ಸೇನೆಯ ಕಲ್ಯಾಣಕ್ಕೆ ದೇಣಿಗೆ ನೀಡಿ; ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಹಿನ್ನೆಲೆ ಮೋದಿ ಕರೆ
Team Udayavani, Dec 7, 2019, 11:30 PM IST
ನವದೆಹಲಿ: ದೇಶದ ಸೇನಾ ಪಡೆಯ ಕಲ್ಯಾಣಕ್ಕಾಗಿ ದೇಣಿಗೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ದೇಶದ ಜನತೆಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಅವರು ಮೈಗವ್.ಇನ್ ವೆಬ್ಸೈಟ್ (my gov.in) ನಲ್ಲಿ ಸಂದೇಶ ನೀಡಿದ್ದಾರೆ. ಸಶಸ್ತ್ರ ಸೇನಾ ಪಡೆಗಳ ಧ್ವಜ ದಿನಾಚರಣೆ ಹಿನ್ನೆ ಲೆಯಲ್ಲಿ ಅವರು ಈ ಮನವಿ ಮಾಡಿದ್ದಾರೆ. ಸಶಸ್ತ್ರ ಸೇನಾ ಪಡೆಗಳ ಧ್ವಜ ದಿನದಂದು ಯೋಧರ ತ್ಯಾಗ ವನ್ನು ನೆನಪಿಸಿಕೊಳ್ಳಲೇಬೇಕು. ಅವರ ಕುಟುಂ ಬದ ಸದಸ್ಯರಿಗಾಗಿ ದೇಣಿಗೆ ನೀಡಬೇಕು ಎಂದು ಪ್ರಧಾನಿ ಮನವಿ ಮಾಡಿದ್ದಾರೆ. 1949ರ ಬಳಿಕ ಪ್ರತಿ ವರ್ಷ ಡಿ.7ರಂದು ಸಶಸ್ತ್ರ ಸೇನಾ ಪಡೆಗಳ ಧ್ವಜ ದಿನಾ ಆಚರಿಸಲಾಗುತ್ತದೆ.