ಮಹಿರ ಮಹೇಶ್‌ ಮತ್ತೊಂದು ಸಿನಿಮಾ

ಆ್ಯಕ್ಷನ್‌ ಜೊತೆ ಸೈಕೋ ಥ್ರಿಲ್ಲರ್‌

Team Udayavani, Dec 21, 2019, 7:02 AM IST

Mahesh-Gowda

ಇತ್ತೀಚೆಗೆ “ಮಹಿರ’ ಚಿತ್ರದ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ಮಹೇಶ್‌ ಗೌಡ, ಹೊಸ ವರ್ಷದಲ್ಲಿ ಹೊಸ ಕಥೆಯೊಂದಿಗೆ ಪುನಃ ಪ್ರೇಕ್ಷಕರ ಎದುರು ಬರಲು ಸಜ್ಜಾಗುತ್ತಿದ್ದಾರೆ. ಹೌದು, ಮಹೇಶ್‌ಗೌಡ ನಿರ್ದೇಶನದ ಚೊಚ್ಚಲ ಚಿತ್ರ “ಮಹಿರ’ ಬಗ್ಗೆ ಎಲ್ಲೆಡೆಯಿಂದಲೂ ಒಳ್ಳೆಯ ಮೆಚ್ಚುಗೆ ಸಿಕ್ಕಿತ್ತು. ಆ ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆಗಳ ಬಳಿಕ ಮಹೇಶ್‌ಗೌಡ ಅವರನ್ನು ಒಂದಷ್ಟು ಅವಕಾಶಗಳು ಹುಡುಕಿ ಬಂದಿದ್ದು ನಿಜ.

ಈಗ ಅವರು, ಹೊಸತರಹದ ಕಥೆ ಆಯ್ಕೆ ಮಾಡಿಕೊಂಡು ಜನವರಿ ಅಥವಾ ಫೆಬ್ರವರಿಯಲ್ಲಿ ಚಾಲನೆ ಕೊಡಲು ತಯಾರಿ ನಡೆಸಿದ್ದಾರೆ. ಈ ಬಗ್ಗೆ ಹೇಳುವ ಮಹೇಶ್‌ಗೌಡ, “ಈ ಬಾರಿ ಒಬ್ಬ ಹೀರೋ ಇರಲಿದ್ದಾರೆ. ತಂತ್ರಜ್ಞರೆಲ್ಲರೂ ಹೊಸಬರಿರುತ್ತಾರೆ. “ಮಹಿರ’ ನಂತರ ಸಿನಿಮಾ ನಿರ್ದೇಶನ ಮಾಡಲು ಅವಕಾಶಗಳು ಬಂದಿದ್ದು ನಿಜ. ನಾನು ಅವಸರದಲ್ಲಿ ಏನೋ ಮಾಡಬಾರದು ಅಂತ ಸಮಯ ತೆಗೆದುಕೊಂಡೆ. ಈಗ ಒಂದು ಹೊಸ ರೀತಿಯ ಕಥೆ ಹೆಣೆದಿದ್ದೇನೆ.

ಅದೊಂದು ಆ್ಯಕ್ಷನ್‌ ಜಾನರ್‌ ಇರಲಿದೆ. ಸೈಕೋ ಥ್ರಿಲ್ಲರ್‌ ಕಥೆಯಲ್ಲಿ ಮೈಂಡ್‌ ಗೇಮ್‌ ಇರಲಿದೆ. ಈ ಸಲ ಡಿಫ‌ರೆಂಟ್‌ ಆ್ಯಕ್ಷನ್‌ನೊಂದಿಗೆ ನೋಡುಗರನ್ನು ಮೆಚ್ಚಿಸುವ ಪ್ರಯತ್ನ ಮಾಡುತ್ತೇನೆ. ಅದೊದು ಪರಿಪೂರ್ಣ ಆ್ಯಕ್ಷನ್‌ ಇರಲಿದೆ. ವಿದೇಶದಲ್ಲಿರುವ ಗೆಳೆಯರು ನಿರ್ಮಾಣದ ಜವಾಬ್ದಾರಿ ಹೊರುತ್ತಿದ್ದಾರೆ. ಕಥೆ, ಚಿತ್ರಕಥೆಯ ಜೊತೆಗೆ ನಿರ್ದೇಶನದ ಜವಾಬ್ದಾರಿ ನನ್ನದು. ಚಿತ್ರಕ್ಕಿನ್ನು ನಾಯಕ, ನಾಯಕಿಯ ಆಯ್ಕೆ ನಡೆಯಬೇಕಿದೆ.

ಚಿತ್ರದ ವಿಶೇಷವೆಂದರೆ, ಇಲ್ಲಿ ಹಾಡು ಇರಲ್ಲ. ವಿನಾಕಾರಣ ಹಾಡು ತುರುಕಲು ಇಷ್ಟವಿಲ್ಲ. ಒಂದಂತೂ ನಿಜ, “ಮಹಿರ’ ಸಿನಿಮಾಗಿಂತಲೂ ವಿಭಿನ್ನ ಸಿನಿಮಾ ಕೊಡುವ ಪ್ರಯತ್ನ ಮಾಡುತ್ತೇನೆ. ಬಹುತೇಕ ಕನ್ನಡ ಕಲಾವಿದರೇ ಇರಲಿದ್ದಾರೆ’ ಎಂದು ವಿವರಿಸುವ ನಿರ್ದೇಶಕರು, “ಮಹಿರ’ ಕಮರ್ಷಿಯಲ್‌ ಆಗದಿದ್ದರೂ, ಒಳ್ಳೆಯ ಹೆಸರು ತಂದುಕೊಟ್ಟಿತು. ಹಾಗಾಗಿಯೇ, ನನ್ನ ಮೇಲೆ ಭರವಸೆ ಇಟ್ಟು, ಸಿನಿಮಾ ಮಾಡುವ ಅವಕಾಶ ಕೊಟ್ಟಿದ್ದಾರೆ.

ನನ್ನ ಹೊಸ ಕಥೆಯಲ್ಲಿ ನಾಯಕ ಇದ್ದರೂ, ಕಥೆ ಸಾಗೋದು ನಾಯಕಿ ಮೇಲೆ. ನನ್ನ ಕಥೆಯಲ್ಲಿ ನಾಯಕಿಗೆ ಪ್ರಧಾನ ಪಾತ್ರವಿದೆ. ಅದರಲ್ಲೂ ಹೆಚ್ಚು ಆದ್ಯತೆ ಮಹಿಳಾ ಪಾತ್ರಕ್ಕೆ ಕೊಡುತ್ತೇನೆ. ಅದೊಂದು ಕಂಟೆಂಟ್‌ ಇರುವ ಚಿತ್ರ. ಸ್ಟ್ರಾಂಗ್‌ ಆ್ಯಕ್ಷನ್‌ ಸಿನಿಮಾದ ಹೈಲೈಟ್‌’ ಎಂದಷ್ಟೇ ವಿವರಿಸುವ ಅವರು, ಇಷ್ಟರಲ್ಲೇ ಚಿತ್ರದ ನಾಯಕ, ನಾಯಕಿ, ಶೀರ್ಷಿಕೆ ಹಾಗು ಉಳಿದ ವಿವರ ಕೊಡುವುದಾಗಿ ಹೇಳುತ್ತಾರೆ.

ಟಾಪ್ ನ್ಯೂಸ್

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.