ಹಾಕಿದ್ದ ದಿನವೇ ಕೊಚ್ಚಿಹೋಯ್ತು ಸಿಮೆಂಟ್ ಕಾಂಕ್ರೀಟ್
Team Udayavani, Jun 13, 2020, 6:25 AM IST
ಕಾರಟಗಿ: ಪಟ್ಟಣದ ಡಾ| ರಾಜ್ ಕಲಾ ಮಂದಿರದ ಬಳಿಯ ಚಿನಿವಾಲ ಆಸ್ಪತ್ರೆಯ ಮುಂಭಾಗದ ರಸ್ತೆಗೆ ಕಾಂಕ್ರೀಟ್ ಮಾಡಿದ್ದ ದಿನವೇ ಮಳೆ ಸುರಿದಿದ್ದು, ಸಿಮೆಂಟ್ ಕೊಚ್ಚಿಕೊಂಡು ಹೋಗಿ ಕಲ್ಲುಗಳು ಮೇಲೆದ್ದಿವೆ. ಇದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಮೂರ್ನಾಲ್ಕು ವರ್ಷಗಳ ಹಿಂದೆ ಡಾ| ರಾಜ್ ಕಲಾಮಂದಿರದ ಬಳಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿತ್ತು. ಆದರೆ ಚಿನಿವಾಲ ಆಸ್ಪತ್ರೆಯ ಮುಂಭಾಗದಲ್ಲಿ ಕಾಂಕ್ರೀಟ್ ಮಾಡುವುದನ್ನು ತಾಂತ್ರಿಕ ಕಾರಣಗಳಿಂದ ಬಿಡಲಾಗಿತ್ತು. ಕಳೆದ 8 ದಿನಗಳ ಹಿಂದೆ ಸಿಸಿ ನಿರ್ಮಿಸಲು ರಸ್ತೆಯ ಮಣ್ಣನ್ನು ಅಗೆದು ನಂತರ ಮರಂ ಹಾಕಿ ರೋಲರ್ನಿಂದ ಸಮತಟ್ಟು ಮಾಡಲಾಗಿತ್ತು. ಎರಡು ದಿನಗಳ ಹಿಂದೆ ಈ ರಸ್ತೆಗೆ ಕಾಂಕ್ರೀಟ್ ಹಾಕುತ್ತಿದ್ದಾಗ ಮಳೆ ಪ್ರಾರಂಭವಾಗಿದ್ದರೂ ಗುತ್ತಿಗೆದಾರರು ಕಾಂಕ್ರೀಟ್ ಹಾಕಿ ಹೋಗಿದ್ದಾರೆ. ಆದರೆ ನಂತರ ರಭಸದಿಂದ ಸುರಿದ ಮಳೆಗೆ ಸಿಮೆಂಟ್ ಕಿತ್ತು ಹೋಗಿದೆ. ಪುರಸಭೆ ಆಡಳಿತ ಕಾಮಗಾರಿ ವೀಕ್ಷಿಸಿ ಪುನಃ ಕಾಂಕ್ರೀಟ್ ಹಾಕಿಸಿ ರಸ್ತೆಯನ್ನು ಸಮತಟ್ಟಾಗಿ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮಳೆ ಬರುವ ಸಮಯದಲ್ಲಿ ಕಾಂಕ್ರೀಟ್ ಹಾಕಬಾರದಾಗಿತ್ತು. ರಸ್ತೆ ನಿರ್ಮಿಸುವುದು ಗುತ್ತಿಗೆದಾರನ ಹೊಣೆ. ಕಾಂಕ್ರೀಟ್ ಹಾಕಿದ ಸ್ಥಳ ಪರಿಶೀಲಿಸಿ ಸಮರ್ಪಕವಾಗಿ ರಸ್ತೆ ನಿರ್ಮಿಸಲು ಗುತ್ತಿಗೆದಾರರಿಗೆ ಸೂಚಿಸಲಾಗುವುದು. ರಸ್ತೆ ನಿರ್ಮಿಸಿದ ನಂತರ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಿ ಬಿಲ್ ಪಾವತಿಗೆ ಅನುಮತಿ ನೀಡಲಾಗುವುದು. -ಎನ್. ಶಿವಲಿಂಗಪ್ಪ, ಪುರಸಭೆ ಮುಖ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ