೆ ಒಂದೆಡೆ ಗಟ್ಟಿಯಾಗಿ ಕ್ರೀಸಿಗೆ ಅಂಟಿಕೊಂಡ ರಾಹುಲ್ ಪಂಜಾಬ್ ಬೌಲರ್ಗಳ ಮೇಲೆ ಸವಾರಿ ಮಾಡುತ್ತಲೇ ಸಾಗಿದರು. ಕರ್ನಾಟಕದ ಜಯಭೇರಿ ವೇಳೆ ರಾಹುಲ್ ಅಜೇಯ 84 ರನ್ ಮಾಡಿದ್ದರು. 48 ಎಸೆತಗಳ ಈ ಆಕರ್ಷಕ ಇನ್ನಿಂಗ್ಸ್ ವೇಳೆ 7 ಬೌಂಡರಿ, 4 ಸಿಕ್ಸರ್ ಸಿಡಿಯಲ್ಪಟ್ಟಿತು.
ರೋಹನ್ ಕದಮ್ (23), ನಾಯಕ ಮನೀಷ್ ಪಾಂಡೆ (33 ರನ್, 29 ಎಸೆತ, 3 ಸಿಕ್ಸರ್) ಮತ್ತು ಕರುಣ್ ನಾಯರ್ (ಅಜೇಯ 23 ರನ್, 11 ಎಸೆತ, 2 ಬೌಂಡರಿ, 2 ಸಿಕ್ಸರ್) ರಾಹುಲ್ಗೆ ಉತ್ತಮ ಬೆಂಬಲ ನೀಡಿದರು.
ರೋನಿತ್ ಮಾರಕ ದಾಳಿ
ಪಂಜಾಬ್ ಪರ ಮನ್ದೀಪ್ ಸಿಂಗ್ (76 ರನ್, 50 ಎಸೆತ, 9 ಬೌಂಡರಿ, 2 ಸಿಕ್ಸರ್) ಹಾಗೂ ಗುರುಕೀರತ್ ಸಿಂಗ್ (44 ರನ್, 32 ಎಸೆತ, 2 ಬೌಂಡರಿ, 3 ಸಿಕ್ಸರ್) ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಉಳಿದ ಬ್ಯಾಟ್ಸ್ಮನ್ಗಳು ಕ್ಲಿಕ್ ಆಗಲಿಲ್ಲ. ಪಂಜಾಬ್ಗ ಕಡಿವಾಣ ಹಾಕುವಲ್ಲಿ ರೋನಿತ್ ಮೋರೆ (27ಕ್ಕೆ 4) ಪಾತ್ರ ಮಹತ್ವದ್ದಾಗಿತ್ತು.
ಸಂಕ್ಷಿಪ್ತ ಸ್ಕೋರ್
ಪಂಜಾಬ್: 20 ಓವರ್ಗಳಲ್ಲಿ 6 ವಿಕೆಟಿಗೆ 163 (ಮನ್ದೀಪ್ 76, ಗುರುಕೀರತ್ 44, ಮೋರೆ 27ಕ್ಕೆ 4). ಕರ್ನಾಟಕ: 18 ಓವರ್ಗಳಲ್ಲಿ 3 ವಿಕೆಟಿಗೆ 167 (ರಾಹುಲ್ ಅಜೇಯ 84, ಪಾಂಡೆ 33, ಕದಮ್ 23, ನಾಯರ್ ಅಜೇಯ 23).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ