ಗುಡ್ಡಗಾಡು ದಾಟಿ ಎಂಡೋ ಸಂತ್ರಸ್ತ ಮಗುವಿನ ಚಿಕಿತ್ಸೆ

ನೆರಿಯ: 30 ಮೀ. ರಸ್ತೆಗೆ 3 ವರ್ಷ ಅಲೆದಾಟ

Team Udayavani, May 23, 2020, 5:50 AM IST

ಗುಡ್ಡಗಾಡು ದಾಟಿ ಎಂಡೋ ಸಂತ್ರಸ್ತ ಮಗುವಿನ ಚಿಕಿತ್ಸೆ

ಬೆಳ್ತಂಗಡಿ: ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಕಂಡು ಬಂದರು ಎಂಡೋ ಸಂತ್ರಸ್ತರ ಬವಣೆಯಂತು ನಿರಂತರವಾಗಿ ಕಾಡುತ್ತಿದೆ. ಏತನ್ಮಧ್ಯೆ ನೆರಿಯದ ಕುಟುಂಬವೊಂದು ಸೌಲಭ್ಯಗಳಿಂದ ವಂಚಿತವಾಗುವುದರ ಜತೆಗೆ ಸೂಕ್ತ ಚಿಕಿತ್ಸೆ ಒದಗಿಸಲು ರಸ್ತೆ ಸಂಪರ್ಕ ಇಲ್ಲದೆ ಜೀವನ ಯಾತನೆ ಅನುಭವಿಸುತ್ತಿದೆ.

ತಾ|ನ ನೆರಿಯ ಗ್ರಾಮದ ಗಂಡಿಬಾಗಿಲು ಸಮೀಪದ ಮೇನಾಚೆರಿಲ್‌ ನಿವಾಸಿ ಜೋಯ್‌ ಜೋಸೆಪ್‌ ಅವರ ಮಗಳು ಸ್ಟಿನಾ ಜೋಸೆಫ್‌(9) ಎಂಡೋಪೀಡಿತೆಯಾಗಿದ್ದು ಹಾಸಿಗೆ ಹಿಡಿದಿದ್ದಾಳೆ. ಈ ಮಧ್ಯೆ ಜೋಯ್‌ ಅವರ ಪತ್ನಿ ಬಿಂದೂ ಜೋಯ್‌ ನರ ಸಂಬಂಧಿ ಕಾಯಿಲೆಯಿಂದ ಮಲಗಿದಲ್ಲಿಯೇ ಇದ್ದಾರೆ.

ಮಗಳು ಹಾಗೂ ಪತ್ನಿಯ ಅನಾರೋಗ್ಯದಿಂದ ದಿಕ್ಕೆಟ್ಟ ಜೋಯ್‌ ಅವರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಮೂವತ್ತು ವರ್ಷಗಳಿಂದಲೂ ಮೇನಾಚೆರಿಲ್‌ನಲ್ಲಿ ವಾಸವಿದ್ದು, ಸಮರ್ಪಕ ರಸ್ತೆ ವ್ಯವಸ್ಥೆಯಿಲ್ಲದೇ ಮಗಳ ಚಿಕಿತ್ಸೆಗೆ ಗುಡ್ಡಗಾಡು ದಾಟಿ ಬರಬೇಕಿದೆ.

ರಸ್ತೆ ಸಂಪರ್ಕಕ್ಕಾಗಿ ಮೂರು ವರ್ಷಗಳಿಂದ ಗ್ರಾ.ಪಂ.ನಿಂದ ಅಂಗವಿಕಲರ ಇಲಾಖೆ ಆಯುಕ್ತರ ವರೆಗೆ ಅಲೆದಾಡಿದ್ದಾರೆ. ಮಂಗಳೂರು ಮಾನವ ಹಕ್ಕು ಇಲಾಖೆ, ಕಾನೂನು ಪ್ರಾಧಿಕಾರಕ್ಕೂ ರಸ್ತೆ ಸಂಪರ್ಕ ಒದಗಿಸುವಂತೆ ಮನವಿ ನೀಡಿದ್ದಾರೆ. ಆದರೆ ಪ್ರಯತ್ನಗಳಾವುದೂ ಫಲ ನೀಡಿಲ್ಲ.

ತುರ್ತು ಸಂದರ್ಭ ಆಂಬ್ಯುಲೆನ್ಸ್‌ ಬರಲಸಾಧ್ಯ
ಇತ್ತ ಮಗಳು ಸ್ಟಿನಾ ಜೋಯ್‌ ನಿತ್ಯಕರ್ಮದಿಂದ ಹಿಡಿದು ಪ್ರತಿಯೊಂದಕ್ಕೂ ಮತ್ತೂಬ್ಬರನ್ನು ಅವಲಂಬಿಸಬೇಕಿದೆ.ಆಸ್ಪತ್ರೆಗೆ ಕರೆತರಲು ಜೀಪು ಬಾಡಿಗೆ 2 ಸಾವಿರ ರೂ. ನೀಡಬೇಕಿದೆ. ಮಳೆಗಾಲದಲ್ಲಂತೂ ಚರ್ಚ್‌, ಆಸ್ಪತ್ರೆ ಯಾವುದೇ ಅನಿವಾರ್ಯಕ್ಕೆ ಮೂರು ಕಿ.ಮೀ. ಸುತ್ತಿಬಳಸಿ ಗುಡ್ಡಗಾಡು ದಾಟಿ ಅಣಿಯೂರು, ಗಂಡಿಬಾಗಿಲು ತಲುಪಬೇಕಿದೆ. ಆ ಬಳಿಕವಷ್ಟೇ ಬೆಳ್ತಂಗಡಿ, ಮಂಗಳೂರು ಆಸ್ಪತ್ರೆ ಸೇರಬೇಕು.

30 ಮೀಟರ್‌ ರಸ್ತೆ
ಇವರ ಮನೆ ಸೇರಲು ಸಂಬಂಧಿಕರ ವರ್ಗಸ್ಥಳ ಅವಲಂಬಿಸಬೇಕಿದೆ. ಕರುಣೆಯಿಂದ 30 ಮೀ. ರಸ್ತೆ ಬಿಡಲು ಸಂಬಂಧಿಕರೇ ಒಪ್ಪುವ ಸ್ಥಿತಿಯಲ್ಲಿಲ್ಲ. ಈ ಕುರಿತು ಗ್ರಾ.ಪಂ. ತಹಶೀಲ್ದಾರ್‌ ಬಳಿ ಮನವಿ ಮಾಡಿದ್ದಾರೆ. ಕೋವಿಡ್-19 ಲಾಕ್‌ಡೌನ್‌ ಅನಂತರ ಕ್ರಮಕ್ಕೆ ಮುಂದಾಗುವುದಾಗಿ ಭರವಸೆ ನೀಡಿದ್ದಾರೆ ಎಂದು ಜೋಯ್‌ ಅಳಲು ತೋಡಿಕೊಂಡಿದ್ದಾರೆ.

ಕುಟುಂಬ ಸಂಕಷ್ಟದಲ್ಲಿದೆ
ರಸ್ತೆ ಇಲ್ಲದೆ ನಾನು ದುಡಿದ ಮೊತ್ತ ಆಸ್ಪತ್ರೆ, ವಾಹನ ಬಾಡಿಗೆಗೆ ಭರಿಸುವಂತಾಗಿದೆ. ವಾಹನ ಬರಲು 30 ಮೀ. ರಸ್ತೆ ಸಿಕ್ಕಿದರೆ ಸಾಕು. ಉಳಿದ ರಸ್ತೆಯನ್ನು ನಾನೇ ಅಗೆದು ಮಾಡಿದ್ದೇನೆ. ಅಂಗವಿಕಲರ ಮಾಸಿಕ ವೇತನ ಔಷಧಕ್ಕೂ ಸಾಲುತ್ತಿಲ್ಲ. ಭೂಮಿ ಅಭಿವೃದ್ಧಿ ಕೃಷಿ ಸಾಲ, ಮನೆ ಸಾಲ ಬಡ್ಡಿ ಸೇರಿ 5 ಲಕ್ಷ ರೂ. ಸಾಲವಿದೆ.
 -ಜೋಯ್‌ ಜೋಸೆಫ್, ಎಂಡೋ ಸಂತ್ರಸ್ತೆ ತಂದೆ

ಅಗತ್ಯ ಕ್ರಮ ತೆಗೆ ದುಕೊಳ್ಳಲಾಗುವುದು
ಜೋಯ್‌ ಅವರಿಗೆ ಸ್ಥಳೀಯ ನಿವಾಸಿ ಮೂಲ ವರ್ಗಸ್ಥಳದಿಂದ ರಸ್ತೆ ನೀಡಬೇಕಿದೆ. ಅಥವಾ ಅವರಿಗೆ ಖರೀದಿಸಿ ನೀಡುವ ಕುರಿತಾಗಿ ಗ್ರಾ.ಪಂ. ಹಾಗೂ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಖರೀದಿಗೆ ಅವಕಾಶವಿದ್ದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
 - ಗಣಪತಿ ಶಾಸ್ತ್ರಿ, ತಹಶೀಲ್ದಾರ್‌

ಟಾಪ್ ನ್ಯೂಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.