ಹೊಸ ಸಿನಿಮಾ ಸ್ಟೋರಿ ಆಫ್ ರಂಗಶಂಕರ
ಇದು ಶಂಕರ್ನಾಗ್ ಕಥೆನಾ?
Team Udayavani, May 2, 2020, 11:02 AM IST
ಕನ್ನಡ ಚಿತ್ರರಂಗ ಕಂಡ ಅದ್ಭುತ ಪ್ರತಿಭೆ ಶಂಕರ್ನಾಗ್. ಇಂದಿಗೂ ಅವರು ಅನೇಕ ಸಿನಿಮಾಗಳಿಗೆ ಸ್ಪೂರ್ತಿ. ಹೊಸಬರ ಚಿತ್ರಗಳಲ್ಲಂತೂ ಅವರ ಛಾಯೆ ಇದ್ದೇ ಇರುತ್ತೆ. ಅವರ ಹೆಸರಿನ ಅನೇಕ ಸಿನಿಮಾಗಳು ಬಂದಿವೆ. ಈಗ ಮತ್ತೂಂದು ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗುತ್ತಿದೆ. ಅದರ ಹೆಸರು “ಸ್ಟೋರಿ ಆಫ್ ರಂಗಶಂಕರ ‘. ಈ ಸಿನಿಮಾವನ್ನು ಎ.ಆರ್.ಶಾನ್ ನಿರ್ದೇಶನ ಮಾಡಿದ್ದಾರೆ. ಗುರು ಜಗ್ಗೇಶ್ ಹೀರೋ. ಉಳಿದಂತೆ ಶೀತಲ್ ಶೆಟ್ಟಿ, ನೀತು ಇತರರು ಇದ್ದಾರೆ.
ಇನ್ನು, ಚಿತ್ರದ ಹೆಸರು ಕೇಳಿದವರಿಗೆ ಇದೊಂದು ಶಂಕರ್ನಾಗ್ ಅವರಿಗೆ ಸಂಬಂಧಿಸಿದ ಸಿನಿಮಾ ಇರಬಹುದಾ ಎಂಬ ಪ್ರಶ್ನೆ ಕಾಡುತ್ತದೆ. ಆದರೆ, ಇಲ್ಲೊಂದು ವಿಶೇಷವೂ ಇದೆ. ಸಿನಿಮಾ ಕುರಿತು ನಿರ್ದೇಶಕ ಎ.ಆರ್.ಶಾನ್ ಹೇಳುವುದು ಹೀಗೆ. “ಇದೊಂದು ಡಾರ್ಕ್ ಕಾಮಿಡಿ ಥ್ರಿಲ್ಲರ್ ಸಿನಿಮಾ. ಈಗಾಗಲೇ ಸಿನಿಮಾ ಚಿತ್ರೀಕರಣ ಮುಗಿದಿದ್ದು, ಈಗ ಹಿನ್ನೆಲೆ ಸಂಗೀತ ಕೆಲಸದಲ್ಲಿ ನಿರತವಾಗಿದೆ. ಹಿಂದೆ ನಾನು “ಬಾಸು ಅದೇ ಹಳೇ ಕಥೆ ‘ ಸಿನಿಮಾ ಮಾಡಿದ್ದೆ. ಅದಾದ ನಂತರ “ಆರ್ಜಿವಿ’ ಸಿನಿಮಾ ಮಾಡಿದ್ದೆ. ಅದು ಡಬ್ಬಿಂಗ್ನಲ್ಲಿದೆ. ಈಗ “ಸ್ಟೋರಿ ಆಫ್ ರಂಗಶಂಕರ ‘ ಸಿನಿಮಾ ಮಾಡಿದ್ದೇನೆ. ಇಲ್ಲಿ ಆ್ಯಕ್ಸಿಡೆಂಟ್ ವಿಷಯ ಹೈಲೈಟ್ ಆಗಿದೆ. ಆ ಮೂಲಕವೇ ಕಥೆ ಸಾಗಲಿದೆ. ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಸಿನಿಮಾದಲ್ಲಿ ಎಲ್ಲವೂ ಇದೆ ಎನ್ನುತ್ತಾರೆ ಶಾನ್.
ಚಿತ್ರದಲ್ಲಿ ಹೊಸ ಪ್ರತಿಭೆ ರಜನೀಶ್, ಬ್ಯಾಂಕ್ ಜನಾರ್ದನ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪ್ರವೀಣ್ ಸೇರಿದಂತೆ ಇತರರು ಇದ್ದಾರೆ. ಇನ್ನು ರೈಟ್ ಬ್ರದರ್ಸ್ ಸ್ಟುಡಿಯೋ ಮೂಲಕ ಲಾಯಡ್ ಎಸ್ ಫರ್ನಾಂಡೀಸ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣಗೊಂಡಿದೆ. ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನದ ಜವಾಬ್ದಾರಿಯೂ ಶಾನ್ ಅವರದೇ. ಚಿತ್ರಕ್ಕೆ ಯೋಗಿ ಛಾಯಾಗ್ರಹಣವಿದೆ. ಕೌಶಿಕ್ ಹರ್ಷ ಮೂರು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ವಿಕ್ರಮ್ ಮೋರ್ ಸಾಹಸವಿದೆ. ಮುಂದಿನ ತಿಂಗಳು ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಬಿಸಿಲ ಧಗೆ ಎಫೆಕ್ಟ್; ಔಟ್ಡೋರ್ ಶೂಟಿಂಗ್ನಿಂದ ಸಿನಿಮಂದಿ ದೂರ
Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
MUST WATCH
ಹೊಸ ಸೇರ್ಪಡೆ
ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ
ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ