ದೇಶಾದ್ಯಂತ 2023ಕ್ಕೆ ಓಡಲಿವೆ ಖಾಸಗಿ ರೈಲುಗಳು


Team Udayavani, Jul 3, 2020, 7:14 AM IST

ದೇಶಾದ್ಯಂತ 2023ಕ್ಕೆ ಓಡಲಿವೆೆ ಖಾಸಗಿ ರೈಲುಗಳು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ಭಾರತೀಯ ರೈಲ್ವೇ ಇಲಾಖೆಯು ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಖಾಸ­ಗೀ­ಕರಣಕ್ಕೆ ಮುಂದಾಗಿದೆ.

ಅದರ ಭಾಗವಾಗಿ, ದೇಶದ ಆಯ್ದ 109 ಜೋಡಿ ರೈಲು ಮಾರ್ಗ­ಗಳಲ್ಲಿ 151 ಅತ್ಯಾಧುನಿಕ ರೈಲುಗಳ ಸೇವೆ­ಯನ್ನು ನೀಡುವ ನಿಟ್ಟಿನಲ್ಲಿ ಖಾಸಗಿ ವಲಯ­ಗಳಿಂದ ಟೆಂಡರ್‌ ಆಹ್ವಾನಿಸಿದೆ.

ನಿರೀಕ್ಷೆಯಂತೆ ಎಲ್ಲವೂ ಕೈಗೂಡಿದರೆ, ಇಲಾ­ಖೆಗೆ 30,000 ಕೋಟಿ ರೂ. ಬಂಡವಾಳ ಹರಿದು­ಬರುವ ನಿರೀಕ್ಷೆಯಿದೆ.

ಕೇಂದ್ರ ಸರಕಾರ ಹಾಕಿ­ಕೊಂಡಿ­ರುವ ಗುರಿಯ ಪ್ರಕಾರ 2023ರ ಎಪ್ರಿಲ್‌ನಲ್ಲಿ ಖಾಸಗಿ ಕಂಪೆನಿಗಳ ರೈಲುಗಳು ಓಡಬೇಕಾ­ಗಿದೆ.

ವಿಮಾನ ಕಂಪೆನಿಗಳ ಟಿಕೆಟ್‌ಗಳಂತೆ ರೈಲು ಟಿಕೆಟ್‌ ಕೂಡ ಸ್ಪರ್ಧಾತ್ಮಕವಾಗಿ ಇರಲಿದೆ ಎಂದು ರೈಲ್ವೇ ಮಂಡಳಿ ಅಧ್ಯಕ್ಷ ವಿ.ಕೆ.ಯಾದವ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ರೈಲ್ವೇ ಇಲಾಖೆಯ ಖಾಸಗೀಕರಣಕ್ಕೆ ಕಳೆದ ವರ್ಷವೇ ಶ್ರೀಕಾರ ಹಾಕಲಾಗಿತ್ತು. ಐಆರ್‌ಸಿಟಿಸಿ ವತಿಯಿಂದ ಲಕ್ನೋ-ದೆಹಲಿ ಮಾರ್ಗ­ದಲ್ಲಿ ತೇಜಸ್‌ ಎಕ್ಸ್‌ಪ್ರೆಸ್‌ ಎಂಬ ರೈಲು ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿತ್ತು.

ವ್ಯವಹಾರ ಹೇಗೆ?: ದೇಶದ ರೈಲ್ವೇ ನೆಟ್‌
ವರ್ಕ್‌ನ 12 ಕ್ಲಸ್ಟರ್‌ಗಳ, 109 ನಿಲ್ದಾಣಗಳಿಂದ ಶುರುವಾಗುವ ಜೋಡಿ ಮಾರ್ಗಗಳಲ್ಲಿ 151 ಅತ್ಯಾಧುನಿಕ ರೈಲುಗಳು ಸೇವೆಗೆ ಇಳಿಯಲಿವೆ. ಪ್ರತಿ ಕಂಪೆನಿಗೆ ತಲಾ 3 ಕ್ಲಸ್ಟರ್‌ಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶವಿರಲಿದೆ. ಪ್ರತಿ­ಯೊಂದು ರೈಲಿನಲ್ಲಿ 16 ಕೋಚ್‌ಗಳು ಇರಲಿವೆ. ಪ್ರತಿ ರೈಲಿನ ಗರಿಷ್ಟ ವೇಗವನ್ನು ಗಂಟೆಗೆ 160 ಕಿ.ಮೀ.ಗಳಿಗೆ ನಿಗದಿಗೊಳಿಸ­ಲಾಗಿದೆ.

ಯಾವುದೇ ಖಾಸಗಿ ಕಂಪನಿಯು ರೈಲ್ವೇ ಇಲಾಖೆಯ ಜೊತೆಗೆ ಮಾಡಿಕೊಳ್ಳುವ ಒಪ್ಪಂದಕ್ಕೆ 35 ವರ್ಷದ ಕಾಲಾವಧಿ ಇರಲಿದೆ. ಪ್ರತಿ ರೈಲಿನ ಓಡಾಟಕ್ಕೆ ತಕ್ಕಂತೆ ಮಾರ್ಗ ಉಪಯೋಗಿ ಶುಲ್ಕ, ಇಂಧನ ಶುಲ್ಕವನ್ನು ಪಾವತಿಸಲಿದೆ. ಈ ರೈಲುಗಳ ಚಾಲಕ ಹಾಗೂ ಗಾರ್ಡ್‌ಗಳು ರೈಲ್ವೇ ಇಲಾಖೆಯವರೇ ಆಗಿರಲಿದ್ದಾರೆ.

ಶೇ.100 ಸಮಯ ಪಾಲನೆ ಮಾಡಿದ ರೈಲ್ವೇ
ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿ 201 ರೈಲುಗಳು ಸರಿಯಾದ ಸಮಯಕ್ಕೆ ಬಂದು ದಾಖಲೆ ನಿರ್ಮಿಸಿವೆ! ಈ ಐತಿಹಾಸಿಕ ಘಟನೆ ನಡೆದಿರುವುದು ಜು.1­ರಂದು. ಬುಧವಾರ ಎಲ್ಲ ರೈಲುಗಳು ಶೇ.100ರಷ್ಟು ಸಮಯ ಪಾಲನೆ ಮಾಡಿವೆ.

ಜೂ.23­ರಂದು ಶೇ.99.54ರಷ್ಟು ರೈಲುಗಳು ಸಮಯ­ಪಾಲನೆ ಮಾಡಿದ್ದು ಈ ಹಿಂದಿನ ದಾಖಲೆ­ಯಾಗಿತ್ತು. ಇದೀಗ ಎಲ್ಲ 201 ರೈಲುಗಳು ಸಮಯಕ್ಕೆ ಸರಿಯಾಗಿ ನಿಲ್ದಾಣ ತಲುಪಿವೆ ಮತ್ತು ಅಲ್ಲಿಂದ ಹೊರಟಿವೆ ಎಂದು ರೈಲ್ವೆ ಇಲಾಖೆ ಹೇಳಿದೆ.

ಪ್ರಸ್ತುತ ರೈಲ್ವೆಯ ಸಾಮಾನ್ಯ ಪ್ಯಾಸೆಂಜರ್‌ ರೈಲುಗಳು ರದ್ದಾ­ಗಿದ್ದು, ಅನಿ­ವಾರ್ಯ­ವಾಗಿ ಪ್ರಯಾಣ ಮಾಡಬೇಕಿ­ರುವವರಿಗೆ ಅನುಕೂಲ­ವಾಗು­ವಂತೆ ಆಯ್ದ ಕೆಲವು ಮಾರ್ಗಗಳಲ್ಲಿ ವಿಶೇಷ ರೈಲುಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿವೆ.

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.