ಸತತ ಪ್ರಯತ್ನದ ಬಳಿಕ ಅಂಧ ಬಾಲಕನ ಕೈ ಸೇರಿದ ಆಧಾರ್!
Team Udayavani, Dec 18, 2019, 11:45 PM IST
ಬೆಳ್ಳಾರೆ: ಐದು ಬಾರಿಯ ಪ್ರಯತ್ನದ ಬಳಿಕ ಅಂಧ ಬಾಲಕನೊಬ್ಬನಿಗೆ ಆಧಾರ್ ಕಾರ್ಡ್ ಕೈ ಸೇರಿದ ಘಟನೆ ನಡೆದಿದೆ.
ಮುರುಳ್ಯ ಗ್ರಾಮದ ಶಾಂತಿನಗರ ನಿವಾಸಿ ಇಬ್ರಾಹಿಂ ಖಲೀಲ್ ಮತ್ತು ಫಾತಿಮತುಲ್ ಝುಹಾರ ಅವರ ಪುತ್ರ ಅಹಮ್ಮದ್ ಹುಸೇನ್ ಹುಟ್ಟಿನಿಂದಲೇ ದೃಷ್ಟಿ ದೋಷದಿಂದ ಬಳಲುತ್ತಿರುವ ಬಾಲಕ.
ದೃಷ್ಟಿ ಸಮಸ್ಯೆಯಿಂದಾಗಿ ಆತ ಆಧಾರ್ ಕಾರ್ಡಿನಿಂದಲೂ ವಂಚಿತನಾಗಿದ್ದ. ಸತತ 5 ಬಾರಿ ಪ್ರಯತ್ನಿಸಿದರೂ ದೃಷ್ಟಿ ದೋಷದಿಂದಾಗಿ ಆಧಾರ್ ತಿರಸ್ಕೃತಗೊಳ್ಳುತ್ತಿತ್ತು. ವಿವಿಧ ಇಲಾಖೆಗಳ ಮೂಲಕ ಯತ್ನಿಸಿದರೂ ಸಮಸ್ಯೆ ಮಾತ್ರ ಪರಿಹಾರ ಕಾಣಲೇ ಇಲ್ಲ. ಕೊನೆಗೆ ಸುಳ್ಯ ತಹಶೀಲ್ದಾರ್ ಎನ್.ಎ. ಕುಂಞಿ ಅಹ್ಮದ್ ಅವರು ಉನ್ನತ ಮಟ್ಟದಲ್ಲಿ ಪ್ರಯತ್ನಿಸಿ ಆಧಾರ್ ಕಾರ್ಡ್ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.