ಪಿಎಫ್ ಕೊಡುಗೆ: ಬಡ ಕಾರ್ಮಿಕರ ನೆರವಿಗೆ ಪಿಎಂಜಿಕೆವೈ ಯೋಜನೆ
Team Udayavani, Apr 14, 2020, 11:11 AM IST
ಉಡುಪಿ: ಕೇಂದ್ರ ಸರಕಾರದ ಕಾರ್ಮಿಕ ಇಲಾಖೆ ಕೊರೊನಾ ಕಾರಣದಿಂದ ಮುಚ್ಚುಗಡೆಯಾದ ಸಂಸ್ಥೆಗಳ ಬಡ ಕಾರ್ಮಿಕರಿಗಾಗಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು (ಪಿಎಂಜಿಕೆವೈ) ಮಾ. 26ರಿಂದ ಅನ್ವಯವಾಗುವಂತೆ ಘೋಷಿಸಿದೆ.
ಇದು 15,000 ರೂ. ಗಿಂತ ಕಡಿಮೆ ವೇತನ ಪಡೆಯುವ ಕಾರ್ಮಿಕರಿಗೆ ಅನ್ವಯವಾಗುತ್ತದೆ. ನೂರು ನೌಕರರ ವರೆಗೆ ಇರುವ ನೌಕರರ ಭವಿಷ್ಯನಿಧಿ ಕಚೇರಿಯಲ್ಲಿ ನೋಂದಣಿಯಾದ ಸಂಸ್ಥೆಗಳಿಗೆ ಅನ್ವಯವಾಗಲಿದೆ. ಸದಸ್ಯರ ಮೂರು ತಿಂಗಳ ಇಪಿಎಫ್ ಮತ್ತು ಇಪಿಎಸ್ ದೇಣಿಗೆಯನ್ನು (ನೌಕರರ ಪಾಲು ಶೇ. 12, ಪಿಂಚಣಿ ನಿಧಿ ಶೇ. 8.33, ಉದ್ಯೋಗದಾತರ ಪಾಲು
ಶೇ. 3.27 ಒಟ್ಟು ಶೇ. 24) ಕೇಂದ್ರ ಸರಕಾರ ಭರಿಸಲಿದೆ.
ಈಗಾಗಲೇ ಪಾವತಿಯಾಗಿದ್ದರೆ ಸರಕಾರ ಪಾವತಿಸುವುದಿಲ್ಲ. ಪಾವತಿಯಾಗದೇ ಇದ್ದರೆ ಮಾ. 26ರ ವರೆಗಿನ ವೇತನ ಪಾವತಿಯ ಲೆಕ್ಕಾಚಾರಗಳನ್ನು ಉದ್ಯೋಗದಾತ ಸಂಸ್ಥೆ ಭವಿಷ್ಯನಿಧಿ ಕಚೇರಿಗೆ ಇಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ (ಇಸಿಆರ್) ಮೂಲಕ ಫೈಲಿಂಗ್ ಮಾಡಿದ ಬಳಿಕ ಸರಕಾರ ತನ್ನ ಪಾಲಿನ ಮೊತ್ತವನ್ನು ಭರಿಸಲಿದೆ. ಇದರ ವಿವರಗಳು ಇಪಿಎಫ್ಒ ವೆಬ್ಸೈಟ್ನ ಹೋಮ್ ಪೇಜ್ನ ಟಿಎಬಿ “ಕೋವಿಡ್-19′ ವಿಭಾಗದಲ್ಲಿ ಲಭ್ಯವಿದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ
Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್ಪಾರ್ಕ್ ಸುರಕ್ಷಿತ
Fraud Case ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಗೆ ವಂಚನೆ
Udupi; ಬ್ಯಾಂಕ್ ಅಧಿಕಾರಿ ಖಾತೆಯಿಂದ ಲಕ್ಷಾಂತರ ರೂ.ವರ್ಗಾವಣೆ
Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್ ಆಗುವ ಭೀತಿ
MUST WATCH
ಹೊಸ ಸೇರ್ಪಡೆ
Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್ʼ
Bantwala; ಕಾರಿಗೆ ಸೈಡ್ ಕೊಟ್ಟಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ
Mangaluru; ಕೊಂಕಣಿ ಸಾಹಿತಿ ರೊನಾಲ್ಡ್ ಸಿಕ್ವೇರಾ ನಿಧನ
ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ
Lok Sabha Election: ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು