ಅಪರೂಪದ ಘಟನೆಗೆ ಸಾಕ್ಷಿಯಾದ ಬಾರಾಡಿ ಕಂಬಳ: ನಾಲ್ಕು ಬಾರಿ ನಡೆದ ಒಂದು ಸೆಮಿ ಫೈನಲ್ ಪಂದ್ಯ


Team Udayavani, Dec 15, 2019, 2:24 PM IST

adda

Representative Image

ಮಣಿಪಾಲ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೀಗ ಕಂಬಳದ ಕಹಳೆಯದ್ದೇ ಸದ್ದು. ಪ್ರತಿ ಶನಿವಾರ ಒಂದಲ್ಲ ಒಂದು ಕಡೆ ಕಂಬಳ ನಡೆಯುತ್ತಿದೆ. ಅಂತೆಯೇ ಡಿಸೆಂಬರ್ 14 ಮತ್ತು 15ರಂದು ಬಾರಾಡಿ ಬೀಡಿನಲ್ಲಿ ನಡೆದ ಸೂರ್ಯ ಚಂದ್ರ ಜೋಡುಕರೆ ಕಂಬಳ ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ.

ದಾಖಲೆಯ 34 ನೇ ವರ್ಷದ ಬಾರಾಡಿ ಬೀಡು ಜೋಡುಕರೆ ಕಂಬಳದಲ್ಲಿ ಸುಮಾರು 156 ಜೋಡಿ ಕೋಣಗಳು ಭಾಗವಹಿಸಿದ್ದು, ಶನಿವಾರ ಬೆಳಿಗ್ಗೆ ಆರಂಭವಾಗಿತ್ತು. ಆರು ವಿಭಾಗದ ಕೋಣಗಳು ಜಿದ್ದಿಗೆ ಬಿದ್ದವರಂತೆ ಸ್ಪರ್ಧೆ ನೀಡಿ ಕಂಬಳದ ಮೆರುಗು ಹೆಚ್ಚಿಸಿದ್ದವು.

ಎಲ್ಲಾ ವಿಭಾಗದ ಕೋಣಗಳು ಸೆಮಿ ಫೈನಲ್ ಕೂಟ ಮುಗಿಸಿ ಅಂತಿಮ ಹಂತಕ್ಕೆ ಸಾಗುತ್ತಿದ್ದರೆ ಒಂದು ವಿಭಾಗದ ಸೆಮಿ ಫೈನಲ್ ಇನ್ನೂ ಮುಗಿದಿರಲಿಲ್ಲ. ಯಾಕೆಂದರೆ ಆ ವಿಭಾಗದ ಒಂದು ಸ್ಪರ್ಧೆ ಮತ್ತೆ ಮತ್ತೆ ಟೈ ಆಗುತ್ತಿತ್ತು.

ಅಡ್ಡಹಲಗೆ ವಿಭಾಗದಲ್ಲಿ ಸ್ಪರ್ಧಿಸಿದ್ದ ಹಂಕರ್ಜಾಲ್ ಭಿರ್ಮಣ್ಣ ಶೆಟ್ಟಿ  ಮತ್ತು ಬೋಳಾರ ತ್ರಿಶಾಲ್ ಪೂಜಾರಿಯವರ ಕೋಣಗಳು ಸೆಮಿ ಫೈನಲ್ ಸುತ್ತಿಗೇರಿದ್ದರು. ಆದರೆ ಸೆಮಿ ಫೈನಲ್ ಸ್ಪರ್ಧೆಯ ತೀವ್ರತೆ ಎಷ್ಟಿತ್ತೆಂದರೆ ಒಂದು ಬಾರಿಯ ಸೆಮಿ ಫೈನಲ್ ನಲ್ಲಿ ಪ್ರಕಟವಾಗಬೇಕಿದ್ದ ಫಲಿತಾಂಶ ನಾಲ್ಕು ಬಾರಿ ನಡೆಯಿತು. ಮೊದಲ ಮೂರು ಬಾರಿಯ ಓಟದಲ್ಲೂ ಎರಡು ಜೋಡಿ ಕೋಣಗಳೂ ಸರಿಸಮನಾಗಿ ಹೆಜ್ಜೆ ಹಾಕಿದ್ದವು. ಹೀಗಾಗಿ ಮೊದಲ ಮೂರು ಓಟದಲ್ಲೂ ವಿಜೇತರನ್ನು ಘೋಷಿಸಲಾಗಲಿಲ್ಲ.

ಮೂರು ಬಾರಿ ಸರಿ ಸಮನಾಡಿ ಓಡಿದ ಕೋಣಗಳಿಗೆ ನಾಲ್ಕನೇ ಬಾರಿಗೆ ಕರೆ ಬದಲಿ ಮಾಡಿ ಸ್ಪರ್ಧೆಗೆ ಅವಕಾಶ ನೀಡಲಾಯಿತು. ಮೊದಲ ಮೂರು ಓಟದಲ್ಲಿ ಸೂರ್ಯ ಕರೆಯಲ್ಲಿ ಓಡಿದ್ದ ಹಂಕರ್ಜಾಲು ಈಗ ಚಂದ್ರ ಕರೆಯಲ್ಲೂ, ಚಂದ್ರ ಕರೆಯಲ್ಲಿ ಓಡಿದ ಬೋಳಾರ ಸೂರ್ಯ ಕರೆಯಲ್ಲಿ ಓಡುವುದೆಂದು ತೀರ್ಮಾನಕ್ಕೆ ಬರಲಾಯಿತು. ಒಂದು ವೇಳೆ ನಾಲ್ಕನೇ ಬಾರಿಯೂ ಸರಿಸಮವೆಂದು ತೀರ್ಪು ಬಂದರೆ ಈರ್ವರನ್ನೂ ಜಂಟಿ ದ್ವಿತೀಯ ಸ್ಥಾನಿಯೆಂದು ಘೋಷಿಸುವ ನಿರ್ಧಾರಕ್ಕೆ ಬರಲಾಗಿತ್ತು. ( ಮತ್ತೊಂದು ಸೆಮಿ ಫೈನಲ್ ನಲ್ಲಿ ಮೋರ್ಲ ಗಿರೀಶ್ ಆಳ್ವರ ಕೋಣಗಳು ಫೈನಲ್ ಗೇರಿದ್ದವು)

ಮತ್ತೆ ನಾಲ್ಕನೇ ಬಾರಿಗೆ ಅದೇ ಕೋಣಗಳು ಕಂಬಳ ಕರೆಗೆ ಇಳಿದಾಗ ಸಮಸ್ಥ ಕಂಬಳಾಭಿಮಾನಿಗಳ ಚಿತ್ತ ಅತ್ತ ನೆಟ್ಟಿತ್ತು.’ ಅಲಾ ಬುಡಿಯೆರ್’ ಎಂದು ಕೇಳಿದಾಕ್ಷ ಮತ್ತೆ ಅದೇ ವೇಗದಲ್ಲಿ, ಅದೇ ಗಾಂಭೀರ್ಯದಿಂದ ಉಭಯ ಜೋಡಿಗಳು ಓಡಿದ್ದವು. ಪ್ರೇಕ್ಷಕರೆಲ್ಲಾ ಕಾತರದಿಂದ ನೋಡುತ್ತಿದ್ದಂತೆ ಮತ್ತೆ ಪೈಪೋಟಿಯಲ್ಲಿ ಓಡಿದರೂ ಅಂತಿಮವಾಗಿ ಕೂದಲೆಳೆ ಅಂತರದಲ್ಲಿ ಸೂರ್ಯ ಕರೆಯ ಬೋಳಾರ ತ್ರಿಶಾಲ್ ಪೂಜಾರಿಯವರ ಕೋಣಗಳು ಗೆಲುವಿನ ರೇಖೆ ಮುಟ್ಟಿದ್ದವು.

ಕಂಬಳ ಕೂಟದಲ್ಲಿ ಅಪರೂಪ ಎಂಬಂತೆ ನಡೆಯುವ ಈ ಘಟನೆ ಕಂಬಾಳಭಿಮಾನಿಗಳ ಮನಸ್ಸಿನಲ್ಲಿ ಅಚ್ಚೊತ್ತುವಂತೆ ಮಾಡಿದೆ.

ಟಾಪ್ ನ್ಯೂಸ್

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.