ಉಡುಪಿಯಿಂದ 600 ಮಂದಿ ವಲಸೆ ಕಾರ್ಮಿಕರು
ಬಿಹಾರಕ್ಕೆ ಮಂಗಳೂರಿನಿಂದ ರೈಲು
Team Udayavani, May 16, 2020, 5:45 AM IST
ಉಡುಪಿ: ಮಂಗಳೂರಿನಿಂದ ಬಿಹಾರಕ್ಕೆ ಶುಕ್ರವಾರ ಸಂಜೆ ತೆರಳಿದ ರೈಲಿಗೆ ಉಡುಪಿ ಜಿಲ್ಲೆಯಲ್ಲಿ ಉಳಿದಿದ್ದ 600 ಮಂದಿಯನ್ನು 15 ಕೆಎಸ್ಸಾರ್ಟಿಸಿ ಬಸ್ ಮೂಲಕ ಶುಕ್ರವಾರ ಮಧ್ಯಾಹ್ನ ಕಳುಹಿಸಲಾಯಿತು.
ಬಿಹಾರಕ್ಕೆ ಮಂಗಳೂರಿನಿಂದ ರೈಲು ಮೂಲಕ ಕಳುಹಿಸಲಾಯಿತು. ಪರ್ಕಳ ಉಡುಪಿ ಮೊದಲಾದ ಭಾಗದಲ್ಲಿ ಉಳಿದಿದ್ದ ಮಂದಿಯನ್ನು ಎಂಜಿಎಂ ಕಾಲೇಜ್ ಮೈದಾನದಿಂದ ಶುಕ್ರವಾರ ಮಧ್ಯಾಹ್ನ 11 ಬಸ್ನಲ್ಲಿ ಒಂದು ಬಸ್ನಲ್ಲಿ 40 ಮಂದಿಯಂತೆ 440 ಮಂದಿ ಮತ್ತು ಕಾರ್ಕಳದಿಂದ 4 ಬಸ್ನಲ್ಲಿ ಒಂದು ಬಸ್ಗೆ 40 ಮಂದಿಯಂತೆ 160 ಮಂದಿ ಒಟ್ಟಿಗೆ ಜಿಲ್ಲೆಯಿಂದ 600 ಮಂದಿ ವಲಸೆ ಕಾರ್ಮಿಕರನ್ನು ಮಂಗಳೂರಿನ ಕಂಕನಾಡಿ ರೈಲ್ವೆ ನಿಲ್ದಾಣಕ್ಕೆ ಬಿಡಲಾಯಿತು.
ಉಡುಪಿ ಎಂಜಿಎಂ ಕಾಲೇಜಿನ ಮೈದಾ ನದಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಕಡಿಯಾಳಿ ಗಣೇಶೋತ್ಸವ ಸಮಿತಿಯಿಂದ ಮಾಡಲಾಯಿತು.
ಶಾಸಕ ಕೆ.ರಘುಪತಿ ಭಟ್, ನೋಡಲ್ ಅಧಿಕಾರಿ ದಯಾನಂದ, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ನಗರಸಭಾ ಸದಸ್ಯ ಗಿರೀಶ್ ಎಂ. ಅಂಚನ್, ಸಮಿತಿ ಪದಾಧಿಕಾರಿಗಳಾದ ಕೆ.ರಾಘವೇಂದ್ರ ಕಿಣಿ, ಮಂಜುನಾಥ ಹೆಬ್ಟಾರ್, ವಿನಾಯಕ ಶೇಟ್, ವಿಪುಲ್ ಪ್ರಭು, ಶರಣ್ ಶೆಟ್ಟಿ, ಗಣೇಶ ಆಚಾರ್ಯ, ಸದ್ದಾಮ್, ಶಶಾಂಕ ನಾಯಕ್, ಮಂಜುನಾಥ ಮೊದಲಾದವರು ಉಪಸ್ಥಿತರಿದ್ದರು.
ತಪಾಸಣೆ
ಮುನ್ನೆಚ್ಚರಿಕ ಕ್ರಮವಾಗಿ ಥರ್ಮಲ್ ಮೀಟರ್ ಸ್ಕ್ರೀನಿಂಗ್ ಮಾಡುವ ಮೂಲಕ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಿ, ಸ್ಯಾನಿಟೈಸರ್, ಮಾಸ್ಕ್ ನೀಡಲಾಯಿತು. ಜತೆಗೆ ಸಾಮಾಜಿಕ ಅಂತರ ಕಾಯ್ದಿಕೊಂಡು ಪ್ರಯಾಣಿಕರು ಸರತಿಯ ಸಾಲಿನಲ್ಲಿ ಬಸ್ ಹತ್ತುವ ದೃಶ್ಯ ಕಂಡು ಬಂತು. ಕೆಲವೆಡೆ ಗುಂಪು ಸೇರಿದಾಗ ಪೊಲೀಸ್ ತಂಡ ಸಾಮಾಜಿಕ ಅಂತರ ನಿಯಂತ್ರಿಸುವಲ್ಲಿ ಸಹಕರಿಸಿತು.
15 ಬಸ್
ಶುಕ್ರವಾರ ಉಡುಪಿ ಕಾರ್ಕಳದಿಂದ 15 ಬಸ್ಗಳು ಸುಮಾರು 600ಮಂದಿ ಬಿಹಾರಿ ರಾಜ್ಯದ ವಲಸೆ ಕಾರ್ಮಿಕರನ್ನು ಮಂಗಳೂರಿನ ಕಂಕನಾಡಿ ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ಕಳುಹಿಸಲಾಗಿದೆ. ಎಲ್ಲ ತರಹದ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸಮಾಜಿಕ ಅಂತರ ಮೊದಲಾದ ನಿಯಮಗಳನ್ನು ಪಾಲಿಸಿ ಜನರನ್ನು ಬಸ್ನಲ್ಲಿ ಕರೆದೊಯ್ಯಲಾಗಿದೆ.
-ಉದಯಕುಮಾರ ಶೆಟ್ಟಿ, ಉಡುಪಿ ಕೆಎಸ್ಸಾರ್ಟಿಸಿ ಡಿಪೋ ಮ್ಯಾನೇಜರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಅಪಘಾತ
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ