ಸ್ವಾರ್ಥಕ್ಕಾಗಿ ಪಕ್ಷ ಬಿಟ್ಟವರಿಗೆ ಉಳಿಗಾಲವಿಲ್ಲ
Team Udayavani, Jun 27, 2020, 6:22 AM IST
ಗೌರಿಬಿದನೂರು: ಸ್ವಾರ್ಥಕ್ಕಾಗಿ ತಾಲೂಕಿನ ಕೆಲ ಮುಖಂಡರು ಕಾಂಗ್ರೆಸ್ ಬಿಟ್ಟು ಹೊರ ನಡೆದಿದ್ದಾರೆ. ಇವರು ಪಕ್ಷದ ಚಿಹ್ನೆ ಅಡಿಯಲ್ಲಿ ಗೆದ್ದು ಅಧಿಕಾರ ಅನುಭವಿಸಿದವರು. ಸ್ವಾಭಿಮಾನವಿದ್ದರೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಲಿ, ಆಗ ಇವರ ನಿಜ ಬಣ್ಣ ಬಯಲಾಗಲಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಎನ್.ಎಸ್.ಭಾರ್ಗವರೆಡ್ಡಿ ಹೇಳಿದರು.
ತಾಲೂಕಿನ ಹೊಸೂರಿನ ಬಲಿಜ ಸಮುದಾಯ ಭವನದಲ್ಲಿ ನಡೆದ ಕಾಂಗ್ರೆಸ್ ಯುವ ಘಟಕದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಶಾಸಕರ ಸಹಾಯದಿಂದ ಎಲ್ಲ ಅಧಿಕಾರ, ಸವಲತ್ತು ಪಡೆದು ಈಗ ಅವರನ್ನು ಸ್ವಜನ ಪಕ್ಷಪಾತಿ ಎಂದು ಆರೋಪ ಮಾಡುವುದರಲ್ಲಿ ಹುರುಳಿಲ್ಲ. ಶಾಸಕರು ಎಲ್ಲ ವರ್ಗದ ಮುಖಂಡರ ಅರ್ಹತೆಗೆ ಅನುಗುಣವಾಗಿ ಅಧಿಕಾರ ನೀಡಿದ್ದಾರೆ.
ಹಣಕ್ಕಾಗಿ ಉದ್ಯಮಿ ಹಿಂದೆ ಹೋಗಿ ಪಕ್ಷ ಮತ್ತು ಶಾಸಕರ ವಿರುದ್ಧ ಆರೋಪ ಮಾಡುವುದು ಅವರಿಗೆ ಶೋಭೆಯಲ್ಲ ಎಂದರು.ತಾಪಂ ಅಧ್ಯಕ್ಷ ಆರ್. ಲೋಕೇಶ್ ಮಾತನಾಡಿ, ಈ ಭಾಗದ ಜಿಪಂ ಸದಸ್ಯ ಎಚ್ .ವಿ.ಮಂಜುನಾಥ್ ಅವರು ಕಾಂಗ್ರೆಸ್ ಪಕ್ಷದಿಂದ ಗೆದ್ದು ಜಿಪಂ ಅಧ್ಯಕ್ಷರಾಗಿ ಕ್ಷುಲ್ಲಕ ಕಾರಣಕ್ಕೆ ಪಕ್ಷ ತೊರೆದಿದ್ದಾರೆ ಎಂದು ದೂರಿದರು. ಹಿರಿಯ ಕಾಂಗ್ರೆಸ್ ಮುಖಂಡ ಬೊಮ್ಮಣ್ಣ ಮಾತನಾಡಿ, ಹೊಸೂರಿನ ಇತಿಹಾಸ ನೋಡಿದರೆ ದಶಕಗಳ ಹಿಂದೆ ಎಚ್.ವಿ.ಮಂಜುನಾಥ್ ಸೋತು ರಾಜಕೀಯ ನೇಪಥ್ಯಕ್ಕೆ ಸರಿದಿದ್ದರು.
ಶಾಸಕ ಶಿವಶಂಕರರೆಡ್ಡಿ ಅವರ ಸಹಕಾರದಿಂದ ಜಿಪಂ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿ ಕೆಳಗಿಳಿದ ಬಳಿಕ ಅವರ ವಿರುದ್ಧ ಮಾತನಾಡುವುದು ಸರಿಯೇ ? ಎಂದು ಪ್ರಶ್ನಿಸಿದರು. ಸಭೆಯಲ್ಲಿ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಂಜುನಾಥ್, ತಾಪಂ ಸದಸ್ಯ ನಾಗೇಶ್, ಮುಖಂಡ ಅಶ್ವತ್ಥಪ್ಪ, ಕೃಷ್ಣ, ಶ್ರೀಕಾಂತ್, ಖಾದರ್ ಸುಬಾನ್ ಖಾನ್, ವೆಂಕಟರಮಣ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ