ಮಗಳ ಮದುವೆಗೆ ಬಂದು ನೌಕರಿ ಕಳೆದುಕೊಳ್ಳುವ ಭೀತಿಯಲ್ಲಿ ಹೈದರಾಬಾದ್ ಪಾಲಿಕೆ ಸಿಬ್ಬಂದಿ
Team Udayavani, Apr 19, 2020, 9:38 AM IST
ಗಂಗಾವತಿ: ಮಗಳ ಮದುವೆಗೆ ಆಗಮಿಸಿ ಕೋವಿಡ್-19 ಕರ್ಪ್ಯೂ ಹಿನ್ನೆಲೆಯಲ್ಲಿ ಮರಳಿ ಹೈದರಾಬಾದ್ ಗೆ ತೆರಳದೆ ನೌಕರಿ ಕಳೆದುಕೊಳ್ಳುವ ಭೀತಿಯಲ್ಲಿ ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಷನ್ ಮಹಿಳಾ ನೌಕರರೊಬ್ಬರು ಇರುವ ಪ್ರಸಂಗ ತಾಲ್ಲೂಕಿನ ಸಾಣಾಪೂರ ಗ್ರಾಮದಲ್ಲಿ ಜರುಗಿದೆ.
ಹೈದರಾಬಾದ್ ಗ್ರೇಟರ್ ಮುನಿಸಿಪಲ್ ಕಾರ್ಪೊರೇಷನ್ ನಲ್ಲಿ ಕೆಲಸ ಮಾಡುವ ಹೈದರಾಬಾದ್ ನಗರದ ಮೌಲಾಲಿ ಗುಂಬಜ್ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿ ಶಾಂತಮ್ಮ ಅವರ ಪತಿ ಲಕ್ಷ್ಮಣ ಮತ್ತು ಮಗ ಅರುಣಾ ಮಗಳ ಮದುವೆ ಮಾಡಲು ಮಾರ್ಚ್ 13ರಿಂದ ಸಾಣಾಪೂರ ಗ್ರಾಮಕ್ಕೆ ಆಗಮಿಸಿ ಹೋಗಲು ಸಿದ್ದರಾದ ಸಂದರ್ಭದಲ್ಲಿ ಕರ್ಪ್ಯೂ ಜಾರಿಯಾಗಿದ್ದರಿಂದ ಹೋಗಲು ಆಗುತ್ತಿಲ್ಲ.
ಆದರೆ ಜಿಎಚ್ಎಂಸಿ ಅಧಿಕಾರಿಗಳು ಮೇಲಿಂದ ಮೇಲೆ ಮೊಬೈಲ್ ಮೂಲಕ ಕರೆ ಮಾಡಿ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡುತ್ತಿದ್ದು ಹೈದರಾಬಾದ್ ಗೆ ತೆರಳಲು ಜಿಲ್ಲಾಧಿಕಾರಿಗಳು ಅವಕಾಶ ನೀಡುವಂತೆ ಶಾಂತಮ್ಮ ಕುಟುಂಬದವರು ಉದಯವಾಣಿ ಜತೆ ಮಾತನಾಡಿ ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ