ಆಧುನಿಕತೆಯ ಭರಾಟೆಯಲ್ಲಿ ಕಳೆದು ಹೋದ ಆಟಗಳು


Team Udayavani, Jun 1, 2020, 7:59 PM IST

ಆಧುನಿಕತೆಯ ಭರಾಟೆಯಲ್ಲಿ ಕಳೆದು ಹೋದ ಆಟಗಳು

ಮನಸ್ತಾಪಗಳ ಮರೆಸಿ ಮನಸ್ಸುಗಳ ಒಂದಾಗಿಸುತ್ತಿದ್ದ ಆಟಗಳು, ಇಂದು ಮನಸ್ಸುಗಳನ್ನು ದೂರಮಾಡುತ್ತಿದೆ ಎಂದೆನಿಸುತ್ತಿದೆ. ನಾಲ್ಕು ಮಂದಿ ಸೇರಿ ಆಡುವ ಆಟಗಳ ಬದಲು ಮಾತೆ ಬಾರದ ಮೊಬೈಲ್‌, ಕಂಪ್ಯೂಟರ್‌ಗಳ ಜತೆಗೂಡಿ ಆಡುವ ಸ್ಥಿತಿ ಬಂದೊದಗಿದೆ. ಇದು ಸುಲಭವಾಗಿದ್ದರೂ, ತನ್ನ ರಸವನ್ನು ಕಳೆದುಕೊಂಡಿದೆ.

ಆಟಗಳ ಬಗ್ಗೆ ಪುರಾಣಗಳಲ್ಲೂ ಪ್ರಸ್ತಾವಗಳು ಇವೆ. ಅವು ಇಂದಿನ ಮಕ್ಕಳು ಕೇಳದ ಆಟಗಳು ಎನಿಸಿದರೂ, ಆಡದ ಆಟಗಳಂತೂ ಅಲ್ಲ. ಅಂದರೆ ಮುಖತಃ ಆಡದಿದ್ದರು, ತಾಂತ್ರಿಕತೆಯ ಮೂಲಕ ಆಡುತ್ತಿದ್ದಾರೆ. ಅಂದು ಮಹಾಭಾರತದ ತಿರುವಿಗೆ ಒಂದು ಕಾರಣವಾದ ಪಗಡೆ ಆಟ ಇಂದು ಲೂಡೋ ಆಗಿ ಮಾರ್ಪಾಡಾಗಿದೆ. ಹಾಗೇಯೆ ಮರಕೋತಿ “ಮಂಕಿ ಗೇಮ್ಸ್‌’ಗಳಾಗಿ, ಕಣ್ಣಾಮುಚ್ಚಾಲೆ “ಹೈಡೆಂಡ್‌ ಸಿಕ್‌ ಗೇಮ್ಸ್‌’ ಆಗಿದೆ. ಹೀಗೆ ಎಲ್ಲ ಆಟಗಳೂ ಹಳೆಯದ್ದೇ ಆದರೂ ಹೆಸರು ಮಾತ್ರ ಹೊಸದು.

ಮಕ್ಕಳಿಗೆ ಆಟ ಎಂದರೆ ಅಚ್ಚುಮೆಚ್ಚು ಎಂಬುದು ಬದಲಾಗದ ಮಾತು. ಬೆಳಗ್ಗೆಯಿಂದ ಸಂಜೆಯ ವರೆಗೂ ಆಡಲು ಬಿಟ್ಟರೆ ಅದೇ ಸ್ವರ್ಗ ಅವರಿಗೆ. ಕೆಲಸಕ್ಕೆಂದು ಕಳಿಸಿದರೂ ಅಲ್ಲಿ ಆಡುವ ಮಾರ್ಗವನ್ನು ಅವರು ಕಂಡುಕೊಳ್ಳುತ್ತಿದ್ದರು. ಅದಕ್ಕೆ ಹೇಳಿ ಮಾಡಿಸಿದ ಉದಾಹರಣೆ ಎಂದರೆ ಕೃಷ್ಣನ ಬಾಲ್ಯದ ಕಥೆಗಳು. ಈ ಆಟಗಳು ಮಕ್ಕಳಿಗೆ ನೇರವಾಗಿ ಉಪಯೋಗವಾಗುತ್ತದೆ ಎನಿಸದಿದ್ದರೂ ಅವುಗಳು ಕಲಿಸುತ್ತಿದ್ದ ಪಾಠ ಹಾಗೂ ನೀಡುತ್ತಿದ್ದ ನೆನಪುಗಳು ಅಪಾರವಾದುದು.

ಆಡುವ ಸಮಯದಲ್ಲಿ ಏಳು ಬೀಳು, ಸೋಲು ಗೆಲುವು, ಸುಖ ದುಃಖ, ಪ್ರೀತಿ ಹಾಗೂ ಸಂಬಂಧ, ಗೆಳೆತನ ಮುಂತಾದವನ್ನು ತಮಗರಿವಿಲ್ಲದೆ ಕಲಿಯುತ್ತಿದ್ದರು. ಹೀಗಾಗಿಯೇ ನಮ್ಮ ಹಿರಿಯರಲ್ಲಿ ಭಾವನೆಗಳಿಗೆ ಹೆಚ್ಚು ಬೆಲೆ ಇದ್ದದ್ದು. ಇಂದು ಮಕ್ಕಳು ಆಡಲು ಇಚ್ಚಿಸುತ್ತಾರೆ ನಿಜ. ಆದರೆ ಅದು ಜೀವವೇ ಇಲ್ಲದ ತಾಂತ್ರಿಕ, ಕೃತಕ ಸ್ನೇಹಿತನೊಂದಿಗೆ. ಆಡುವ ಆಟಗಳಲ್ಲಿ ಹೆಚ್ಚೇನು ವ್ಯತ್ಯಾಸವಿಲ್ಲ. ಹಾಗೇಂದು ಅದನ್ನು ಮೊದಲಿನ ಆಟಗಳಿಗೆ ಹೋಲಿಸಲು ಸಾಧ್ಯವಿಲ್ಲ. ಏಕೆಂದರೆ ಈ ಆಟಗಳು ಭಾವನೆಗಳನ್ನು ಕಲಿಸುವ ಬದಲಾಗಿ ಕೃತಕ ಬದುಕಿನತ್ತ ಕೊಂಡೊಯ್ಯುತ್ತಿದೆ. ಸೋತರೆ ಗೆಲ್ಲಲು ಹುರಿದುಂಬಿಸುವುದಿಲ್ಲ, “ಯು ಲೋಸ್ಟ್‌ ದಿ ಗೇಮ್‌’ ಎಂದು ಆತ್ಮವಿಶ್ವಾಸವನ್ನು ಇನ್ನೂ ಕುಗ್ಗಿಸುತ್ತದೆ. ಭಾಂದವ್ಯಗಳನ್ನು ಬೆಳೆಸುವುದಿಲ್ಲ. ಹೊರತಾಗಿ ಸಂಬಂಧಗಳ ನಡುವೆ ಮಾತನ್ನೇ ಮರೆಸುತ್ತದೆ.

ಆಡುವ ಆಟ ಬರೀ ಮನೋರಂಜನೆಗಾಗಿ ಅಲ್ಲ, ಮನಸ್ಸಿನ ನೆಮ್ಮದಿಗಾಗಿ ಎಂಬುದು ಬಹುತೇಕರಿಗೆ ಗೊತ್ತೇ ಇಲ್ಲ. ಆಟ ಪಾಠ ನಡೆಯಬೇಕಿದ್ದ ಜಾಗದಲ್ಲಿ ಇಂದು ತಾಂತ್ರಿಕ ಜೀವನದ ಭೋದನೆಯಾಗುತ್ತಿದೆ. ಹೆತ್ತವರು ಮಕ್ಕಳನ್ನು ಸ್ನೇಹಿತರೊಂದಿಗೆ ಬೆರೆಯುವುದನ್ನು ಕಲಿಸಬೇಕಾಗಿತ್ತು. ಆದರೆ ಅವರೇ ಇಂದು ಮೊಬೈಲ್‌, ಕಂಪ್ಯೂಟರ್‌ಗಳ ಮುಂದೆ ಮಕ್ಕಳನ್ನು ಹಿಡಿದು ಕೂರಿಸಿ ಅವರ ಸುಂದರ ಬಾಲ್ಯವನ್ನು ಬರಿದಾಗಿಸುತ್ತಿದ್ದಾರೆ.

-ಮೇಘ ಆರ್‌. ಸಾನಾಡಿ,
ವಿವೇಕಾನಂದ ಕಾಲೇಜು, ಪುತ್ತೂರು

ಟಾಪ್ ನ್ಯೂಸ್

 ಸ್ಮೃತಿ ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್‌ ಗೆ ಬಿಜೆಪಿ ತಿರುಗೇಟು

Smriti ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್‌ ಗೆ ಬಿಜೆಪಿ ತಿರುಗೇಟು

ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ

ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ

amit-shah

Belagavi; ನೇಹಾ ಹತ್ಯೆ ಪ್ರಕರಣ ಸಿಬಿಐಗೆ ಕೊಡಿ, ಆರೋಪಿಗಳ ತಲೆ ಕೆಳಗೆ ಮಾಡ್ತೀವಿ: ಶಾ ಗುಡುಗು

Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ

Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ

Gadag; ಬಿಜೆಪಿಗೆ ಹೆಚ್ಚಿನ ಮತ ಹಾಕಿಸಲು ಪ್ರಕೋಷ್ಠಗಳು ಶ್ರಮಿಸಬೇಕು: ಬಸವರಾಜ ಬೊಮ್ಮಾಯಿ

Gadag; ಬಿಜೆಪಿಗೆ ಹೆಚ್ಚಿನ ಮತ ಹಾಕಿಸಲು ಪ್ರಕೋಷ್ಠಗಳು ಶ್ರಮಿಸಬೇಕು: ಬಸವರಾಜ ಬೊಮ್ಮಾಯಿ

ಗ್ಯಾರೆಂಟಿ ಹೆಸರಲ್ಲಿ ದಲಿತರಿಗೆ ಕಾಂಗ್ರೆಸ್‌ ವಂಚನೆ: ನಾರಾಯಣಸ್ವಾಮಿ

Raichur; ಗ್ಯಾರಂಟಿ ಹೆಸರಲ್ಲಿ ದಲಿತರಿಗೆ ಕಾಂಗ್ರೆಸ್‌ ವಂಚನೆ: ನಾರಾಯಣಸ್ವಾಮಿ

ICC Men’s Test Team Rankings; Team India slipped to second place

ICC Men’s Test Team Rankings; ಎರಡನೇ ಸ್ಥಾನಕ್ಕೆ ಜಾರಿದ ಟೀಂ ಇಂಡಿಯಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

UV Fusion: ಮುದ ನೀಡಿದ ಕೌದಿ

13-uv-fusion

UV Fusion: ನಾವು ನಮಗಾಗಿ ಬದುಕುತ್ತಿರುವುದು ಎಷ್ಟು ಹೊತ್ತು?

12-uv-fusion

Spray fans: ಬಿಸಿ ಗಾಳಿಯೂ ತಂಪಾಯ್ತು

11-plastic

Eco-friendly Bio Plastic: ಪರಿಸರ ಸ್ನೇಹಿ ಮೆಕ್ಕೆಜೋಳದ ಬಯೋ ಪ್ಲಾಸ್ಟಿಕ್‌

15-uv-fusion

Nature: ಪ್ರಕೃತಿ ಮಾತೆಯೇ ನೀ ಏಕೆ ಮೌನವಾಗಿರುವೆ ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rishi; ರುದ್ರ ಗರುಡ ಪುರಾಣ ಫಸ್ಟ್ ಲುಕ್ ಬಿಡುಗಡೆ

Rishi; ರುದ್ರ ಗರುಡ ಪುರಾಣ ಫಸ್ಟ್ ಲುಕ್ ಬಿಡುಗಡೆ

 ಸ್ಮೃತಿ ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್‌ ಗೆ ಬಿಜೆಪಿ ತಿರುಗೇಟು

Smriti ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್‌ ಗೆ ಬಿಜೆಪಿ ತಿರುಗೇಟು

ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ

ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ

11-hunsur

Hunsur: ಉರುಳು ಹಾಕಿ ಜಿಂಕೆ ಕೊಂದು ಮಾಂಸ ಹೊತ್ತೊಯ್ಯುತ್ತಿದ್ದ ಇಬ್ಬರ ಬಂಧನ

amit-shah

Belagavi; ನೇಹಾ ಹತ್ಯೆ ಪ್ರಕರಣ ಸಿಬಿಐಗೆ ಕೊಡಿ, ಆರೋಪಿಗಳ ತಲೆ ಕೆಳಗೆ ಮಾಡ್ತೀವಿ: ಶಾ ಗುಡುಗು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.