ರೈತರಿಂದ ಭರ್ಜರಿ ಪ್ರಮಾಣದಲ್ಲಿ ರಸಗೊಬ್ಬರ ಖರೀದಿ: ಕೇಂದ್ರ
Team Udayavani, Jul 6, 2020, 10:55 AM IST
ಸಾಂದರ್ಭಿಕ ಚಿತ್ರ
ನವದೆಹಲಿ: ಕೋವಿಡ್ ಕಾರಣಕ್ಕೆ ಆರ್ಥಿಕಕ್ಷೇತ್ರಗಳಲ್ಲಿ ಮೋಡಕವಿದ ವಾತಾವರಣ, ಆತಂಕದ ಛಾಯೆಯಿದೆ. ಆದರೆ ದೇಶದ ಜಿಡಿಪಿಯಲ್ಲಿ ಮಹತ್ವದ ಪಾಲು ಹೊಂದಿರುವ ಕೃಷಿಕ್ಷೇತ್ರ ಮಾತ್ರ ಆಶಾವಾದದ ಕಥೆ ಹೇಳುತ್ತಿದೆ. ಈ ವರ್ಷ ಏಪ್ರಿಲ್-ಜೂನ್ ಅವಧಿಯಲ್ಲಿ ರೈತರು 111.61 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಖರೀದಿಸಿದ್ದಾರೆ. ಕಳೆದವರ್ಷದ ಇದೇ ಅವಧಿಯಲ್ಲಿ ಈ ಖರೀದಿ ಪ್ರಮಾಣ ಕೇವಲ 61.05 ಲಕ್ಷ ಮೆಟ್ರಿಕ್ ಟನ್ಗಳಿತ್ತು!
ಇದು ಶೇ.82ರಷ್ಟು ಏರಿಕೆ ಎಂದು ಕೇಂದ್ರ ರಸಗೊಬ್ಬರ ಇಲಾಖೆ, ರಾಸಾಯನಿಕ ಹಾಗೂ ರಸಗೊಬ್ಬರ ಸಚಿವಾಲಯ ಮಾಹಿತಿ ನೀಡಿದೆ. ರಸಗೊಬ್ಬರವನ್ನು ರೈತರು ಖರೀದಿ ಮಾಡಿರುವ ಪ್ರಮಾಣ ಗಮನಿಸಿದರೆ, ದೊಡ್ಡಪ್ರಮಾಣದಲ್ಲಿ ಕೃಷಿ ನಡೆದಿರುವ ಸುಳಿವು ಈಗಾಗಲೇ ಸಿಕ್ಕಿದೆ. ಒಟ್ಟಾರೆ ರೈತರು 64.82 ಲಕ್ಷ ಮೆಟ್ರಿಕ್ ಟನ್ ಗಳಷ್ಟು ಯೂರಿಯ, 22.46 ಲಕ್ಷ ಮೆಟ್ರಿಕ್ ಟನ್ಗಳಷ್ಟು ಡಿಎಪಿ, 24.32 ಲಕ್ಷ ಮೆಟ್ರಿಕ್ ಟನ್ಗಳಷ್ಟು ಕಾಂಪ್ಲೆಕ್ಸ್ ಗೊಬ್ಬರವನ್ನು ಖರೀದಿ ಮಾಡಿದ್ದಾರೆ. ಇದೆಲ್ಲ ಸಾಧ್ಯವಾಗಿದ್ದಕ್ಕೂ ಒಂದು ಕಾರಣವಿದೆ. ದೇಶದಲ್ಲಿ ದಿಗ್ಬಂಧನ ಹೇರಲಾಗಿದ್ದರೂ ಪೂರೈಕೆ ವ್ಯವಸ್ಥೆಯನ್ನು ಸರಿಯಾಗಿ ಕಾಪಾಡಿಕೊಳ್ಳಲಾಗಿತ್ತು. ಆದ್ದರಿಂದ ರೈತರು ಬಿತ್ತನೆ ಮಾಡುವ ಹಂತದಲ್ಲಿ ಗೊಬ್ಬರ ಪಡೆಯಲು ಅನುಕೂಲವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್ಗೆ ಭಾರಿ ಡಿಮ್ಯಾಂಡ್
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ