ಹೃದಯ್‌ ಚಿಕಿತ್ಸೆಗೆ ನೆರವಾಗಲು ಮನವಿ


Team Udayavani, Feb 24, 2020, 8:05 AM IST

22-KBL-1-HRUDAY

ಕುಂಬಳೆ: ಕಾಸರಗೋಡು ಜಿಲ್ಲೆಯ ಪುತ್ತಿಗೆ ಗ್ರಾಮ ಪಂಚಾಯತಿನ ಬಾಡೂರು ಹೊಸಗದ್ದೆ ಮನೆಯ ದೀಲಿಪ್‌ ಕುಮಾರ್‌ ವತ್ಸಲಾ ದಂಪತಿ ಪುತ್ರ ಹೃದಯ್‌ ಹುಟ್ಟಿನಿಂದಲೇ ತೀವ್ರತರವಾದ ಪಿತ್ತಜನಕಾಂಗದ ಕಾಯಿಲೆಯಿಂದ ಬಳಲುತ್ತಿರುವನು. ಈತನಿಗೆ ಈಗ ಕೇವಲ ಆರು ತಿಂಗಳ ಪ್ರಾಯ.

ಹೆತ್ತ ಆರಂಭದಿಂದಲೇ ರೋಗದಿಂದ ಬಳಲುತ್ತಿದ್ದ ಈತನಿಗೆ ಮಂಗಳೂರಿನ ಹೆಸರಾಂತ ಹಿರಿಯ ಮಕ್ಕಳ ತಜ್ಞ ಡಾ| ಗಣೇಶ್‌ ಪೈ ಮತ್ತು ಡಾ| ಆನಂದ ಪೈ ಅವರಿಂದ ಚಿಕಿತ್ಸೆ ನೀಡಲಾಗಿತ್ತು. ಎರಡು ತಿಂಗಳ ಚಿಕಿತ್ಸೆ ಹಾಗೂ ವಿವಿಧ ಉನ್ನತ ಪರೀಕ್ಷೆಗಳಿಂದ ಈ ಮಗುವಿಗೆ ಹುಟ್ಟುವಾಗಲೇ ಪಿತ್ತನಾಳ ಇಲ್ಲದೇ ಇರುವುದು ದೃಢಪಟ್ಟು ಮುಂದೆ ಪಿತ್ತಜನಕಾಂಗದ ತೀವ್ರ ತೊಂದರೆಯಿರುವುದು ಖಚಿತಪಟ್ಟಿತು.

ಪ್ರಕೃತ ತಜ್ಞ ವೈದ್ಯರು ಕಸಾಯಿ ಶಸ್ತ್ರಚಿಕಿತ್ಸೆ ಮಾಡಿ ಎರಡು ತಿಂಗಳ ಬಳಿಕ ತುರ್ತು ಚಿತ್ಸೆಯನ್ನು ಪಡೆಯುವಂತೆಯೂ ಬೆಂಗಳೂರಿನ ನಾರಾಯಣ ಹೃದಯಾಲಯದ ಪ್ರಸಿದ್ಧ ಪಿತ್ತಜನಕಾಂಗ ಕಸಿ ತಜ್ಞರಾದ ಡಾ| ಸಂಜಯ ರಾವ್‌ ಹಾಗೂ ಮಕ್ಕಳ ಪಚನಾಂಗ ತಜ್ಞರಾದ ಡಾ| ಎಚ್‌.ಆರ್‌. ಸೋಮಶೇಖರ್‌ ಅವರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ. ಬೆಂಗಳೂರಿನ ನಾರಾಯಣ ಹƒದಯಾಲಯದಲ್ಲಿ ಮಗುವನ್ನು ದಾಖಲಿಸಿ ಮಗುವನ್ನು ಚಿಕಿತ್ಸೆಗಾಗಿ ಕೇವಲ ಎರಡು ತಿಂಗಳೊಳಗಾಗಿ ಪಿತ್ತಜನಕಾಂಗದ ಕಸಿ ಮಾಡಲೇಬೇಕೆಂದು ಎಚ್ಚರಿಸಿದ್ದಾರೆ.

ಕರುಳ ಕುಡಿಗಾಗಿ ತಾಯಿ ನಿರ್ಧಾರ
ಕರುಳ ಕುಡಿಯನ್ನು ಉಳಿಸಲು ತನ್ನದೇ ಪಿತ್ತ ಜನಕಾಂಗದ ಭಾಗವನ್ನು ನೀಡಲು ಮಗುವಿನ ತಾಯಿ ನಿರ್ಧರಿಸಿದ್ದು ಚಿಕ್ಸಿತೆಗೆ ಸುಮಾರು 18.5 ಲಕ್ಷ ರೂ. ತಗಲಬಹುದೆಂದು ವೈದ್ಯರು ತಿಳಿಸಿದ್ದಾರೆ. ಇದರ ಹೊರತು ಪಿತ್ತ ಜನಕಾಂಗದ ದಾನಿಯಾದ ಅಮ್ಮನ ತಪಾಸಣೆಗೆ ರೂ.1,00,000 ವನ್ನು ಭರಿಸಬೇಕಾಗಿದೆ. ಅಲ್ಲದೆ ಆ ಬಳಿಕ ಮೂರು ತಿಂಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿರಬೇಕೆಂದು ಸೂಚಿಸಿರುವರು. ತದನಂತರ ಮಗುವಿಗೆ ಜೀವನ ಪರ್ಯಂತ ತಿಂಗಳಿಗೆ ತಲಾ ರೂ. 15,000ಕ್ಕೂ ಮಿಕ್ಕಿ ಔಷಧೋಪಚಾರದ ಆವಶ್ಯಕತೆ ಇರುವುದಲ್ಲದೆ ಪ್ರತಿ ಮೂರು ತಿಂಗಳಿಗೊಮ್ಮೆ ಮಗುವನ್ನು ತಜ್ಞ ವೈದ್ಯರಿಂದ ತಪಾಸಣೆಗೊಳಿಸಬೇಕಾಗಿದೆ.

ಅರ್ಥಿಕವಾಗಿ ಹಿಂದುಳಿದ ಈ ಬಡ ಕುಟುಂಬ ಎಲ್ಲ ಉಳಿತಾಯವನ್ನು ಈಗಾಗಲೇ ಪುಟ್ಟ ಕಂದನ ಚಿಕಿತ್ಸೆಗೆಂದು ಖರ್ಚು ಮಾಡಿದೆ. ಇನ್ನು ಮುಂದಿನ ಚಿಕಿತ್ಸಾ ವೆಚ್ಚವನ್ನು ಭರಿಸಲು ಆಶಕ್ತರಾಗಿದ್ದಾರೆ.

ಆದುದರಿಂದ ಹೃದಯ ಶ್ರೀಮಂತಿಕೆಯ ದಾನಿಗಳು ಪುಟ್ಟ ಹೃದಯ್‌ನ ನೆರವಿಗೆ ಮುಂದಾಗಬೇಕಿದೆ.

ದಾನಿಗಳು ಧನ ಸಹಾಯ ಮಾಡುವಂತೆ ಕಂದನ ಮಾತಾಪಿತರು ಆಪೇಕ್ಷಿಸುತ್ತಿದ್ದಾರೆ. ಬ್ಯಾಂಕ್‌ ಖಾತೆಯ ವಿವರ: ವತ್ಸಲಾ ಪಿ., ಖಾತೆ ಸಂಖ್ಯೆ ನಂ: 200201011003751-ವಿಜಯಾ ಬ್ಯಾಂಕ್‌,ಬಾಯಾರು ಐಎಫ್‌ಎಸ್‌ಸಿ ನಂ: ವಿಐಜೆಬಿ: 0002002.

ಟಾಪ್ ನ್ಯೂಸ್

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.