ಕಾರ್ಪೊರೇಟ್ ವಲಯಕ್ಕೆ ಮೋದಿ ಭರವಸೆಯ ಮಾತು
Team Udayavani, Jan 6, 2020, 8:45 PM IST
ನವದೆಹಲಿ: “ಕೆಲವೊಂದು ಭ್ರಷ್ಟ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಂಡೊಡನೆ, ಇಡೀ ಕಾರ್ಪೊರೇಟ್ ವಲಯದ ಮೇಲೆಯೇ ಸರ್ಕಾರ ದಾಳಿ ನಡೆಸುತ್ತಿದೆ ಎಂದು ಭಾವಿಸಬಾರದು.’
ಹೀಗೆಂದು ಹೇಳಿರುವುದು ಪ್ರಧಾನಿ ನರೇಂದ್ರ ಮೋದಿ. ದೆಹಲಿಯಲ್ಲಿ ಸೋಮವಾರ ಕ್ರಿರ್ಲೋಸ್ಕರ್ ಸಹೋದರರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಸರ್ಕಾರದ ನೈಜ ಉದ್ದೇಶಗಳನ್ನು ಉದ್ಯಮಿಗಳಿಗೆ ಮನವರಿಕೆ ಮಾಡಲು ಯತ್ನಿಸಿದ್ದಾರೆ.
ಉದ್ದಿಮೆಗಳು ಯಾವುದೇ ಭಯ ಹಾಗೂ ಅಡೆತಡೆಯಿಲ್ಲದೇ ಪಾರದರ್ಶಕ ಪರಿಸರದಲ್ಲಿ ಸಂಪತ್ತು ಸೃಷ್ಟಿಸುವಂತೆ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಅಲ್ಲದೆ ಕಾನೂನುಗಳ ಜಾಲದಿಂದ ಉದ್ದಿಮೆಗಳನ್ನು ಪಾರು ಮಾಡುವ ಪ್ರಯತ್ನವನ್ನೂ ನಡೆಸುತ್ತಿದ್ದೇವೆ. ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಹೊಣೆಗಾರಿಕೆ ತರಲಾಗಿದೆ, ಕಾರ್ಪೊರೇಟ್ ತೆರಿಗೆಯನ್ನೂ ಇಳಿಸಲಾಗಿದೆ ಎಂದೂ ಮೋದಿ ತಿಳಿಸಿದ್ದಾರೆ.
ಪ್ರಮುಖರ ಜತೆ ಚರ್ಚೆ:
ಈ ನಡುವೆ, ಪ್ರಧಾನಿ ಮೋದಿ ಸೋಮವಾರ ಪ್ರಮುಖ ಉದ್ದಿಮೆ ದಿಗ್ಗಜರೊಂದಿಗೆ ಮಾತುಕತೆ ನಡೆಸಿದ್ದಾರೆ. ಬಜೆಟ್ಗೂ ಮುನ್ನ, ದೇಶದ ಆರ್ಥಿಕತೆ ಬಗ್ಗೆ ಹಾಗೂ ಆರ್ಥಿಕ ಪ್ರಗತಿಗೆ, ಉದ್ಯೋಗ ಸೃಷ್ಟಿಗೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚಿಸಿದ್ದಾರೆ. ಮುಕೇಶ್ ಅಂಬಾನಿ, ರತನ್ ಟಾಟಾ, ಸುನೀಲ್ ಭಾರ್ತಿ ಮಿತ್ತಲ್, ಆನಂದ್ ಮಹೀಂದ್ರಾ, ಅನಿಲ್ ಅಗರ್ವಾಲ್, ಅದನಿ ಸೇರಿದಂತೆ ಪ್ರಮುಖ ಉದ್ಯಮಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ