26/11 ಮಾದರಿ ದಾಳಿಗೆ ಲಷ್ಕರ್ ಸಂಚು
ಭೂಗತ ಪಾತಕಿ ದಾವೂದ್ ಸಹಕಾರ; ಐಎಸ್ಐ ಕೈವಾಡ ಶಂಕೆ
Team Udayavani, May 12, 2020, 6:15 AM IST
ಹೊಸದಿಲ್ಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜತೆ ಕೈಜೋಡಿಸಿರುವ ಲಷ್ಕರ್-ಎ-ತಯ್ಯಬಾ ಉಗ್ರಗಾಮಿ ಸಂಘಟನೆಯು 26/11ರ ಮುಂಬಯಿ ದಾಳಿಯ ಮಾದರಿಯಲ್ಲೇ ಮತ್ತೂಂದು ಭಯೋ ತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದೆ ಎಂಬ ಆತಂಕಕಾರಿ ವಿಚಾರವನ್ನು ಗುಪ್ತಚರ ಮೂಲಗಳು ಬಯಲು ಮಾಡಿವೆ.
ಲಷ್ಕರ್ ಮತ್ತು ದಾವೂದ್ ಜತೆಯಾಗಿ ರೂಪಿಸುತ್ತಿರುವ ಈ ಸಂಚಿನ ಹಿಂದೆ ಪಾಕ್ ಗೂಢಚರ ಸಂಸ್ಥೆ ಐಎಸ್ಐ ಕೈವಾಡ ಇರುವ ಶಂಕೆಯನ್ನು ಗುಪ್ತಚರ ಮೂಲಗಳು ವ್ಯಕ್ತ ಪಡಿಸಿವೆ. ಇಸ್ಲಾಮಾಬಾದ್ನಲ್ಲಿರುವ ತನ್ನ ಫಾರ್ಮ್ ಹೌಸ್ಗೆ ಐಎಸ್ಐಯ ಕೆಲವು ಸದಸ್ಯರೊಂದಿಗೆ ದಾವೂದ್ ರವಿವಾರ ಬಂದು ಹೋಗಿದ್ದಾನೆ ಎನ್ನಲಾಗಿದೆ. ಈ ಬೆಳವಣಿಗೆಯಿಂದಾಗಿ ಗುಪ್ತಚರ ಸಂಸ್ಥೆಗಳ ಅನುಮಾನ ಮತ್ತಷ್ಟು ಬಲವಾಗಿದೆ.
ಉದ್ದೇಶ ಏನು?
ಭಾರತದ ಭದ್ರತಾ ಪಡೆಗಳು ಕೋವಿಡ್-19 ಸೋಂಕಿನ ಪರಿಸ್ಥಿತಿ ನಿಭಾಯಿಸುವತ್ತ ಗಮನಹರಿಸಿರುವ ಈ ಸಂದರ್ಭದಲ್ಲಿ ಹಲವು ನಗರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಮೂಲಕ ದೇಶದಲ್ಲಿ ಅಶಾಂತಿ ಸೃಷ್ಟಿಸುವುದು ಐಎಸ್ಐಯ ಉದ್ದೇಶ. ದಾಳಿಗೆ ಅಗತ್ಯ ಶಸ್ತ್ರಾಸ್ತ್ರಗಳನ್ನು ಸಮುದ್ರದ ಮೂಲಕ ಗುಜರಾತ್ ಯಾ ಮಹಾರಾಷ್ಟ್ರಕ್ಕೆ ಕಳುಹಿಸುವುದು ಲಷ್ಕರ್ ಮುಖಂಡರ ಯೋಜನೆ. ಲಷ್ಕರ್ ಮುಖಂಡ ಅಬ್ದುಲ್ ರೆಹಮಾನ್ ಮಕ್ಕಿ ಇತ್ತೀಚೆಗೆ ಕರಾಚಿಗೆ ಭೇಟಿ ನೀಡಿ ದಾವೂದ್ನನ್ನು ಭೇಟಿಯಾಗಿ ಮುಂದಿನ ನಡೆ, ಕ್ರಮಗಳ ಬಗ್ಗೆ ಚರ್ಚಿಸಿದ್ದಾನೆ ಎಂದು ತಿಳಿದುಬಂದಿದೆ.
ಇದೇ ವೇಳೆ ಹಂದ್ವಾರದಲ್ಲಿ ಭಾರತೀಯ ಸೇನೆಯ ಮೇಜರ್ ಹುತಾತ್ಮರಾದ ಬಳಿಕ ಭಾರತ ತನ್ನ ಮೇಲೆ ದಾಳಿ ನಡೆಸಬಹುದು ಎಂಬ ಭಯದಿಂದ ಪಾಕಿಸ್ಥಾನವು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.
ದಾವೂದ್ ಪಾತ್ರವೇನು?
ದಾಳಿಗೆ ಅಗತ್ಯ ಶಸ್ತ್ರಾಸ್ತ್ರ,ಸ್ಫೋಟಕಗಳನ್ನು ಲಷ್ಕರ್ ಸರಬರಾಜು ಮಾಡಲಿದ್ದು,ಭಾರತದಲ್ಲಿ ಇರುವ “ಡಿ ಕಂಪೆನಿ’ ಸದಸ್ಯರು ದಾಳಿ ನಡೆ ಯುವ ನಗರಗಳಿಗೆ ತಲುಪಿಸುವ ಜತೆಗೆ ದಾಳಿ ಕೂಡ ನಡೆಸಬೇಕು ಎಂಬುದು ಯೋಜನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ