‘ಏ ದೇಶ್ ಮೇರೆ ತೂ ಜೀತಾ ರಹೇ’: ಕೇಸರಿ ಚಿತ್ರದ ಈ ರಿಮಿಕ್ಸ್ ಹಾಡು ಕೋವಿಡ್ ಯೋಧರಿಗೆ ಗೌರವ
ಕೇಸರಿ ಚಿತ್ರದ ‘ತೇರೆ ಮಿಟ್ಟೀ ಮೆ ಮಿಲ್ ಜಾವಾ..’ ಹಾಡಿಗೆ ಹೊಸ ರೂಪ ನೀಡಿ ಕೋವಿಡ್ ಯೋಧರಿಗೆ ಗೌರವ ಸಲ್ಲಿಸಿದ ಐಟಿಬಿಪಿ ಪಡೆ
Team Udayavani, Apr 29, 2020, 4:30 PM IST
ನವದೆಹಲಿ: ನಟ ಅಕ್ಷಯ್ ಕುಮಾರ್ ಅಭಿನಯದ ಸೂಪರ್ ಹಿಟ್ ಹಿಂದೀ ಚಿತ್ರ ‘ಕೇಸರಿ’ಯಲ್ಲಿ ತೇರೆ ಮಿಟ್ಟೀ ಮೆ ಮಿಲ್ ಜಾವಾ…’ ಎಂಬ ಹಾಡೊಂದು ಭಾರೀ ಜನಪ್ರಿಯಗೊಂಡಿತ್ತು. ತಾಯ್ನಾಡಿನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿಯ ಹಾಡು ಇದಾಗಿತ್ತು.
ಇದೀಗ ದೇಶವನ್ನು ಕಾಡುತ್ತಿರುವ ಕೋವಿಡ್ 19 ವೈರಸ್ ಮಹಾಮಾರಿಯ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಕೋವಿಡ್ ಆರೋಗ್ಯ ಯೋಧರಿಗೆ ಈ ಹಾಡಿನ ಧಾಟಿಯಲ್ಲೇ ಹೊಸ ಹಾಡೊಂದನ್ನು ಹಾಡುವ ಮೂಲಕ ಐಟಿಬಿಪಿ (ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್) ಪಡೆಯ ಯುವ ಯೋಧರೊಬ್ಬರು ವಿಶಿಷ್ಟ ನಮನವನ್ನು ಸಲ್ಲಿಸಿದ್ದಾರೆ.
ए देश मेरे तू जीता रहे…
आईटीबीपी जवान अर्जुन खेरियल द्वारा देश के कोरोना योद्धाओं को समर्पित
Dedicated to #CoronaWarriors by ITBP jawan Arjun Kheriyal#Covid19#ITBP
A TRIBUTE | Arjun kheriyal ft. Honey sandhu | B praak | Arko | Manoj Muntashir I Honey Sandhu Sandbeat studios pic.twitter.com/MphAPmwi6h— ITBP (@ITBP_official) April 29, 2020
‘ಏ ದೇಶ್ ಮೇರಾ ತೂ ಜೀತಾ ರಹೇ’ ಎಂದು ಪ್ರಾರಂಭವಾಗುವ ಈ ಹಾಡಿನಲ್ಲಿ ಕೋವಿಡ್ ವೈರಸ್ ವಿರುದ್ಧ ನಿಂತು ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ಇತರೇ ಆರೋಗ್ಯ ಯೋಧರನ್ನು ಸ್ಮರಿಸಿಕೊಳ್ಳಲಾಗಿದೆ.
‘ಓ ನನ್ನ ದೇಶವೇ ನೀನೆಂದು ವಿಜಯೀಭವ, ನೀನು ಸಾಕಿರುವುದು ಸಿಂಹದ ತಾಕತ್ತುಳ್ಳ ಮಕ್ಕಳನ್ನು, ಇವರಲ್ಲಿ ಒಬ್ಬರ ಬಲಿದಾನವಾದರೆ ಏನಂತೆ, ಇಂತಹ ಸಾವಿರ ಸಾವಿರ ಜನ ನಿನ್ನ ಒಡಲಲ್ಲಿ ಇದ್ದಾರೆ’ ಎಂದು ಪ್ರಾರಂಭವಾಗುವ ಈ ಹಾಡು ಸಂಕಷ್ಟದ ಕಾಲದಲ್ಲಿ ಕಾಣದ ವೈರಾಣುವಿನ ವಿರುದ್ಧ ಹೋರಾಡುತ್ತಿರುವ ಲಕ್ಷಾಂತರ ಆರೋಗ್ಯ ಯೋಧರಿಗೆ ಸ್ಪೂರ್ತಿಯಾಗಿದೆ.
ITBP ಪಡೆಯ ಯುವ ಹೆಡ್ ಕಾನ್ ಸ್ಟೇಬಲ್ ಅರ್ಜುನ್ ಖೇರಿಯಾಲ್ ಹಾಡಿರುವ ಈ ತುಣುಕನ್ನು ITBP ತನ್ನ ಅಧಿಕೃತ ಟ್ಟಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ