ಸಾಕುಪ್ರಾಣಿಗಳ ಮಾಲಕರೇ ವಿಲನ್ಗಳು!
ಬೀದಿ ಬೀದಿಗಳಲ್ಲಿ ಸುತ್ತುತ್ತಿರುವ ದುಬಾರಿ ನಾಯಿಗಳು
Team Udayavani, Apr 14, 2020, 6:15 AM IST
ಸಾಂದರ್ಭಿಕ ಚಿತ್ರ.
ಬೆಂಗಳೂರು: ವಿದೇಶದಲ್ಲಿ ಪ್ರಾಣಿಗಳಲ್ಲಿ ಕೋವಿಡ್-19 ಸೋಂಕು ದೃಢಪಟ್ಟ ಬಳಿಕ ಕೆಲವರು ತಾವೇ ಕಂಕುಳಲ್ಲಿಟ್ಟುಕೊಂಡು ಮುದ್ದಾಡುತ್ತಿದ್ದ ಸಾಕುಪ್ರಾಣಿಗಳನ್ನು “ವಿಲನ್’ ರೀತಿ ನೋಡುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಆ ಪ್ರಾಣಿಗಳನ್ನು ಮನೆಯಿಂದಲೇ ಹೊರಹಾಕುವ ಪ್ರಕರಣಗಳು ಅಲ್ಲಲ್ಲಿ ಕಂಡುಬರುತ್ತಿವೆ.
ವಿಶೇಷವಾಗಿ ಕುಟುಂಬದೊಂದಿಗೆ ಹೆಚ್ಚು ನಂಟು ಹೊಂದಿರುವ ನಾಯಿ, ಬೆಕ್ಕುಗಳನ್ನು ನಗರ ಪ್ರದೇಶಗಳಲ್ಲಿ ಮನೆ ಯಿಂದ ದೂರದಲ್ಲಿ ಬಿಟ್ಟುಬರಲಾಗುತ್ತಿದೆ. ಇದರಿಂದ ಅನಾಥವಾದ ಸಾಕುಪ್ರಾಣಿಗಳು ದಿಕ್ಕುತೋಚದಂತಾ ಗಿವೆ. ಅದರಲ್ಲೂ ಕೆಲವು ಅನಾರೋಗ್ಯ ಲಕ್ಷಣಗಳು ಕಂಡು ಬರುತ್ತಿದ್ದಂತೆ ಅಮಾನವೀಯವಾಗಿ ಕೆರೆ ದಡದಲ್ಲಿ, ಬೀದಿನಾಯಿಗಳ ಗುಂಪಿನಲ್ಲಿ ಬಿಟ್ಟು ಹೋಗುತ್ತಿದ್ದಾರೆ.
ಬೆಂಗಳೂರು, ಬೆಳಗಾವಿ, ಮೈಸೂರಿ ನಂತಹ ಪ್ರದೇಶಗಳಲ್ಲಿ ಸಾಕುಪ್ರಾಣಿ- ಪಕ್ಷಿಗಳನ್ನು ಬಿಟ್ಟು ಹೋಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಗ್ರಾಮೀಣ ಭಾಗಗಳಲ್ಲಿ ಈ ಸಮಸ್ಯೆ ಇಲ್ಲ. ಸುಶಿಕ್ಷಿತರು ಇರುವ ನಗರಗಳಲ್ಲಿ ಈ ಕೃತ್ಯಗಳು ನಡೆಯುತ್ತಿವೆ. ಜನರ ತಪ್ಪು ತಿಳಿವಳಿಕೆಯಿಂದ ಈ ಅಧ್ವಾನಗಳು ಆಗುತ್ತಿವೆ. ಆದರೆ ಯಾವುದೇ ಕಾರಣಕ್ಕೂ ಪ್ರಾಣಿಗಳಿಂದ ಮನುಷ್ಯನಿಗೆ ಕೋವಿಡ್-19 ವೈರಸ್ ಹರಡುವುದಿಲ್ಲ ಎಂದು ವನ್ಯಜೀವಿ ತಜ್ಞ ಡಾ| ಎಚ್.ಎಸ್. ಪ್ರಯಾಗ್ ಅವರು ತಿಳಿಸಿದ್ದಾರೆ.
ಬೀದಿಗೆ ಬಿದ್ದ ದುಬಾರಿ ನಾಯಿಗಳು
ಬೆಂಗಳೂರಿನ ಕೋರಮಂಗಲ, ಬನಶಂಕರಿ, ಜಯನಗರ, ಬಿಟಿಎಂ ಲೇಔಟ್, ಬೈರಸಂದ್ರ ಕಡೆಗಳಲ್ಲಿ ಲ್ಯಾಬ್ರೆಡಾಗ್, ಬುಲ್ಡಾಗ್, ಹಸ್ಕಿ, ಗೋಲ್ಡನ್ ರಿಟ್ರೀವರ್ನಂತಹ ಬೆಲೆಬಾಳುವ ನಾಯಿಗಳು ಬೀದಿಗಳಲ್ಲಿ ದಿಕ್ಕಿಲ್ಲದೆ ಓಡಾಡುತ್ತಿರುವುದು ಕಳೆದ ಮೂರ್ನಾಲ್ಕು ದಿನಗಳಿಂದ ಕಂಡುಬರುತ್ತಿವೆ. ಅದೇ ರೀತಿ, ಮೈಸೂರಿನಲ್ಲಿ ಹಕ್ಕಿಜ್ವರ ಮತ್ತು ಕೊರೊನಾ ವೈರಸ್ ಭೀತಿಯಿಂದ ವಿದೇಶಿ ಹಕ್ಕಿಗಳನ್ನು ಹಾರಿಬಿಡಲಾಗಿದೆ ಎಂದು ಪ್ರಾಣಿಪ್ರಿಯ ಅರುಣ್ ಪ್ರಸಾದ್ ಮತ್ತು ಪ್ರದೀಪ್ ಕುಮಾರ್ ತಿಳಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ