ಕಲ್ಯಾಣ ನಿಧಿ: ನಿಲುವಿಗೆ ಕೋರ್ಟ್ ನಿರ್ದೇಶನ
Team Udayavani, May 16, 2020, 5:15 AM IST
ಬೆಂಗಳೂರು: ವಕೀಲರ ನೋಂದಾಯಿತ ಕ್ಲರ್ಕ್ಗಳ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವಂತೆ 2008ರಲ್ಲಿ ನೀಡಲಾದ ಆದೇಶ ಜಾರಿಗೆ ತರುವ ಬಗ್ಗೆ ನಿಲುವು ತಿಳಿಸುವಂತೆ ರಾಜ್ಯ ಸರ್ಕಾರ ಹಾಗೂ ರಾಜ್ಯ ವಕೀಲರ ಪರಿಷತ್ಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಲಾಕ್ಡೌನ್ ಪರಿಣಾಮ ಕೋರ್ಟ್ ಕಲಾಪಗಳು ಸ್ಥಗಿತಗೊಂಡು ಕೆಲಸ ಮತ್ತು ಆದಾಯವಿಲ್ಲದೆ ಸಂಕಷ್ಟದಲ್ಲಿರುವ ವಕೀಲರ ಕ್ಲರ್ಕ್ಗಳಿಗೆ ಆರ್ಥಿಕ ನೆರವು ಒದಗಿಸಲು 5 ಕೋಟಿ ರೂ. ಮೊತ್ತದ ಕಾರ್ಪಸ್ ನಿಧಿ ಸ್ಥಾಪಿಸುವಂತೆ ಕೋರಿ ರಾಜ್ಯ ವಕೀಲರುಗಳ ಕ್ಲರ್ಕ್ಗಳ ಸಂಘ ಸಲ್ಲಿಸಿದ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎ.ಎಸ್. ಓಕಾ ಹಾಗೂ ನ್ಯಾ. ವಿ. ಶ್ರೀಶಾನಂದ ಅವರಿದ್ದ ವಿಭಾಗೀಯ ಪೀಠ ಶುಕ್ರವಾರ ಈ ನಿರ್ದೇಶನ ನೀಡಿತು.
ವಿಚಾರಣೆ ವೇಳೆ ರಾಜ್ಯ ವಕೀಲರ ಪರಿಷತ್ ಪರ ವಕೀಲರು ಅರ್ಜಿ ಕುರಿತು ಕಾಲಾವಕಾಶ ಕೋರಿದರು. ಅದಕ್ಕೆ, ನೋಂದಾಯಿತ ಕ್ಲರ್ಕ್ಗಳ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವಂತೆ 2008ರಲ್ಲಿ ಹೈಕೋರ್ಟ್ ಆದೇಶ ನೀಡಿದೆ.