ಲಾಕ್ ಡೌನ್ ನಡುವೆ ರೈತ ಸಮುದಾಯದ ಆತ್ಮವಿಶ್ವಾಸಕ್ಕೆ ಬಿ ಎಸ್ ಯಡಿಯೂರಪ್ಪ ಅಭಿನಂದನೆ
Team Udayavani, Apr 22, 2020, 4:23 PM IST
ಬೆಂಗಳೂರು: ಕೋವಿಡ್-19 ನಡುವೆಯೂ ರಾಜ್ಯದಲ್ಲಿ ಕೃಷಿ ಚಟುವಟಿಕೆ ಸಕ್ರಿಯವಾಗಿದ್ದು, ಶೇಕಡಾ 80ಕ್ಕೂ ಹೆಚ್ಚಿನ ಪ್ರಮಾಣದ ಬೆಳೆ ಕಟಾವು ಆಗಿದೆ. ಹೀಗಾಗಿ ರೈತ ಸಮುದಾಯವನ್ನು ಅಭಿನಂದಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಬಿ ಎಸ್ ಯಡಿಯೂರಪ್ಪ, ಲಾಕ್ ಡೌನ್ ನಡುವೆಯೂ ರಾಜ್ಯದಲ್ಲಿ ಕೃಷಿ ಚಟುವಟಿಕೆ ಪ್ರಗತಿಯಲ್ಲಿರುವ ಬಗ್ಗೆ ವರದಿ ಬಂದಿದೆ. ಇದು ನಮ್ಮ ರೈತರ ಆತ್ಮವಿಶ್ವಾಸದ ಪ್ರತೀಕವಾಗಿದೆ ಎಂದಿದ್ದಾರೆ.
ಅನೇಕ ಜಿಲ್ಲೆಗಳಲ್ಲಿ ಶೇ.80ಕ್ಕೂ ಹೆಚ್ಚು ಪ್ರಮಾಣದಲ್ಲಿ ಬೆಳೆ ಕಟಾವು ನಡೆದಿದ್ದು, ಇದು ಆಹಾರದ ಕೊರತೆ ನಮ್ಮನ್ನು ಬಾಧಿಸದಿರುವುದರ ಸಂಕೇತವಾಗಿದೆ. ಇದಕ್ಕಾಗಿ ಇಡೀ ರೈತ ಸಮುದಾಯವನ್ನು ಅಭಿನಂದಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಮ್ಮ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.