ದೇಶಕ್ಕೊಬ್ಬನೇ ಮುಖ್ಯ ದಂಡನಾಯಕ


Team Udayavani, May 30, 2020, 6:05 PM IST

ದೇಶಕ್ಕೊಬ್ಬನೇ ಮುಖ್ಯ ದಂಡನಾಯಕ

ದೇಶದ ಮೊದಲ ಸಿಡಿಎಸ್‌ ಆಗಿ ನೇಮಕಗೊಂಡಿರುವ ಜನರಲ್‌ ಬಿಪಿನ್‌ ರಾವತ್‌,

ಭಾರತದ ಸೇನಾರಂಗದಲ್ಲಿ ಹೊಸ ಬೆಳವಣಿಗೆಗಳ ಸಾಲಿನಲ್ಲಿ ಚೀಫ್ ಆಫ್ ದ ಡಿಫೆನ್ಸ್‌ ಸ್ಟಾಫ್ (ಸಿಡಿಎಸ್‌) ಹುದ್ದೆಯ ಸೃಜನೆಯಾಗಿದೆ. ಮೂರೂ ಸೇನೆಗಳ ನಡುವೆ ಸಮನ್ವಯ ಸಾಧಿಸುವುದಕ್ಕಾಗಿ ಈ ಹುದ್ದೆಯನ್ನು ಹುಟ್ಟುಹಾಕಲಾಗಿದೆ.

ಅಗತ್ಯವೇನು?
ಸ್ವಾತಂತ್ರ್ಯಾನಂತರ ದೇಶ ಕಂಡ ಇದುವರೆಗಿನ ಯುದ್ಧಗಳಲ್ಲಿ (1962, 1971, 1999) ಮೂರೂ ಪಡೆಗಳ ನಡುವೆ ಸಮನ್ವಯದ ಕೊರತೆಯಿಂದ ಕೆಲವೊಂದು ಆಡಳಿತಾತ್ಮಕ ತೊಡಕುಗಳು ಕಂಡು ಬಂದಿದ್ದವು.

ಸೈನ್ಯದ ಕಾರ್ಯತಂತ್ರಗಳ ಕುರಿತಂತೆ ರಕ್ಷಣಾ ಸಚಿವರು, ಪ್ರಧಾನಿಗೆ ಸಿಂಗಲ್‌ – ಪಾಯಿಂಟ್‌ ಮಿಲಿಟರಿ ಸಲಹೆಗಾರರಾಗಿ ಸಿಡಿಎಸ್‌ ಕಾರ್ಯನಿರ್ವಹಿಸುತ್ತಾರೆ. ಮೂರು ಪಡೆಗಳ ನಡುವೆ ಕೊಂಡಿಯಾಗಿ ದೀರ್ಘ‌ಕಾಲಿಕ ಯೋಜನೆಗಳು, ತರಬೇತಿ, ಇತ್ಯಾದಿ ಎಲ್ಲಾ ವಿಧದಲ್ಲೂ ಸಿಡಿಎಸ್‌ ಹುದ್ದೆ ಪ್ರಯೋಜನಕ್ಕೆ ಬರುತ್ತದೆ.

ಮಹಾ ದಂಡನಾಯಕರಾಗಿ ರಾಷ್ಟ್ರಪತಿ ಇದ್ದರೂ, ಅವರು ಸಾಂವಿಧಾನಿಕ ಮುಖ್ಯಸ್ಥರು. ಸ್ವತಃ ಸೈನ್ಯದಲ್ಲಿ ಕಾರ್ಯನಿರ್ವಹಿಸಿದ ಅನುಭವವ ಇರುವುದರಿಂದ ಅದರ ಆಧಾರದಲ್ಲಿ ‘ಕಾರ್ಯಕಾರಿ ಮುಖ್ಯಸ್ಥರು’ ಎಂಬ ನೆಲೆಯಲ್ಲಿ ಸಿಡಿಎಸ್‌ ಪ್ರಮುಖರಾಗುತ್ತಾರೆ.

ಸಿಡಿಎಸ್‌ ಇಲ್ಲದ ಹಿಂದಿನ ವ್ಯವಸ್ಥೆ ಹೇಗಿತ್ತು?
ಈ ಹಿಂದೆ ಭಾರತದಲ್ಲಿ ಎಲ್ಲ ರಕ್ಷಣಾ ಪಡೆಗಳಿಗೆ ಪ್ರಧಾನ ಮುಖ್ಯಸ್ಥರು ಚೇರ್‌ಮ್ಯಾನ್‌ ಆಫ್ ಚೀಪ್ಸ್ ಆಫ್ ಸ್ಟಾಫ್ ಕಮಿಟಿ (ಸಿಒಎಸ್‌ಸಿ). ವಾಯುಪಡೆಯ ಮುಖ್ಯಸ್ಥ ಏರ್‌ ಚೀಫ್ ಮಾರ್ಷಲ್‌ ಬಿರೇಂದರ್‌ ಸಿಂಗ್‌ ಧನೋವಾ ಅವರು ಸಿಒಎಸ್‌ಸಿ ಆಗಿದ್ದರು (ಈಗ ನಿವೃತ್ತರಾಗಿದ್ದಾರೆ) ಅತಿ ಹಿರಿಯ ಅಧಿಕಾರಿ ಸಿಒಎಸ್‌ಸಿ ಆಗುತ್ತಾರೆ (ನಿವೃತ್ತಿವರೆಗೆ).

ಆದರೆ ಇದೊಂದು ಹೆಚ್ಚುವರಿ ಜವಾಬ್ದಾರಿಯಾಗಿದ್ದು, ಅವಧಿಯೂ ಅಲ್ಪವಾಗಿರುತ್ತದೆ. 2012ರಲ್ಲಿ ನರೇಶ್‌ ಚಂದ್ರ ಟಾಸ್ಕ್ಫೋರ್ಸ್‌ ಕಮಿಟಿ ಶಾಶ್ವತ ಸಿಒಎಸ್‌ಸಿ ನೇಮಕಕ್ಕೆ ಶಿಫಾರಸು ಮಾಡಿತ್ತಾದರೂ, ಅದು ಕಾರ್ಯಗತಗೊಂಡಿರಲಿಲ್ಲ.

ಏನಿದು ಸಿಡಿಎಸ್‌?
ದೇಶದ ರಕ್ಷಣೆಗಾಗಿ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆ ಎಂಬ ಮೂರು ಪ್ರಮುಖ ಪಡೆಗಳಿವೆ. ಭೂಸೇನೆಗೆ ಜನರಲ್‌, ವಾಯುಸೇನೆಗೆ ಏರ್‌ ಚೀಫ್ ಮಾರ್ಷಲ್‌ ಮತ್ತು ನೌಕಾಸೇನೆಗೆ ಅಡ್ಮಿರಲ್‌ ಮುಖ್ಯಸ್ಥರು. ಈ ಮೂರೂ ಸೇನೆಗಳ ಮಹಾದಂಡನಾಯಕರಾಗಿ ರಾಷ್ಟ್ರಪತಿಗಳು ಕಾರ್ಯನಿರ್ವಹಿಸುತ್ತಾರೆ.

ಮಹಾದಂಡನಾಯಕರ ಹೊರತಾಗಿ ಸೇನೆಗಳ ನಡುವೆ ಉತ್ತಮ ಸಂವಹನ, ಸಮನ್ವಯ ಸಾಧಿಸಿ ಅವನ್ನು ಮುನ್ನಡೆಸಲು ಓರ್ವ ‘ಮುಖ್ಯ ದಂಡನಾಯಕ’ರ ಅಗತ್ಯ ಇದೆ ಎಂಬ ಆಲೋಚನೆ ಸರಕಾರದ್ದಾಗಿತ್ತು. ಸಿಡಿಎಸ್‌ ನೇಮಕದ ಮೂಲಕ ಅದು ಈಗ ಸಾಕಾರಗೊಂಡಿದೆ.

ಯಾವೆಲ್ಲ ದೇಶದಲ್ಲಿ ಸಿಡಿಎಸ್‌ ಇದೆ?
ಯುನೈಟೆಡ್‌ ಕಿಂಗ್‌ಡಮ್‌, ಕೆನಡಾ, ಫ್ರಾನ್ಸ್‌, ಇಟಲಿ ಇತ್ಯಾದಿ ದೇಶಗಳಲ್ಲಿ ಸಿಡಿಎಸ್‌ ಇದೆ. ಕೆಲವೆಡೆ ಹೆಸರು ಬೇರೆಯಾದರೂ ಕಾರ್ಯ ಒಂದೇ. ಇಟಲಿ, ಸ್ಪೇನ್‌, ಯು.ಕೆ., ಕೆನಡಾದಲ್ಲಿ ಚೀಫ್ ಆಫ್ ದ ಡಿಫೆನ್ಸ್‌ ಸ್ಟಾಫ್, ಫ್ರಾನ್ಸ್‌ನಲ್ಲಿ ಚೀಫ್ ಆಫ್ ಸ್ಟಾಫ್ ಆಫ್ ದ ಆರ್ಮೀಸ್‌, ಚೀನದಲ್ಲಿ ಚೀಫ್ ಆಫ್ ದ ಜನರಲ್‌ ಸ್ಟಾಫ್, ಜಪಾನ್‌ನಲ್ಲಿ ಚೀಫ್ ಆಫ್ ಸ್ಟಾಫ್, ಜಾಯಿಂಟ್‌ ಸ್ಟಾಫ್ ಎಂದು ಸಿಡಿಎಸ್‌ ಹುದ್ದೆಯನ್ನು ಕರೆಯಲಾಗುತ್ತದೆ. ಪಾಕಿಸ್ಥಾನದಲ್ಲೂ ಈ ಹುದ್ದೆ ಇದೆ ಎಂಬುದು ಗಮನಾರ್ಹ.

20 ವರ್ಷಗಳ ಪ್ರಸ್ತಾವನೆ
1999ರ ಯುದ್ಧಾನಂತರ ಉನ್ನತ ಸೇನಾ ಸುಧಾರಣೆಗಳಿಗಾಗಿ ರಚಿಸಿದ ಕಾರ್ಗಿಲ್‌ ರಿವ್ಯೂ ಕಮಿಟಿಯು ಮಾಡಿದ ಪ್ರಮುಖ ಶಿಫಾರಸುಗಳಲ್ಲಿ ಸಿಡಿಎಸ್‌ ಹುದ್ದೆಯೂ ಒಂದು. 2016ರ ಡಿಸೆಂಬರ್‌ನಲ್ಲಿ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಡಿ.ಬಿ. ಶೇಕತ್ಕರ್‌ ಕಮಿಟಿ ಮಾಡಿದ 99 ಶಿಫಾರಸುಗಳಲ್ಲೂ ಇದು ಇತ್ತು. ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಕಾಲದಲ್ಲಿ ಈ ಬಗ್ಗೆ ಪ್ರಸ್ತಾವ ಇಡಲಾಗಿತ್ತು. ಆಗಿನ ಉಪಪ್ರಧಾನಿ ಎಲ್‌.ಕೆ. ಅಡ್ವಾಣಿ ಅವರ ನೇತೃತ್ವದ ಸಚಿವರ ಸಮಿತಿ ಇದನ್ನು ಶಿಫಾರಸು ಮಾಡಿತ್ತು.

ಹಿಂದೆ ಇತ್ತು 5 ಸ್ಟಾರ್‌ ಹುದ್ದೆ
ಭೂಸೇನೆಯಲ್ಲಿ ಫೀಲ್ಡ್‌ ಮಾರ್ಷಲ್‌, ವಾಯುಸೇನೆಯಲ್ಲಿ ಮಾರ್ಷಲ್‌ ಆಫ್ ದ ಏರ್‌ಫೋರ್ಸ್‌, ನೌಕಾಸೇನೆಯಲ್ಲಿ ಅಡ್ಮಿರಲ್‌ ಆಫ್ ದ ಫ್ಲೀಟ್‌: ಈ ಮೂರೂ 5 ಸ್ಟಾರ್‌ ರ್‍ಯಾಂಕ್‌ಗಳು. ಇವರಿಗೆ ನಿವೃತ್ತಿ, ಪಿಂಚಣಿ ಇಲ್ಲ. ಆಜೀವ ಪರ್ಯಂತ ಸೇವಾವಧಿ ಇದ್ದು, ಇತರ ಅಧಿಕಾರಿಗಳಂತೆಯೇ ಅಧಿಕೃತ ಕಾರ್ಯಕ್ರಮಗಳಲ್ಲಿ ಸಂಪೂರ್ಣ ಸಮವಸ್ತ್ರಧಾರಿಗಳಾಗಿರಬೇಕು.

ಇದುವರೆಗೆ ಈರ್ವರು ಫೀಲ್ಡ್‌ ಮಾರ್ಷಲ್‌ಗ‌ಳು ಆಗಿ ಹೋಗಿದ್ದಾರೆ (ಸ್ಯಾಮ್‌ ಮಾಣೆಕ್‌ ಷಾ, ಕೆ.ಎಂ. ಕಾರ್ಯಪ್ಪ). ಓರ್ವ ಮಾರ್ಷಲ್‌ ಆಫ್ ದ ಏರ್‌ಫೋರ್ಸ್‌ (ಅರ್ಜನ್‌ ಸಿಂಗ್‌) 2017ರಲ್ಲಿ ನಿಧನರಾಗಿದ್ದಾರೆ. ಅಡ್ಮಿರಲ್‌ ಆಫ್ ದ ಫ್ಲೀಟ್‌ ಹುದ್ದೆಗೆ ಯಾರೂ ಏರಿಲ್ಲ. ಈಗ ಈ ಮೂರೂ ಹುದ್ದೆಗಳು ಚಾಲ್ತಿಯಲ್ಲಿಲ್ಲ. ಇವರ ಅನಂತರದ 4 ಸ್ಟಾರ್‌ ರ್‍ಯಾಂಕ್‌ಗಳು ಈಗ ಸರ್ವೋಚ್ಚ. ಈ ಸ್ಟಾರ್‌ಗಳು ಅಧಿಕಾರಿಯ ಸಮವಸ್ತ್ರದ ಕೊರಳ ಪಟ್ಟಿಯಲ್ಲಿ ಇರುತ್ತವೆ.

ಬಿಪಿನ್‌ ರಾವತ್‌
ಭೂಸೇನಾ ಮುಖ್ಯಸ್ಥರಾಗಿದ್ದ ಜನರಲ್‌ ಬಿಪಿನ್‌ ರಾವತ್‌ ಅವರನ್ನು ನಿವೃತ್ತಿಗೂ ಮೊದಲೇ ದೇಶದ ಮೊದಲ ಸಿಡಿಎಸ್‌ ಆಗಿ ನೇಮಕ ಮಾಡಲಾಯಿತು. ಬಿಪಿನ್‌ ರಾವತ್‌ ಅವರು 2016ರ ಡಿಸೆಂಬರ್‌ 31ರಂದು ಭೂಸೇನೆಯ 27ನೇ ಮುಖ್ಯಸ್ಥರಾಗಿ (ಜನರಲ್) ನೇಮಕವಾಗಿದ್ದರು. ಜನರಲ್‌ ಆಗಿ ನೇಮಕಗೊಳ್ಳುವ ಮೊದಲು ಅಂದರೆ, 2016ರ ಸೆಪ್ಟೆಂಬರ್‌ 1ರಿಂದ ಉಪಮುಖ್ಯಸ್ಥರಾಗಿದ್ದರು.

1978ರಲ್ಲಿ ಭೂಸೇನೆಯ 11ನೇ ಗೂರ್ಖಾ ರೈಫ‌ಲ್ಸ್‌ನ 5ನೇ ಬೆಟಾಲಿಯನ್‌ಗೆ ಸೇರುವ ಮೂಲಕ ಭಾರತೀಯ ಸೇನೆಗೆ ಪದಾರ್ಪಣೆ ಮಾಡಿದ್ದರು. ಭಾರತ-ಚೀನಾ ನಡುವಿನ ‘ಲೈನ್‌ ಆಫ್ ಆಕ್ಚ್ಯುವಲ್‌ ಕಂಟ್ರೋಲ್‌’ (ಎಲ್‌ಎಸಿ)  ಪೂರ್ವ ವಲಯದಲ್ಲಿ ಇನ್ಫಾಂಟ್ರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಕಾಶ್ಮೀರ ಕಣಿವೆಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.

— ಕುದ್ಯಾಡಿ ಸಂದೇಶ್‌ ಸಾಲ್ಯಾನ್‌

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.