ಪಾಕಿಸ್ಥಾನಕ್ಕೆ ನಿರಾಶ್ರಿತರ ಭೀತಿ
Team Udayavani, Feb 17, 2020, 11:56 PM IST
ಇಸ್ಲಾಮಾಬಾದ್: ಭಾರತದಲ್ಲಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಗಮನಹರಿಸಲು ಅಂತಾರಾಷ್ಟ್ರೀಯ ಸಮುದಾಯ ವಿಫಲವಾದರೆ, ಭಾರತ ಸರಕಾರದ ಕೆಲವೊಂದು ನೀತಿಗಳಿಂದಾಗಿ ಪಾಕಿಸ್ಥಾನದಲ್ಲಿ ಹೊಸ ನಿರಾಶ್ರಿತರ ಬಿಕ್ಕಟ್ಟು ಎದುರಾಗಲಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಎಚ್ಚರಿಸಿದ್ದಾರೆ.
ಭಾರತದ 200 ದಶಲಕ್ಷ ಮುಸ್ಲಿಮರನ್ನು ಗುರಿಯಾಗಿಸಿಕೊಂಡು, ಬಿಜೆಪಿ ನೇತೃತ್ವದ ಸರಕಾರ ತಾರತಮ್ಯದಿಂದ ಕೂಡಿದ ಕಾನೂನನ್ನು ಅಂಗೀಕರಿಸಿದೆ ಎಂದೂ ಆರೋಪಿಸಿದ್ದಾರೆ. ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಗುಟೆರಸ್ ಅವರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.