ಕಾಪು : ಸರಕಾರಿ ಕ್ವಾರೈಂಟೈನಲ್ಲಿರುವ ಅತಿಥಿಗಳಿಗೆ ಹೊಸ ಮಾರಿಗುಡಿ ವತಿಯಿಂದ ಊಟೋಪಚಾರ
Team Udayavani, May 22, 2020, 4:19 PM IST
ಕಾಪು : ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳಿಂದ ಕಾಪು ತಾಲೂಕಿಗೆ ಆಗಮಿಸಿ ಸರಕಾರಿ ಕ್ವಾರಂಟೈನ್ ನಲ್ಲಿರುವ ಅತಿಥಿಗಳಿಗೆ ಕಾಪು ಹೊಸ ಮಾರಿಗುಡಿ ವತಿಯಿಂದ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ.
ಕೋವಿಡ್ ಮುಂಜಾಗ್ರತಾ ಕ್ರಮವನ್ನು ಅನುಸರಿಸುವ ಅಂಗವಾಗಿ ಜಿಲ್ಲಾಡಳಿತ ಮತ್ತು ಸರಕಾರಿ ಆದೇಶದಂತೆ ತಾಲೂಕಿನ ವಿವಿಧ ಭಾಗದಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಕಾಪು ತಾಲೂಕಿನ ವಿವಿಧೆಡೆ ತಂಗಿರುವ ಎಲ್ಲಾ ಅತಿಥಿಗಳಿಗೆ ಕಾಪು ಹೊಸಮಾರಿಗುಡಿ ವತಿಯಿಂದ ಬೆಳಗ್ಗಿನ ಉಪಹಾರ, ಮಧ್ಯಾಹ್ನ ಊಟ, ಸಂಜೆಯ ಉಪಹಾರ ಮತ್ತು ರಾತ್ರಿ ಉತ್ತಮ ಗುಣಮಟ್ಟದ ರುಚಿ ಶುಚಿಯಾದ ಆಹಾರ ಒದಗಿಸುವ ಕಾರ್ಯ ನಡೆಸಲಾಗುತ್ತಿದೆ.
ಹೊಸ ಮಾರಿಗುಡಿಯ ಕಾರ್ಯನಿರ್ವಹಣಾ ಅಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಆಹಾರದ ಪೊಟ್ಟಣ ತಯಾರಿಸಲಾಗುತ್ತಿದ್ದು, ದೇಗುಲದ ಸಿಬ್ಬಂದಿಗಳು ಸಹಕರಿಸುತ್ತಿದ್ದಾರೆ.