ಬೆಳಗಾವಿ ಸಿದ್ದಿಗಳಿಗೂ ಎಸ್ಟಿ ಸೌಲಭ್ಯ ನೀಡಿ
Team Udayavani, Dec 24, 2019, 3:49 PM IST
ಕಾರವಾರ: ಸಿದ್ದಿ ಸಮುದಾಯವನ್ನು ಉತ್ತರ ಕನ್ನಡ ಜಿಲ್ಲೆಯ ಮೂಲ ನಿವಾಸಿಗಳೆಂದು ರಾಜ್ಯ ಸರ್ಕಾರ ಪರಿಗಣಿಸಬೇಕು. ಧಾರವಾಡ ಹಾಗೂ ಬೆಳಗಾವಿ ಸಿದ್ದಿಗಳಿಗೂ ಎಸ್ಟಿ ಸೌಲಭ್ಯ ನೀಡಬೇಕೆಂದು ಆಗ್ರಹಿಸಿ ಸೋಮವಾರ ಸಿದ್ದಿಗಳಿಂದ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಮುಖ್ಯರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ಎಲ್ಲ ತಾಲೂಕುಗಳಿಂದ ಬಂದಿದ್ದ ಸಿದ್ದಿಗಳು ಅಖೀಲ ಕರ್ನಾಟಕ ಸಿದ್ದಿ ಸಮಾಜ ಫೌಂಡೇಶನ್ ಟ್ರಸ್ಟ್ ಬ್ಯಾನರ್ ಅಡಿ ಜಿಲ್ಲಾಧಿಕಾರಿ ಕಚೇರಿ ಬಳಿ ಒಂದು ಗಂಟೆಕಾಲ ಧರಣಿ ನಡೆಸಿದರು. ಸಿದ್ದಿ ಸಮುದಾಯದ ಮುಖಂಡ ದಿಯೋಗ ಸಿದ್ದಿ ಮಾತನಾಡಿ, ಕೇಂದ್ರ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಸಿದ್ದಿಗಳನ್ನು ಎಸ್ಟಿ ಸಮುದಾಯ ಎಂದು ಸಂಸತ್ನಲ್ಲಿ ಘೋಷಿಸಬೇಕು. ಉತ್ತರ ಕನ್ನಡದ ಸಿದ್ದಿಗಳಿಗೆ ಸಿಗುವ ಸೌಲಭ್ಯಗಳು ಪಕ್ಕದ ಜಿಲ್ಲೆಯ ಸಿದ್ದಿಗಳಿಗೂ ಸಿಗಬೇಕೆಂದು ಆಗ್ರಹಿಸಿದರು. ಧಾರವಾಡ ಸಂಸದ ಹಾಗೂ ಸಚಿವ ಪ್ರಹ್ಲಾದ್ ಜೋಶಿ ಅವರಿಂದ ಸಿದ್ದಿಗಳಿಗೆ ಎಲ್ಲಾ ಸವಲತ್ತುಗಳು ಸಿಗುವುದನ್ನು ಎದುರು ನೋಡುತ್ತಿದ್ದೇವೆ. ಅಧಿಕಾರಿಗಳು ಬೆಳಗಾವಿ, ಧಾರವಾಡ ಜಿಲ್ಲೆಯಲ್ಲಿ ಸಿದ್ದಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ. ಸರ್ಕಾರಿ ಸೌಲಭ್ಯ ನೀಡುತ್ತಿಲ್ಲ ಎಂದು ಸರ್ಕಾರದ ಗಮನಸೆಳೆದರು.
ಭೂಮಿ ಹಕ್ಕು ಕೊಡಿ: ಕೇಂದ್ರ ಸರ್ಕಾರ ಜಾರಿಗೆ ತಂದ 2006 ಅರಣ್ಯ ಹಕ್ಕು ಕಾಯ್ದೆ ಹಾಗೂ ತಿದ್ದುಪಡಿ ಕಾಯ್ದೆ 2011ಅಡಿ ಅರಣ್ಯ ಹಕ್ಕುಗಳನ್ನು ಎಲ್ಲಾ ಸಿದ್ದಿಗಳಿಗೆ ನೀಡುತ್ತಿಲ್ಲ. ಸಿದ್ದಿಗಳಿಗೆ 4 ಹೆಕ್ಟೇರ್ ಭೂಮಿಯನ್ನು ಸಾಮೂಹಿಕ ಉಳುಮೆಗೆ ನೀಡಬೇಕೆಂದು ಸುಪ್ರಿಂಕೋರ್ಟ್ ಆದೇಶವಿದ್ದು, ಕಾರ್ಯಗತವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 2009 ರಿಂದ ಭೂಮಿ ಹಕ್ಕನ್ನ ಅಂದಿನ ಯುಪಿಎ ಸರ್ಕಾರ ನೀಡಿತ್ತು. ಸುಪ್ರಿಂಕೋರ್ಟ್ ನಿರ್ದೇಶನ ಸಹ ಇದೆ. ಆದರೆ ಅಧಿಕಾರಿಗಳಿಗೆ ಭೂಮಿ ಹಕ್ಕು ನೀಡಲು, ಅನುಷ್ಠಾನ ಮಾಡಲು ಮನಸಿಲ್ಲ. ವಾಸ್ತವವಾಗಿ ಅರಣ್ಯ ರಕ್ಷಿಸಿದವರು ಸಿದ್ದಿಗಳು ಎಂದೂ ಅಭಿಪ್ರಾಯಪಟ್ಟರು.
ಧರಣಿ ನಂತರ ಕಾರವಾರ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಯಿತು. ಸಿದ್ದಿ ಸಮುದಾಯದಲ್ಲಿ ಕಲಿತ ಯುವಕ ಯುವತಿಯರಿಗೆ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಸರ್ಕಾರಿ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’
PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?