ರೆಸಾರ್ಟ್, ಹೋಂ ಸ್ಟೇ ಮುಚ್ಚಿ
Team Udayavani, Jul 4, 2020, 6:37 AM IST
ಸಕಲೇಶಪುರ: ಸ್ಥಳೀಯರಿಗೂ ಪ್ರವಾಸಿಗರಿಗೂ ಸಂಘರ್ಷ ಉಂಟಾಗಬಾರದೆಂಬ ನಿಟ್ಟಿನಲ್ಲಿ ರೆಸಾರ್ಟ್ ಹಾಗೂ ಹೋಂ ಸ್ಟೇಗಳನ್ನು ಮುಚ್ಚಲು ಆದೇಶಿಸಲಾಗಿದೆ ಎಂದು ಸಚಿವ ಸಿ.ಟಿ.ರವಿ ಹೇಳಿದರು. ತಾಲೂಕಿನ ಪ್ರವಾಸಿ ಸ್ಥಳವಾದ ಮಂಜ್ರಾ ಬಾದ್ ಕೋಟೆಗೆ ಭೇಟಿ ನೀಡಿದ ನಂತರ ಮಾತನಾಡಿ, ಮಂಜ್ರಾಬಾದ್ ಕೋಟೆ ಸಕಲೇಶಪುರ ಭಾಗದಲ್ಲಿ ಪ್ರಮುಖವಾದ ಕೋಟೆ, ರೈನ್ ವಾಟರ್ ಹಾರ್ ವೆಸ್ಟಿಂಗ್ ಈ ಹಿಂದೆಯೇ ಮಾಡಿದ್ದಾರೆ.
ನಮ್ಮ ಪೂರ್ವಿಕರ ಜ್ಞಾನಕ್ಕೆ ಅಭಾರಿ ಯಾಗಿದ್ದೇನೆ. ಕೋಟೆಗೆ ಬರುವ ಕೆಲವು ಕಿಡಿಗೇಡಿಗಲ್ಲಿ ತಮ್ಮ ಹೆಸರನ್ನು ಕೆತ್ತುವುದರಿಂದ ಕೋಟೆ ಮೂಲ ಸ್ವರೂಪಕ್ಕೆ ಸ್ವಲ್ಪ ಧಕ್ಕೆಯಾಗಿದೆ. ಕಳೆದ ಬಾರಿ ಕೋಟೆಯ ಅಭಿವೃದ್ಧಿಗಾಗಿ ಸುಮಾರು 3 ಕೋಟಿ ರೂ. ಮೀಸಲಿಟ್ಟಿದ್ದರೂ ಕ್ರಿಯಾ ಯೋಜ ನೆ ಆಗದ ಕಾರಣ ಇನ್ನು ಅಭಿವೃದ್ಧಿ ಕಾರ್ಯಕೈಗೊಂಡಿಲ್ಲ. ತಕ್ಷಣ ಪುರಾತತ್ವ ಇಲಾಖೆ ವತಿಯಿಂದ ಅನುಮತಿ ಪಡೆದು ಕೋಟೆ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಹೇಳಿದರು.
ಪ್ರವಾಸೋದ್ಯಮಕ್ಕೆ ಕನಿಷ್ಠವೆಂದರೂ ಸುಮಾರು 7000 ಕೋಟಿ ರೂ.ನಷ್ಟು ನಷ್ಟವಾಗಿದೆ. ನೋಡು ಬಾ ನಮ್ಮೂರ ಯೋಜನೆಯಲ್ಲಿ ಬೆಳಕಿಗೆ ಬಾರದ ಪ್ರವಾಸಿ ಸ್ಥಳಗಳನ್ನು ಬೆಳಕಿಗೆ ತರಲಾಗುತ್ತಿದೆ ಎಂದು ತಿಳಿಸಿದರು. ಚಿಕ್ಕಮಗಳೂರಿಗೆ ಈಶ್ವರಪ್ಪನವರು ಬಂದಿರುವುದರ ಬಗ್ಗೆ ಮಾಹಿತಿ ಇಲ್ಲ, ಅಶೋಕ್ ಅವರು ಹಾಗೂ ಜಗದೀಶ್ ಶೆಟ್ಟರ್ ಅಧಿಕೃತವಾಗಿ ಚಿಕ್ಕಮಗಳೂರಿಗೆ ಬಂದಿದ್ದು ನಿಜ.
ಆದರೆ ಯಾವುದೇ ಸಭೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಉಪ ವಿಭಾಗಾಧಿಕಾರಿ ಗಿರೀಶ್ ನಂದನ್, ತಹ ಶೀಲ್ದಾರ್ ಮಂಜುನಾಥ್, ಇಒ ಹರೀಶ್, ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಬಿಜೆಪಿ ತಾಲೂಕು ಅಧ್ಯಕ್ಷ ಮಂಜುನಾಥ್ ಸಂ , ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಜಿತೇಂದ್ರ, ಪ್ರಸಾದ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Sandalwood: ಧೀರೇನ್ ರೀ ಇಂಟ್ರೊಡಕ್ಷನ್