ಹಾಸ್ಟೇಲ್ನಲ್ಲಿ ಕ್ವಾರಂಟೈನ್ -ಪ್ರತಿಭಟನೆ
Team Udayavani, May 11, 2020, 1:32 PM IST
ಭದ್ರವತಿ: ಹೊಸ ಸಿದ್ದಾಪುರದ ಬಾಲಕರ ಹಾಸ್ಟೆಲ್ ಮುಂದೆ ಸ್ಥಳೀಯರು ಪ್ರತಿಭಟಿಸಿದರು.
ಭದ್ರಾವತಿ: ಹಸಿರು ವಲಯ ಎಂದು ಗುರುತಿಸಲ್ಪಟ್ಟಿದ್ದ ಜಿಲ್ಲೆಯಲ್ಲಿ 8 ಜನ ಕೋವಿಡ್ ಸೋಂಕಿತ ತಬ್ಲೀಘಿಗಳು ಬಂದಿರುವ ಸುದ್ದಿ ನಾಗರಿಕರಲ್ಲಿ ಆತಂಕ ಸೃಷ್ಟಿಸಿದ್ದು, ಅವರಿಗೆ ಸ್ಥಳೀಯ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಬಾರದೆಂದು ಸ್ಥಳೀಯರು ಪ್ರತಿಭಟನೆ ನಡೆಸಿದರು.
ಭದ್ರಾವತಿಯಿಂದ ಕೇವಲ 18ಕಿ.ಮೀ. ದೂರದಲ್ಲಿರುವ ಶಿವಮೊಗ್ಗಕ್ಕೆ ಪ್ರತಿನಿತ್ಯ ಜನರು ತೆರಳುತ್ತಾರೆ. ಈಗ ಲಾಕ್ಡೌನ್ ತೆರವಾದ ನಂತರ ಜನರ ಪ್ರಯಾಣ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ 8ಮಂದಿ ಕೊರೊನಾ ಸೋಂಕಿತರಿಗೆ ಭದ್ರಾವತಿಯ ವಿವಿಧೆಡೆಗಳಲ್ಲಿ ಕ್ವಾರಂಟೈನ್ ನಲ್ಲಿಡುತ್ತಾರೆ ಎಂಬ ಸುದ್ದಿ ಜನರ ಆತಂಕಕ್ಕೆ ಪ್ರಮುಖ ಕಾರಣವಾಗಿದೆ.
ಹಾಸ್ಟೆಲ್ಗೆ ಬೀಗ ಹಾಕಿ ಪ್ರತಿಭಟನೆ: ಕೋವಿಡ್ ಸೋಂಕಿತರಿಗೆ ಭದ್ರಾವತಿಯ ವಿವಿಧೆಡೆಗಳಲ್ಲಿರುವ ವಿದ್ಯಾರ್ಥಿಗಳ ಹಾಸ್ಟೆಲ್ಗಳಲ್ಲಿ ಕ್ವಾರೆಂಟೈನ್ನಲ್ಲಿಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂಬ ಸುದ್ದಿ ಹಬ್ಬಿದ ಹಿನ್ನೆಲೆಯಲ್ಲಿ ಹಾಸ್ಟೆಲ್ ಮುಂದೆ ಜಮಾಯಿಸಿದ ಸ್ಥಳೀಯರು, ಇಲ್ಲಿ ಅವರನ್ನು ಕ್ವಾರೆಂಟೈನ್ನಲ್ಲಿ ಇಡಬಾರದು. ಅವರಿಗೆ ಬೇರೆಡೆ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟಿಸಿದ್ದಾರೆ. ಹೊಸ ಸಿದ್ದಾಪುರದಲ್ಲಿರುವ ಸಾರ್ವಜನಿಕ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಅಲ್ಲಿನ ನಿವಾಸಿಗಳು ಬೀಗ ಹಾಕಿ ಇಲ್ಲಿ ಯಾರನ್ನೂ ಕ್ವಾರೆಂಟೈನ್ ನಲ್ಲಿಡಬಾರದು ಎಂದು ಆಗ್ರಹಿಸಿ ಪ್ರತಿಭಟಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅವ್ಯವಸ್ಥೆ… ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ
Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!
Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ
Shimoga; ಪ್ಲಾಸ್ಟಿಕ್ ನುಂಗಿದ್ದ ಹಾವು ರಕ್ಷಣೆ
BJPಯಲ್ಲಿ ನನಗೆ ಅನ್ಯಾಯವಾದಾಗ ರಘುಪತಿ ಭಟ್ ಸ್ಪರ್ಧೆ ಬೇಡ ಅಂದಿದ್ದರು: ಆಯನೂರು