ಕರಾವಳಿಯಲ್ಲಿ ಇಂದು ಈದುಲ್ ಫಿತ್ರ
Team Udayavani, May 24, 2020, 10:35 AM IST
ಮಂಗಳೂರು/ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸಹಿತ ಪಶ್ಚಿಮ ಕರಾವಳಿಯ ಮುಸ್ಲಿಮರು ರವಿವಾರ ಈದುಲ್ ಫಿತ್ರ ಹಬ್ಬವನ್ನು ಆಚರಿಸಲಿದ್ದಾರೆ.
ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಲು ಮುಸ್ಲಿಂ ಧರ್ಮ ಗುರುಗಳು ಕರೆ ನೀಡಿದ್ದು, ಹಾಗೆಯೇ ಆಚರಿಸಲಾಗುತ್ತದೆ ಎಂದು ಮಂಗಳೂರಿನ ಖಾಝಿ ಅವರ ಪರವಾಗಿ ಎಸ್.ಎಂ. ರಶೀದ್ ಅವರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಎಲ್ಲ ಹಬ್ಬಗಳಂತೆ ಈದುಲ್ ಫಿತ್ರ ಕೂಡ ತರಹೇವಾರಿ ಖರೀದಿ, ಶುಭಾಶಯ ವಿನಿಮಯ ಇತ್ಯಾದಿಗಳ ಮೂಲಕ ಆರ್ಥಿಕ ಚಟುವಟಿಕೆ ಮತ್ತು ಸಾಮುದಾಯಿಕ ಚಲನಶೀಲತೆಗೆ ದೊಡ್ಡ ಮಟ್ಟದ ಕೊಡುಗೆ ನೀಡುವಂಥದ್ದು. ಆದರೆ ಈ ವರ್ಷ ಕೋವಿಡ್ ಹಾವಳಿ ಪವಿತ್ರ ರಮ್ಜಾನ್ ಹಬ್ಬದ ಪೂರ್ಣ ಸಡಗರದ ಆಚರಣೆಗೆ ಅಡ್ಡಿ ಮಾಡಿದೆ.
ಲಾಕ್ಡೌನ್ ಕಾರಣ ಮುಖಂಡರ ಮನವಿ ಮೇರೆಗೆ ಶುಕ್ರವಾರದ ಜುಮಾ ನಮಾಝ್, ಕೂಟು ಝಿಯಾರತ್ ಸಹಿತ ಬಟ್ಟೆ ಬರೆ ಖರೀದಿಯಿಂದಲೂ ದೂರ ಉಳಿದು ಸರಳ ರೀತಿಯಲ್ಲಿ ಹಬ್ಬ ಆಚರಿಸಲು ನಿರ್ಧರಿಸಲಾಗಿತ್ತು. ಕೋವಿಡ್-19 ಸೋಂಕು ತಡೆಗಟ್ಟಲು ಮುಂಜಾಗ್ರತೆ ಕ್ರಮವಾಗಿ ಮೇ 31ರ ತನಕ ಕೆಲವು ನಿರ್ಬಂಧಗಳಿರುವ ಕಾರಣ ಮುಸ್ಲಿಂ ಬಾಂಧವರು ಉಪವಾಸ ಸಂದರ್ಭ ಮನೆಗಳಲ್ಲೇ ಸಾಮೂಹಿಕ ಪ್ರಾರ್ಥನೆಗಳಲ್ಲಿ ನಿರತರಾಗಿದ್ದರು. ರವಿವಾರವೂ ಮನೆಗಳಲ್ಲಿ ಪ್ರಾರ್ಥನೆ ನಡೆಯಲಿದೆ.
ಬಟ್ಟೆ ಖರೀದಿಯಿಂದ ದೂರ
ರಮ್ಜಾನ್ ಹಬ್ಬದ ಸಂದರ್ಭದಲ್ಲಿ ಮನೆ ಮಂದಿಗೆಲ್ಲ ಹೊಸ ಬಟ್ಟೆಗಳನ್ನು ಖರೀದಿಸುವುದು ಹಲವಾರು ವರ್ಷಗಳಿಂದ ನಡೆದು ಬಂದ ಸಂಪ್ರದಾಯ. ಪವಿತ್ರ ರಮ್ಜಾನ್ ತಿಂಗಳ ಉಪವಾಸದ ಅಂತ್ಯದಲ್ಲಿ ಬರುವ ಈ ಹಬ್ಬದ ಸಲುವಾಗಿ ಹೊಸ ಬಟ್ಟೆ, ತೊಡುಗೆಗಳು ಮತ್ತು ಆಭರಣಗಳ ಖರೀದಿ ಪ್ರತೀ ವರ್ಷ ಜೋರಾಗಿರುತ್ತಿತ್ತು. ಆಹಾರ ಪದಾರ್ಥಗಳ ಖರೀದಿ ಎಲ್ಲೆಡೆ ನಡೆಯುತ್ತಿತ್ತು. ಮಾರುಕಟ್ಟೆಗಳು ತುಂಬಿ ತುಳುಕುತ್ತಿದ್ದವು. ಆದರೆ ಈ ಬಾರಿ ಅದೆಲ್ಲವೂ ಅಷ್ಟಾಗಿ ಬಿರುಸಿನಿಂದ ನಡೆದಿಲ್ಲ. ಕೋವಿಡ್ ನಿಂದಾಗಿ ಬಟ್ಟೆ ಬರೆ ಖರೀದಿಯಿಂದ ಮುಸ್ಲಿಮರು ದೂರ ಉಳಿದಿದ್ದರು.
ಸರಳ ಆಚರಣೆ
“ಕೋವಿಡ್ – ಲಾಕ್ಡೌನ್ ಹಿನ್ನೆಲೆಯಲ್ಲಿ ಈದುಲ್ ಫಿತ್ರ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಲು ನಿರ್ಧರಿಸಿದ್ದೇವೆ’ ಎಂದು ಮಂಗಳೂರಿನ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರು ಉದಯವಾಣಿಗೆ ತಿಳಿಸಿದ್ದಾರೆ.
“ಜಗತ್ತನ್ನೇ ವ್ಯಾಪಿಸಿರುವ ಕೋವಿಡ್ ಮಹಾ ರೋಗ ಆದಷ್ಟು ಬೇಗ ನಿರ್ಮೂಲನೆಗೊಳ್ಳಲಿ ಎಂಬುದಾಗಿ ಈ ಸಂದರ್ಭದಲ್ಲಿ ದೇವರಲ್ಲಿ ಪ್ರಾರ್ಥಿಸುತ್ತೇವೆ. ಎಲ್ಲರಿಗೂ ಈದ್ ಹಬ್ಬದ ಶುಭಾಶಯಗಳು’ ಎಂದವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಅಪಘಾತ
MUST WATCH
ಹೊಸ ಸೇರ್ಪಡೆ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ