ಕಿರುತೆರೆಗಿಲ್ಲ ಕೊರೊನಾ ಭಯ!
Team Udayavani, Mar 16, 2020, 7:00 AM IST
ಕೊರೊನಾ ಭೀತಿಯಿಂದಾಗಿ ಕನ್ನಡದ ಬಹುತೇಕ ಸಿನಿಮಾಗಳ ಚಿತ್ರೀಕರಣ ಸ್ಥಗಿತಗೊಂಡಿದ್ದು ಗೊತ್ತೇ ಇದೆ. ವಿದೇಶಗಳಲ್ಲಿ ಚಿತ್ರೀಕರಣಕ್ಕೆ ಹೊರಡಲು ಸಜ್ಜಾಗಿದ್ದ ದರ್ಶನ್ ಅಭಿನಯದ “ರಾಬರ್ಟ್’, ಪುನೀತ್ ಅಭಿನಯದ “ಯುವ ರತ್ನ’, ಗಣೇಶ್, ದಿಗಂತ್ ನಟನೆಯ “ಗಾಳಿಪಟ 2′ ಸೇರಿದಂತೆ ಒಂದಷ್ಟು ಚಿತ್ರಗಳು ಕೊರೊನಾ ಹಿನ್ನೆಲೆಯಲ್ಲಿ ಚಿತ್ರೀಕರಣಕ್ಕೆ ಹೋಗುವುದನ್ನು ನಿಲ್ಲಿಸಿವೆ. ಕನ್ನಡದ ಕೆಲ ಚಿತ್ರಗಳಿಗೆ ಕೊರೊನಾ ಎಫೆಕ್ಟ್ ಆಗಿದ್ದು ನಿಜ.
ಆದರೆ, ಕಿರುತೆರೆಗೆ ಮಾತ್ರ ಕೊರೊನಾದ ಯಾವುದೇ ಭಯವಿಲ್ಲ. ಹೌದು, ಕಿರುತೆರೆಯಲ್ಲಿ ಈಗ ಅನೇಕ ಧಾರಾವಾಹಿಗಳು ಯಶಸ್ಸಿನಲ್ಲಿವೆ. ಅಂತೆಯೇ, ನಿತ್ಯವೂ ಬಿಡುವಿಲ್ಲದಂತೆ ಚಿತ್ರೀಕರಣದಲ್ಲಿ ತೊಡಗಿಕೊಂಡಿವೆ. ರಾತ್ರಿ-ಹಗಲೆನ್ನದೆ ಜೋರು ಚಿತ್ರೀಕರಣದಲ್ಲಿ ಹಲವು ಧಾರಾವಾಹಿಗಳು ನಿರತವಾಗಿವೆ. ಕಾರಣ, ನಿತ್ಯ ಎಪಿಸೋಡ್ ಬಂದ ಬಳಿಕ ಮುಂದಿನ ಎಪಿಸೋಡ್ಗಳಿಗೆ ಒಂದಷ್ಟು ಚಿತ್ರೀಕರಣ ಆಗಲೇಬೇಕು.
ಹಾಗಾಗಿ, ಧಾರಾವಾಹಿಗಳಿಗೆ ಮಾತ್ರ ಕೊರೊನಾ ಭಯ ಇಲ್ಲದಿರುವುದರಿಂದ ನಿರಂತರವಾಗಿಯೇ ಚಿತ್ರೀಕರಣ ನಡೆಯುತ್ತಿದೆ. ಸದ್ಯಕ್ಕೆ ಸಿನಿಮಾಗಳಿಗೂ ಚಿತ್ರೀಕರಣ ಸಮಸ್ಯೆ ಆಗಿಲ್ಲ ಎಂಬುದನ್ನೂ ಗಮನಿಸಬೇಕು. ಹೊರ ದೇಶಕ್ಕೆ ಹೋಗುವ ಸಿನಿಮಾಗಳು ಮಾತ್ರ ಚಿತ್ರೀಕರಣವನ್ನು ಸ್ಥಗಿತಗೊಳಿಸಿವೆ. ಉಳಿದಂತೆ ಕೆಲ ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ
Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ 10 ಕುರಿಗಳು ಸಾವು
Iran ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ‘ಹಾರ್ಡ್ ಲ್ಯಾಂಡಿಂಗ್; ರಕ್ಷಣ ಕಾರ್ಯ
Pune; ಖ್ಯಾತ ಬಿಲ್ಡರ್ ಒಬ್ಬರ 17 ವರ್ಷದ ಪುತ್ರನ ಪೋರ್ಷೆ ಕಾರಿಗೆ ಇಬ್ಬರು ಬಲಿ
Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ