ಪಾಕ್‌ ಬಣ್ಣ ಬಯಲು


Team Udayavani, Dec 28, 2019, 6:10 AM IST

pak-banna

ಪಾಕಿಸ್ಥಾನದ ಮಾಜಿ ಕ್ರಿಕೆಟಿಗ ದಾನಿಶ್‌ ಕನೇರಿಯಾಗೆ ತಂಡದಲ್ಲಿ ಆಗುತ್ತಿದ್ದ ತಾರತಮ್ಯ ಕುರಿತು ಆ ದೇಶದ ಮಾಜಿ ಕ್ರಿಕೆಟಿಗ ಶೋಯೆಬ್‌ ಅಖ್ತರ್‌ ಬಹಿರಂಗಪಡಿಸಿದ ವಿಷಯಗಳು ಆ ದೇಶದ ನಿಜ ಬಣ್ಣವನ್ನು ಬಯಲು ಗೊಳಿಸಿದೆ.

ಹಿಂದೂ ಎಂಬ ಕಾರಣಕ್ಕೆ ಕನೇರಿಯಾ ಅವರನ್ನು ತಂಡದ ಸಹ ಸದಸ್ಯರೇ ದ್ವಿತೀಯ ದರ್ಜೆ ನಾಗರಿಕನಂತೆ ನೋಡಿಕೊಳ್ಳುತ್ತಿದ್ದರು. ಕೆಲವು ಸದಸ್ಯರು ಕನೇರಿಯಾ ಜೊತೆಗೆ ಊಟಕ್ಕೂ ಕುಳಿತುಕೊಳ್ಳುತ್ತಿರಲಿಲ್ಲ ಎಂಬ ಸತ್ಯವನ್ನು ಅಖ್ತರ್‌ ಬಹಿರಂಗಪಡಿಸಿದ್ದಾರೆ. ಒಬ್ಬ ಕ್ರಿಕೆಟ್‌ ಆಟಗಾರನನ್ನೇ
ಆತ ಅನ್ಯ ಧರ್ಮದವ ಎಂಬ ಕಾರಣಕ್ಕೆ ಈ ರೀತಿ ನಡೆಸಿಕೊಂಡ ದೇಶ ಇನ್ನು ತನ್ನಲ್ಲಿರುವ ಅನ್ಯ ಧರ್ಮಗಳ ಅಲ್ಪಸಂಖ್ಯಾತರನ್ನು ಯಾವ ರೀತಿ ನಡೆಸಿಕೊಂಡಿರಬಹುದು ಎಂದು ಊಹಿಸುವುದು ಕಷ್ಟವೇನಲ್ಲ.

ಪಾಕಿಸ್ಥಾನದ ಕ್ರಿಕೆಟ್‌ ಇತಿಹಾಸದಲ್ಲಿ ರಾಷ್ಟ್ರೀಯ ತಂಡದಲ್ಲಿ ಆಡಿದ ಎರಡನೇ ಹಿಂದೂ ಆಟಗಾರ ದಾನಿಶ್‌ ಕನೇರಿಯಾ. ಅದಕ್ಕೂ ಮೊದಲು ಅವರ ಮಾವ ಅನಿಲ್‌ ದಳಪತ್‌ ಪಾಕ್‌ಗಾಗಿ ಕೆಲವು ಅಂತಾರಾಷ್ಟ್ರೀಯ ಪಂದ್ಯಗಳನ್ನು
ಆಡಿದ್ದರು. ಕನೇರಿಯಾರನ್ನು ಓರ್ವ ಆಟಗಾರನಾಗಿಯೂ ಪಾಕ್‌ ಕ್ರಿಕೆಟ್‌ ತಂಡ ಸರಿಯಾಗಿ ನಡೆಸಿಕೊಂಡಿಲ್ಲ. ಅವರ ಆಟಕ್ಕೆ ಸಲ್ಲಬೇಕಾದ ಮನ್ನಣೆಯನ್ನು ನೀಡಲಿಲ್ಲ. ಅಲ್ಲದೆ ತಂಡದಲ್ಲಿ ಅವರು ಪದೇ ಪದೇ ಹೀಯಾಳಿಕೆಗೆ
ಗುರಿಯಾಗುತ್ತಿದ್ದರು ಎಂಬ ಆಘಾತಕಾರಿ ವಿಷಯವನ್ನು ಅಖ್ತರ್‌ ಬಯಲು ಮಾಡಿದ್ದಾರೆ. ಇದು ಹಿಂದೂಗಳು ಸೇರಿದಂತೆ ಬೇರೆ ಧರ್ಮದವರು ಪಾಕಿಸ್ಥಾನದಲ್ಲಿ ಯಾವ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂಬುದ ಕ್ಕೊಂದು ನಿದರ್ಶನ.

ಕನೇರಿಯಾ ಪ್ರತಿಭಾವಂತ ಆಟಗಾರರಾಗಿದ್ದರೂ ಪಾಕ್‌ ಕ್ರಿಕೆಟ್‌ ಮಂಡಳಿ ಅವರತ್ತ ಭೇದಭಾವ ಮಾಡಿರುವುದು ಈ ಪ್ರಕರಣದಿಂದ ಸ್ಪಷ್ಟವಾಗಿದೆ. ಕೆಲ ವರ್ಷಗಳ ಹಿಂದೆ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಸಿಲುಕಿದ್ದ ಕನೇರಿಯಾ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿಯಾಗಿದೆ. ಇಂಥ ಪ್ರಕರಣಗಳು ಹಲವು ಪಾಕ್‌ ಕ್ರಿಕೆಟಿಗರ ವಿರುದ್ಧ ದಾಖಲಾಗಿದ್ದವು. ಆದರೆ ಅವರನ್ನೆಲ್ಲ ಅಲ್ಲಿನ ವ್ಯವಸ್ಥೆ ಪಾರು ಮಾಡಿದೆ. ಈಗ ಅವರೆಲ್ಲ ರಾಷ್ಟ್ರೀಯ ತಂಡದ ಭಾಗವಾಗಿದ್ದಾರೆ. ಕನೇರಿಯಗೆ ಆ ಸಹಾಯವೂ ಸಿಗಲಿಲ್ಲ.

ಭಾರತ ತಂಡದಲ್ಲಿ ಮನ್ಸೂರ್‌ ಅಲಿಖಾನ್‌ ಪಟೌಡಿ, ಮೊಹಮ್ಮದ್‌ ಅಜರುದ್ದೀನ್‌, ಮೊಹಮ್ಮದ್‌ ಕೈಫ್, ಮುನಾಫ್ ಪಟೇಲ್‌, ಇರ್ಫಾನ್‌ ಪಠಾಣ್‌, ಯೂಸುಫ್ ಪಠಾಣ್‌ ಮುಂತಾದ ಮುಸ್ಲಿಂ ಆಟಗಾರರಿದ್ದರು. ಮೊಹಮ್ಮದ್‌ ಶಮಿ ಈಗಲೂ ತಂಡದ ಜೊತೆಗಿದ್ದಾರೆ. ಇವರಲ್ಲಿ ಯಾರನ್ನೂ ಭಾರತೀಯ ತಂಡದವರಾಗಲಿ, ಭಾರತೀಯ ಪ್ರೇಕ್ಷಕರಾಗಲಿ ಧರ್ಮದ ನೆಲೆಯಲ್ಲಿ ನೋಡಿದವರಲ್ಲ. ಭಾರತದ ಪರವಾಗಿ ಆಡುವ ಅವರೆಲ್ಲ ನಮ್ಮವರೇ. ಯಾವ ಆಟಗಾರನೂ ಧರ್ಮದ ಕಾರಣಕ್ಕಾಗಿ ಭೇದಭಾವ ಎಣಿಸಲಾಗಿದೆ ಅಥವಾ ಸರಿಯಾದ ಮನ್ನಣೆ ನೀಡಿಲ್ಲ ಎಂಬ ಆರೋಪಿಸಿದ್ದಿಲ್ಲ.

ಪಟೌಡಿ ಮತ್ತು ಅಜರುದ್ದೀನ್‌ ಕ್ರಿಕೆಟ್‌ ಕಪ್ತಾನರಾಗಿಯೂ ಇದ್ದರು. ಅವರ
ಕೈಕೆಳಗೆ ಆಡಲು ಉಳಿದವರಿಗೆ ಧರ್ಮ ಅಡ್ಡಿಯಾಗಿರಲಿಲ್ಲ. ಕ್ರಿಕೆಟನ್ನೇ ಧರ್ಮದಂತೆ ಆರಾಧಿಸುವ ದೇಶದಲ್ಲಿ ಧರ್ಮ ಕ್ರಿಕೆಟನ್ನು ಒಡೆಯುವುದನ್ನು ಕಲ್ಪಿಸಲೂ ಸಾಧ್ಯವಿಲ್ಲ. ಆದರೆ ಪಾಕಿಸ್ಥಾನದಲ್ಲಿ ಅನ್ಯಧರ್ಮದವರು ಅಪ್ಪಟ ಪ್ರತಿಭಾವಂತರೇ ಆಗಿದ್ದರೂ ಯಾವ ರೀತಿಯಲ್ಲಿ ಅವರನ್ನು ಮೂಲೆಗುಂಪು ಮಾಡಲಾಗುತ್ತದೆ ಎನ್ನುವುದು ಈಗ ಜಗಜ್ಜಾಹೀರಾಗಿದೆ.

ಕ್ರಿಕೆಟ್‌ ಎಂದಲ್ಲ, ಎಲ್ಲ ರಂಗಗಳಲ್ಲೂ ಅನ್ಯ ಧರ್ಮದವರನ್ನು ತುಳಿಯುವ ಕೆಲಸ ಅಲ್ಲಿ ನಿರಂತರವಾಗಿ ಆಗುತ್ತದೆ. ಅಲ್ಪಸಂಖ್ಯಾತರ ವ್ಯಾಪಾರ ವಹಿವಾಟುಗಳನ್ನು ಏನೇನೂ ಸುಳ್ಳು ಪ್ರಕರಣಗಳನ್ನು ದಾಖಲಿಸಿಕೊಂಡು ಕಿತ್ತುಕೊಳ್ಳುವುದು ಇಲ್ಲವೇ ನಾಶ ಮಾಡುವುದು ನಡೆಯುತ್ತದೆ.

ಹೀಗೆ ನಿರಂತರವಾಗಿ ಅಲ್ಪಸಂಖ್ಯಾತರನ್ನು ಶೋಷಿಸುವ ಪಾಕ್‌ ಪ್ರಧಾನಿ ಮಾತ್ರ ನಮಗೆ ಅಲ್ಪಸಂಖ್ಯಾತರನ್ನು ಹೇಗೆ ನೋಡಿಕೊಳ್ಳಬೇಕೆಂದು ಕಲಿಸುತ್ತೇನೆ, ಸಹಿಷ್ಣುತೆಯ ಪಾಠವನ್ನು ನಮ್ಮಿಂದ ಕಲಿಯಿರಿ ಎಂದೆಲ್ಲ ಪುಕ್ಕಟೆ ಉಪದೇಶಗಳನ್ನು ಮಾಡುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ.

“ಅಲ್ಪಸಂಖ್ಯಾತರನ್ನು ಹೇಗೆ ನೋಡಿಕೊಳ್ಳಬೇಕೆಂದು ಮೋದಿಗೆ ನಾನು ಕಲಿಸುತ್ತೇನೆ’. ಇದು ಕಳೆದ ವರ್ಷ ಡಿಸೆಂಬರ್‌ನಲ್ಲಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ನೀಡಿದ ಹೇಳಿಕೆ. ವಿಪರ್ಯಾಸವೆಂದರೆ ಒಂದೇ ವರ್ಷದಲ್ಲಿ ಅವರ ದೇಶದಲ್ಲಿ ಅಲ್ಪಸಂಖ್ಯಾತರ ಪಾಡು ಏನು ಎಂಬುದನ್ನು ಅವರದ್ದೇ ದೇಶದ ಮಾಜಿ ಕ್ರಿಕೆಟಿಗರೊಬ್ಬರು ಬಹಿರಂಗಪಡಿಸಿದ್ದಾರೆ. ಇಂಥ ದೇಶ ನಮಗೆ ಉಪದೇಶ ಮಾಡುವ ಯಾವ ಅರ್ಹತೆಯನ್ನೂ ಉಳಿಸಿಕೊಂಡಿಲ್ಲ.

ಟಾಪ್ ನ್ಯೂಸ್

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.