ಬ್ರೇಕ್ ದಿ ಚೈನ್: 2ನೇ ಹಂತದ ಚಟುವಟಿಕೆ ಆರಂಭ
Team Udayavani, May 5, 2020, 6:17 AM IST
ಕಾಸರಗೋಡು: ಬ್ರೇಕ್ ದಿ ಚೈನ್ ಅಭಿಯಾನದ ಎರಡನೇ ಹಂತವಾಗಿರುವ “ಮುಂದುವರಿ ಯಲಿದೆ ಈ ಜಾಗೃತೆ’ ಚಟು ವಟಿಕೆಗಳು ಕಾಸರಗೋಡು ಜಿಲ್ಲೆ ಯಲ್ಲಿ ಆರಂಭಗೊಂಡಿದೆ. ರಾಜ್ಯ ಸರಕಾರ, ಸಮಾಜ ನೀತಿ ಇಲಾಖೆ, ಮಹಿಳಾ ಶಿಶು ಕಲ್ಯಾಣ ಇಲಾಖೆ, ಕೇರಳ ಸಮಾಜ ಸುರಕ್ಷೆ ಮಿಷನ್ ವತಿಯಿಂದ ಕಾರ್ಯಕ್ರಮ ನಡೆಯುತ್ತಿದೆ.
ಈ ನಿಟ್ಟಿನಲ್ಲಿ 13,500 ಭಿತ್ತಿಪತ್ರಗಳು, 20 ಕಿಯಾಸ್ಕ್ಗಳನ್ನು ಜಿಲ್ಲೆಯಲ್ಲಿ ವಿತರಣೆ ನಡೆಸಲಾಗಿದೆ.
ಎಲ್ಲ ಗ್ರಾಮ ಪಂಚಾಯತ್ ಗಳಲ್ಲಿ, ನಗರಸಭೆಗಳಲ್ಲಿ, ಸಾರ್ವಜನಿಕ ಕೇಂದ್ರಗಳಲ್ಲಿ, ಅಂಚೆ ಕಚೇರಿಗಳಲ್ಲಿ, ಪೊಲೀಸ್ ಠಾಣೆಗಳಲ್ಲಿ, ಅಂಗನವಾಡಿಗಳಲ್ಲಿ ಇತ್ಯಾದಿ ಕಡೆ ಭಿತ್ತಿಪತ್ರ ಲಗತ್ತಿಸಲಾಗುವುದು. ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಚ್ಚುವರಿ ದಂಡನಾಧಿಕಾರಿ ಎನ್. ದೇವಿದಾಸ್ ಅವರು ಪಂಚಾಯ ತ್ ಡೆಪ್ಯುಟಿ ಡೈರೆಕ್ಟರ್ ಅವರಿಗೆ ಭಿತ್ತಿಪತ್ರ ಮತ್ತು ಕಿಯಾಸ್ಕ್ಗಳನ್ನು ಹಸ್ತಾಂತರಿಸಿದರು. ಕೇರಳ ಸಮಾಜ ಸುರಕ್ಷೆ ಮಿಷನ್ ಜಿಲ್ಲಾ ಸಂಚಾಲಕ ಜಿಷೋ ಜೇಮ್ಸ್, ಸಹಾಯಕ ಸಂಚಾಲಕರಾದ ಅಶ್ರಫ್, ರಾಜೇಶ್ ಉಪಸ್ಥಿತರಿದ್ದರು