ಕೋವಿಡ್ 19 ಆತಂಕ ನಡುವೆ ಬಿಎಸ್ಸೆನ್ನೆಲ್‌ ಗುತ್ತಿಗೆ ಕಾರ್ಮಿಕರಿಗೆ ಬರೆ


Team Udayavani, Apr 16, 2020, 6:00 AM IST

ಕೋವಿಡ್ 19 ಆತಂಕ ನಡುವೆ ಬಿಎಸ್ಸೆನ್ನೆಲ್‌ ಗುತ್ತಿಗೆ ಕಾರ್ಮಿಕರಿಗೆ ಬರೆ

ಉಡುಪಿ: ಕೋವಿಡ್ 19 ಸಂಕಟದಿಂದ ದೇಶಾದ್ಯಂತ ಲಾಕ್‌ಡೌನ್‌ ಇದ್ದು, ಎಲ್ಲರೂ ವಿವಿಧ ರೀತಿಯ ಸಮಸ್ಯೆಗಳಲ್ಲಿದ್ದಾರೆ. ಆದರೆ ಬಿಎಸ್ಸೆನ್ನೆಲ್‌ ಸಂಸ್ಥೆಯ ಕಾರ್ಮಿಕರ ಸಮಸ್ಯೆ ಮಾತ್ರ ವಿಭಿನ್ನವಾದುದು. ಕೆಲಸವಿಲ್ಲ, ಬಾಕಿ ವೇತನವೂ ಕೈಸೇರಿಲ್ಲ. ತಲೆ ಮೇಲೆ ಸಾಲದ ಶೂಲ. ಈಗ ಲಾಕ್‌ಡೌನ್‌ನಿಂದ ಜೀವನ ಮತ್ತಷ್ಟು ಅಧೋಗತಿಗೆ ತಲುಪಿದೆ.

ಅವಿಭಜಿತ ದ.ಕ. ಜಿಲ್ಲೆ, ಮಂಗಳೂರು ಟೆಲಿಕಾಂ ವೃತ್ತ ವ್ಯಾಪ್ತಿಯಲ್ಲಿ 1,100ಕ್ಕೂ ಹೆಚ್ಚು ಮಂದಿ ಗುತ್ತಿಗೆ ನೆಲೆಯಲ್ಲಿ ನಿಯೋ ಜನೆಗೊಂಡಿದ್ದರು. ಕಚೇರಿ ನಿರ್ವಹಣೆ, ಕೇಬಲ್‌ ಜೋಡಣೆ, ಲೈನ್‌ ದುರಸ್ತಿ ಕೆಲಸ ನಿರ್ವಹಿಸುತ್ತಿದ್ದರು. 2019ರಲ್ಲಿ ದ.ಕ., ಉಡುಪಿ, ಕಾರವಾರ, ಶಿವಮೊಗ್ಗ ವ್ಯಾಪ್ತಿಯಲ್ಲಿ 1,100 ಗುತ್ತಿಗೆ ಕಾರ್ಮಿಕರಿದ್ದರು. ಅವಿಭಜಿತ ದ.ಕ. ಜಿಲ್ಲೆಯಲ್ಲಿ 700ಕ್ಕೂ ಹೆಚ್ಚು ಕಾರ್ಮಿಕರಿದ್ದರು. ಕ್ರಮೇಣ ಆರ್ಥಿಕ ನಷ್ಟದಿಂದ ಸಂಸ್ಥೆ ಕಾರ್ಮಿಕರ ಸಂಖ್ಯೆ ಕಡಿತಗೊಳಿಸಿತ್ತು. ಸಿಬಂದಿ ಅನಿವಾರ್ಯ ಎನಿಸಿದಾಗ ವೇತನ ಬರುತ್ತದೆ ಎಂಬ ವಿಶ್ವಾಸ ಮೂಡಿಸಿ ಅಧಿಕಾರಿಗಳು ಕಾರ್ಮಿಕರನ್ನು ದುಡಿಸಿದ್ದರು. ಅವರ ನಿತ್ಯದ ಖರ್ಚು ನೋಡಿಕೊಳ್ಳುತ್ತಿದ್ದರು.

ಪಿ.ಎಫ್. ಖಾತೆಗೂ ಹಣ ಜಮೆ ಆಗಿಲ್ಲ
ಹಲವು ತಿಂಗಳು ಕಳೆದರೂ ವೇತನ ಬರಲಿಲ್ಲ. ಕೆಲವರು ಅರ್ಧಕ್ಕೆ ಬಿಟ್ಟು ಹೋದರು. ಇನ್ನುಳಿದವರು ಇಂದಲ್ಲ ನಾಳೆ ಬಂದೀತು ಎನ್ನುವ ನಿರೀಕ್ಷೆಯಲ್ಲಿ ಕೆಲಸ ಮುಂದುವರಿಸಿದರು. ಈಗ ಅವಿಭಜಿತ ದ.ಕ. ಜಿಲ್ಲೆ ಯಲ್ಲಿ 200 ಮಂದಿ ಉಳಿದುಕೊಂಡಿದ್ದಾರೆ. ಅರ್ಧಕ್ಕೆ ಬಿಟ್ಟವರ ಹಾಗೂ ಈಗಲೂ ಕರ್ತವ್ಯದಲ್ಲಿರುವವರ ವೇತನ ಬರಲು ಬಾಕಿಯಿದೆ. 2018ರಿಂದ ಕಾರ್ಮಿಕರ ಪಿ.ಎಫ್. ಖಾತೆಗೂ ಹಣ ಪಾವತಿಯಾಗಿಲ್ಲ.

ಗುತ್ತಿಗೆದಾರರಿಗೂ ಬಾಕಿ
ಸಂಸ್ಥೆಯು ಕಾರ್ಮಿಕರಿಗೆ 14 ತಿಂಗಳ ಹಣ, ಗುತ್ತಿಗೆ ದಾರರಿಗೆ 12.5 ಕೋ. ರೂ. ಪಾವತಿ ಬಾಕಿ ಇರಿಸಿದೆ. ಕಾರ್ಮಿಕರ ಆವಶ್ಯಕತೆ ಮನಗಂಡು ಗುತ್ತಿಗೆದಾರರು 1.5 ಕೋ. ರೂ.ಗಳಷ್ಟು ಸ್ವಂತ ಹಣ ಹಂಚಿದ್ದಾರೆ.

ಬಾಕಿ ವೇತನ ಸಿಗದೆ, ಕೆಲಸವಿಲ್ಲದೆ ಮನೆಯಲ್ಲಿರು ವವರ ಸ್ಥಿತಿ ಅತಂತ್ರವಾಗಿದೆ. ಇವರನ್ನು ಅವಲಂಬಿಸಿ ರುವ ಕುಟುಂಬಗಳ ಸ್ಥಿತಿ ಚಿಂತಾಜನಕವಾಗಿದೆ. ಜೀವನೋಪಾಯಕ್ಕಾಗಿ ಮೀಟರ್‌ ಬಡ್ಡಿ ಸಾಲ ತೆಗೆದು, ಸಾಲ ಭಾರ ಹೊತ್ತುಕೊಂಡಿದ್ದಾರೆ. ಬಂದ್‌ನಿಂದ ಈಗ ಇವರ ಬದುಕು ಮತ್ತಷ್ಟು ಜಟಿಲವಾಗಿದೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಆಯಾ ಉದ್ಯೋಗದಾತ ಸಂಸ್ಥೆಗಳು ವೇತನ ಸಹಿತ ರಜೆ ನೀಡುವಂತೆ ಸರಕಾರ ಸೂಚಿಸಿದೆ. ಗುತ್ತಿಗೆ ಕಾರ್ಮಿಕರಿಗೂ ಬಿಎಸ್ಸೆನ್ನೆಲ್‌ ವೇತನ ನೀಡಿ, ಅವರ ಕುಟುಂಬಗಳಿಗೆ ಕೊಂಚ ನೆಮ್ಮದಿ ಕರುಣಿಸಬೇಕಿದೆ.

ಗುತ್ತಿಗೆ ಕಾರ್ಮಿಕರಿಗೆ ಒಂದು ತಿಂಗಳ ವೇತನ ನೀಡಲು ಕ್ರಮ ತೆಗೆದುಕೊಂಡಿದ್ದೇವೆ. ಮುಂದೆ ಹಂತ ಹಂತ ವಾಗಿ ಬಾಕಿ ವೇತನ ನೀಡಲಾಗುವುದು.
-ರವಿ, ಮಹಾಪ್ರಬಂಧಕರು ಬಿಎಸ್ಸೆನ್ನೆಲ್‌, ಮಂಗಳೂರು

ವೇತನ ವಂಚಿತ ಕಾರ್ಮಿಕರಿಗೆ ವಿತರಣೆಗಿರುವ 6.5 ಕೋಟಿ ರೂ. ಬಿಲ್‌ ಅಧಿಕಾರಿಗಳಲ್ಲಿದೆ. ಅದನ್ನು ತತ್‌ಕ್ಷಣ ಪಾವತಿಸಿದಲ್ಲಿ ಸದ್ಯದ ಪರಿಸ್ಥಿತಿಯಿಂದ ಪಾರಾಗಬಹುದು. ಈಗ ಸಂಕಷ್ಟದ ಕಾಲದಲ್ಲಿ ಕಾರ್ಮಿಕರಿಗೆ ನೆರವು ನೀಡುವ ಅಗತ್ಯವಿದೆ.
-ಸತೀಶ್‌ ಹೆಗ್ಡೆ, ಗುತ್ತಿಗೆದಾರರು

ಟಾಪ್ ನ್ಯೂಸ್

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.