ಕೋವಿಡ್-19 ನಿರ್ಲಕ್ಷ್ಯ:ಗಾಯಕಿ ವಿರುದ್ಧ ಎಫ್ಐಆರ್, ಸ್ವಯಂ ನಿರ್ಬಂಧಕ್ಕೊಳಗಾದ ರಾಜಕೀಯ ನಾಯಕರು
Team Udayavani, Mar 21, 2020, 8:56 AM IST
ಲಕ್ನೋ: ಬಾಲಿವುಡ್ ಖ್ಯಾತ ಗಾಯಕಿ ಕನಿಕಾ ಕಪೂರ್ ವಿರುದ್ಧ ‘ನಿರ್ಲಕ್ಷ್ಯ ಮತ್ತು ಅಸಹಕಾರ’ ಐಪಿಸಿ ಸೆಕ್ಷನ್ 269, 270, 188 ರ ಅಡಿಯಲ್ಲಿ ಸರೋಜಿನಿ ನಗರ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಇತ್ತೀಚಿಗಷ್ಟೆ ಯುಕೆಯಿಂದ ಮರಳಿದ್ದ ಈ ಗಾಯಕಿಗೆ ಶುಕ್ರವಾರ ಕೋವಿಡ್ 19 ಪಾಸಿಟಿವ್ ಎಂದು ವರದಿ ಬಂದಿತ್ತು.
ಈ ಕಾರಣದಿದಂದ ಗಾಯಕಿ ಕನಿಕಾ ಕಫೂರ್ ಆರೋಗ್ಯ ಸಮಸ್ಯೆ ಮಾತ್ರವಲ್ಲದೆ, ಇದೀಗ ಕಾನೂನಾತ್ಮಕ ತೊಡಕನ್ನು ಎದುರಿಸುವಂತಾಗಿದೆ. ದೂರಿನಲ್ಲಿರುವಂತೆ ಮಾರ್ಚ್ 14 ರಂದು ಕನ್ನಿಕಾ ಅವರು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಸೊಂಕಿಗೆ ಒಳಗಾಗಿದ್ದರು. ಆದರೆ ಸ್ವಯಂ ಪ್ರತ್ಯೇಕತೆಗೆ ಒಳಗೊಳ್ಳದೆ ಅನೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಕನಿಕಾ ಅವರು ತಂಗುತ್ತಿದ್ದ ತಾಜ್ ಹೊಟೇಲ್ ರೂಮ್ ಒಂದನ್ನು ಎರಡು ದಿನಗಳವರೆಗೂ ಮುಚ್ಚಲಾಗಿದೆ.
ಬಹುಜನ ಸಮಾಜವಾದಿ ಪಕ್ಷದ ಸಂಸದ ಅಕ್ಬರ್ ಅಹಮ್ಮದ್ ಡಂಪಿ ಅವರ ಸೋದರ ಸಂಬಂಧಿಯಾಗಿರುವ ಅದಿಲ್ ಅಹಮ್ಮದ್ ಅವರ ಮನೆಯಲ್ಲಿ ಔತಣ ಕೂಟ ಏರ್ಪಟ್ಟಿತ್ತು. ಈ ಪಾರ್ಟಿಯಲ್ಲಿ ಕನ್ನಿಕಾ ಸೇರಿ ವಿವಿಧ ಪಕ್ಷಗಳ ರಾಜಕೀಯ ನಾಯಕರು ಭಾಗವಹಿಸಿದ್ದರು
ರಾಜಸ್ಥಾನದ ಮಾಜೀ ಮುಖ್ಯಮಂತ್ರಿ ವಸುಂಧರಾ ರಾಜೇ, ಅವರ ಪುತ್ರ ಹಾಗೂ ಸಂಸದರಾಗಿರುವ ದುಷ್ಯಂತ್ ಸಿಂಗ್ ಅವರ ಪತ್ನಿ ನಿಹಾರಿಕಾ, ಉತ್ತರಪ್ರದೇಶದ ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್ ಅವರ ಪತ್ನಿ ಬಸುಂದರಾ ಕುಮಾರಿ, ರಿತು ಸಿಂಗ್ ಸೇರಿದಂಥೆ ಹಲವಾರು ರಾಜಕೀಯ ಮತ್ತು ಸಿನಿ ಕ್ಷೇತ್ರದ ಗಣ್ಯರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು.
ಕನಿಕಾ ಅವರ ತಂದೆ ರಾಜೀವ್ ಕಪೂರ್ ಅವರು ಹೇಳುವಂತೆ ಲಕ್ನೋಗೆ ಬಂದ ನಂತರ ಕನಿಕಾ ಒಟ್ಟು ಮೂರು ಪಾರ್ಟಿಗಳಲ್ಲಿ ಭಾಗವಹಿಸಿದ್ದಾಳೆ. ಈ ಮೂರು ವಿವಿಧ ಪಾರ್ಟಿಗಳಲ್ಲಿ ಕನಿಕಾ ಏನಿಲ್ಲವೆಂದರೂ ಸುಮಾರು 400 ಜನರನ್ನು ಭೇಟಿಯಾಗಿರುವ ಸಾಧ್ಯತೆಗಳಿವೆ ಎಂಬುದು ಆಕೆಯ ತಂದೆಯ ಅಂದಾಜು. ಆದರೆ ತಂದೆಯ ಮಾತನ್ನು ಅಲ್ಲಗಳೆದಿರುವ ಕನಿಕಾ, ತಾನು ಒಂದು ಪಾರ್ಟಿಯಲ್ಲ ಮಾತ್ರವೇ ಭಾಗವಹಿಸಿರುವುದಾಗಿ ಹೇಳಿಕೊಂಡಿದ್ದಾಳೆ.
ತನ್ನಲ್ಲಿ ಕೋವಿಡ್ 19 ವೈರಸ್ ಲಕ್ಷಣಗಳು ಪಾಸಿಟಿವ್ ಇರುವುದು ಪತ್ತೆಯಾದ ಬಳಿಕ ಇದೀಗ ಕನಿಕಾಳನ್ನು ಲಕ್ನೋದಲ್ಲಿರುವ ಸಂಜಯ್ ಗಾಂಧಿ ಪೋಸ್ಟ್ ಗ್ರ್ಯಾಜ್ಯುವೇಟ್ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈಕೆಯ ಸಂಪರ್ಕಕ್ಕೆ ಬಂದಿರುವವರ ಪೈಕಿ ವಸುಂಧರಾ ರಾಜೆ ಸಿಂಧಿಯಾ, ದುಷ್ಯಂತ್ ಸಿಂಗ್ ಮೊದಲಾದವರು ಇದೀಗ ಸ್ವಯಂ ನಿರ್ಬಂಧ ವಿಧಿಸಿಕೊಂಡು ಪ್ರತ್ಯೇಕವಾಗಿ ಇರಲು ನಿರ್ಧರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ