ಭತ್ತ ಮಾರಾಟಕ್ಕೆ 15ರೊಳಗೆ ಹೆಸರು ನೋಂದಾಯಿಸಿ
Team Udayavani, May 17, 2020, 6:19 AM IST
ಹೊನ್ನಾಳಿ: ಭತ್ತ ಖರೀದಿ ಕೇಂದ್ರಕ್ಕೆ ಭತ್ತ ಮಾರಾಟ ಮಾಡುವ ರೈತರು ಮೇ 15 ರೊಳಗಾಗಿ ಹೆಸರುಗಳನ್ನು ದೂರವಾಣಿ ಮೂಲಕ ನೋಂದಾಯಿಸಿಕೊಳ್ಳಬೇಕು ಎಂದು ಕೆಎಸ್ಎಫ್ಸಿ ಖರೀದಿ ಅಧಿಕಾರಿ ಷಣ್ಮುಗಸುಂದರಂ ಹೇಳಿದರು.
ಪಟ್ಟಣದ ಮಂಜುನಾಥ ರೈಸ್ಮಿಲ್ನಲ್ಲಿ ಗುರುವಾರ ಭತ್ತದ ಗುಣಮಟ್ಟ ಪರೀಕ್ಷಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಭತ್ತಕ್ಕೆ ದರ ಪ್ರತಿ ಕ್ವಿಂಟಾಲ್ಗೆ ಕೇಂದ್ರ ಸರ್ಕಾರ 1810 ರೂ. ಹಾಗೂ ರಾಜ್ಯ ಸರ್ಕಾರದಿಂದ 200 ರೂ. ಸೇರಿದಂತೆ ಒಟ್ಟು 2010 ರೂ. ದರ ನಿಗದಿಯಾಗಿದೆ. ಪ್ರತಿ ದಿನ ಖರೀದಿ ಕೇಂದ್ರಕ್ಕೆ ಬರುವ ಭತ್ತವನ್ನು ಮಿಲ್ನವರು ಪರೀಕ್ಷಿಸಿ ಖರೀದಿಸಬೇಕು. ಭತ್ತ ಖರೀದಿ ಕೇಂದ್ರಕ್ಕೆ ತರುವವರು ಮೊಬೈಲ್: 8310049626ಕ್ಕೆ ಕರೆ ಮಾಡಿ ಹೆಸರು ನೋಂದಾಯಿಸಬೇಕು ಎಂದರು.
ಮಂಜುನಾಥ ರೈಸ್ಮಿಲ್ ಮಾಲೀಕ ಎಚ್.ಎ. ಉಮಾಪತಿ ಮಾತನಾಡಿ, ಕಳೆದ ಎರಡು ದಿನಗಳಿಂದ ಭತ್ತ ಖರೀದಿ ಕೇಂದ್ರಕ್ಕೆ 550 ಕ್ವಿಂಟಾಲ್ ಭತ್ತ ಬಂದಿದೆ. ಗುರುವಾರ ಒಂದೇ ದಿನ ದಾವಣಗೆರೆ ತಾಲೂಕಿನಿಂದ 150 ಕ್ವಿಂಟಾಲ್ ಭತ್ತ ತರಲಾಗಿದೆ ಎಂದು ತಿಳಿಸಿದರು.
ಆಹಾರ ನಿರೀಕ್ಷಕ ನಾಗರಾಜ್, ಮುಖಂಡರಾದ ರಂಜಿತ್, ಭತ್ತ ಮಾರಾಟಗಾರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ