‘ಪ್ರೆಸೆಂಟ್ ಪ್ರಪಂಚ 0% ಲವ್’ ಸಿನಿಮಾದ ಮೂಲಕ ಜೀವನ ಶೈಲಿ ಬದಲಾಗುವ ನಿರೀಕ್ಷೆ..!
Team Udayavani, Feb 15, 2020, 3:55 PM IST
ಗಾಂಧಿನಗರದಲ್ಲಿ ವಿಭಿನ್ನ ಟೈಟಲ್ ಮೂಲಕ ಸಿನಿಮಾಗಳು ಹಾಗಾಗ ಸದ್ದು ಮಾಡುತ್ತಲಿರುತ್ತವೆ. ರಿಲೀಸ್ ಗೆ ರೆಡಿಯಾಗಿರುವ ಸಿನಿಮಾವೊಂದು ಹಿಂದೆಂದು ಕೇಳಿರದ ವಿಭಿನ್ನ ಟೈಟಲ್ ಮೂಲಕ ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದೆ ಸಂಯುಕ್ತ-2 ಸಿನಿಮಾ ನಿರ್ದೇಶಿಸಿದ್ದ ಅಭಿರಾಮ್ ಪ್ರೇಕ್ಷಕರನ್ನು ರಂಜಿಸಲು ಮತ್ತೆ ಬಂದಿದ್ದಾರೆ. ‘ಪ್ರೆಸೆಂಟ್ ಪ್ರಪಂಚ 0% ಲವ್’ ಎಂಬ ಭಾರಿ ಕುತೂಹಲ ಹುಟ್ಟಿಸುವ ಟೈಟಲ್ ನ್ನಿಟ್ಟು ಸಿನಿಮಾ ರೆಡಿ ಮಾಡಿದ್ದಾರೆ. ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು ಎಲ್ಲರ ಚಿತ್ತ ಆ ಸಿನಿಮಾದತ್ತ ನೆಡುವಂತೆ ಮಾಡಿದೆ.
ಅರ್ಜುನ್ ಮಂಜುನಾಥ್ ‘ಪ್ರೆಸೆಂಟ್ ಪ್ರಪಂಚ 0% ಲವ್’ ಸಿನಿಮಾದ ನಾಯಕರಾಗಿದ್ದಾರೆ. ಈ ಹಿಂದೆ ಸಂಯುಕ್ತ-೨ ಸಿನಿಮಾದ ನಿರ್ಮಾಪಕರಾಗಿದ್ದ ಅರ್ಜುನ್, ಹೀರೋ ಲುಕ್ ಇದ್ದ ಕಾರಣ ಈ ಸಿನಿಮಾದ ಮೂಲಕ ನಾಯಕ ನಟನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಅರ್ಜುನ್ ಗೆ ನಾಯಕಿಯಾಗಿ ಸಂಭ್ರಮಶ್ರೀ ಕಾಣಿಸಿಕೊಂಡಿದ್ದಾರೆ.
‘ಪ್ರೆಸೆಂಟ್ ಪ್ರಪಂಚ 0% ಲವ್’ ಸಿನಿಮಾ ಹೆಸರೇ ಸೂಚಿಸುವಂತೆ ಇಂದಿನ ಕಾಲಘಟ್ಟದ ಸಿನಿಮಾವಾಗಿದೆ. ಸದ್ಯ ಜನ ಸಮಯದ ಹಿಂದೆ, ಹಣದ ಹಿಂದಷ್ಟೇ ತಮ್ಮ ಓಟವನ್ನ ಮುಂದುವರೆಸಿದ್ದಾರೆ. ತಮ್ಮ ಅಮೂಲ್ಯವಾದ ಜೀವನ ಎಲ್ಲಿ ಕಳೆದು ಹೋಗುತ್ತಿದೆ, ಹೇಗೆ ಮಾಯವಾಗುತ್ತಿದೆ ಎಂವುದನ್ನೇ ಮರೆತು ಬಿಟ್ಟಿದ್ದಾರೆ. ಈ ಎಳೆಯನ್ನೇ ಇಟ್ಟುಕೊಂಡು ಸಿನಿಮಾ ಸಿದ್ಧ ಮಾಡಿದ್ದಾರೆ.
ಈ ಸಿನಿಮಾದ ವಿಷಯ ಸದ್ಯದ ಸ್ಥಿತಿಗೆ ಬಹಳಮುಖ್ಯವಾದ ಅಂಶ ಎಂದರೆ ತಪ್ಪಾಗಲ್ಲ. ಯಾಕಂದ್ರೆ ಜೀವನವನ್ನೇ ಮರೆತು ದುಡಿಯುತ್ತಿರುವವರಿಗೆ ಮಾಡುತ್ತಿರುವ ತಪ್ಪಿನ ಅರಿವಾಗಬೇಕು. ಇರುವುದೊಂದು ಜೀವನವನ್ನ ನೆಮ್ಮದಿಯಾಗಿಯೂ ಕಳೆಯದೇ ಮುಪ್ಪಿನಲ್ಲಿ ಕೊರಗಿದರೆ ಪ್ರಯೋಜನವಿರುವುದಿಲ್ಲ. ಹೀಗಾಗಿ ಆಗುತ್ತಿರುವ ತಪ್ಪನ್ನ ತಿಳಿ ಹೇಳಲು ಯಾರಾದರೊಬ್ಬರ ಅನಿವಾರ್ಯವಿತ್ತು. ಆ ಜಾಗವನ್ನು ಈ ಸಿನಿಮಾ ತುಂಬಬಹುದೆಂಬ ಭರವಸೆ ಮೂಡಿದೆ. ನಾವೂಗಳು ಕೂಡ ಸಮಯದ ಹಂಗಿಲ್ಲದೇ ಕೇವಲ ಕೆಲಸವನ್ನಷ್ಟೇ ಮಾಡ ಹೊರಟಾಗ, ಅಲ್ಲೆ ಕಳೆದು ಹೋಗುತ್ತೇವೆ. ಏನಾಗುತ್ತಿದೆ ಎಂಬುದು ಅರಿವಿಗೆ ಬಂದಾಗ ಬದಲಾವಣೆ ಮೂಡಬಹುದೆಂಬುದಷ್ಟೆ ಆಶಯ.
ಈಗಾಗಲೇ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿರುವ ಚಿತ್ರತಂಡ, ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಉಂಟು ಮಾಡಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮಾರ್ಚ್ ತಿಂಗಳಲ್ಲಿ ತೆರೆಗೆ ತರೋದಕ್ಕೆ ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.
ಕೃಷ್ಣ ಮೂರ್ತಿ ಎಲ್, ರವಿಕುಮಾರ್ ಹೆಚ್ .ಪಿ ಬಂಡವಾಳ ಹೂಡಿದ್ದು, ರವಿ ತೇಜಸ್ವಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ತಬಲ ನಾಣಿ, ಚಂದನ್ ಆಚಾರ್, ಓಂ ಪ್ರಕಾಶ್ ರಾವ್, ಗೋವಿಂದೇ ಗೌಡ, ಯಶಸ್ ಅಭಿ ಸೇರಿದಂತೆ ಅನೇಕ ಕಲಾವಿದರು ತಾರಾಬಳಗದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ